‘ಮುಖ್ಯಮಂತ್ರಿ ಗಂಜಿ ಕೇಂದ್ರ ತೆರೆದಿದ್ದಾರೆ’ ಎಂಬ ಎಚ್.ಡಿ. ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದ ರಾಯರಡ್ಡಿ, ‘ಮುಖ್ಯಮಂತ್ರಿಯಾಗಿದ್ದ ಅವರು ಬೇಜವಾಬ್ದಾರಿಯಿಂದ ಮಾತನಾಡಬಾರದು. ನಾನು ವೇತನ, ಭತ್ಯೆ, ಮನೆ ಏನನ್ನೂ ತೆಗೆದುಕೊಳ್ಳುವುದಿಲ್ಲ. ಶಾಸಕನಾಗಿ ಈವರೆಗೂ ಸಂಬಳ ಪಡೆದಿಲ್ಲ. ಹೀಗಿರುವಾಗ ನನಗೆ ಕೊಟ್ಟಿರುವ ಆರ್ಥಿಕ ಸಲಹೆಗಾರ ಹುದ್ದೆ ಗಂಜಿ ಕೇಂದ್ರ ಹೇಗೆ ಆಗಲಿದೆ’ ಎಂದರು.