<p><strong>ಬೆಂಗಳೂರು: </strong>‘ದುಬೈಯಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಭಾರತದ ಸೋಲಿಗೆ ತಂಡದ ವೇಗಿ ಬೌಲರ್ ಶಮಿ ಮೊಹಮ್ಮದ್ ಅವರನ್ನು ಹೊಣೆಗಾರರನ್ನಾಗಿಸಿ, ಸಾಮಾಜಿಕ ಜಾಲತಾಣಗಳಲ್ಲಿ ತುಚ್ಛೀಕರಿಸಿ ಭಾರತೀಯ ಪ್ರೇಕ್ಷಕರು ಯಾವುದೇ ಪಾಪಪ್ರಜ್ಞೆ ಇಲ್ಲದೆ ಮತಾಂಧತೆ ಪ್ರದರ್ಶಿಸಿದ್ದಾರೆ. ಕ್ರಿಕೆಟ್ನಲ್ಲೂ ʼಧರ್ಮʼದ ಆಟ ಸರಿಯೇ’ ಎಂದುಕೆಪಿಸಿಸಿ ವಕ್ತಾರ ಪ್ರೊ. ಬಿ.ಕೆ. ಚಂದ್ರಶೇಖರ್ ಪ್ರಶ್ನಿಸಿದ್ದಾರೆ.</p>.<p>‘ಅಂತರರಾಷ್ಟ್ರೀಯ ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಪಂದ್ಯಗಳ ಆರಂಭಕ್ಕೆ ಮೊದಲು ‘ಮಂಡಿಯೂರಿ ಕುಳಿತು’ ವರ್ಣಭೇದ ವಿರೋಧಿಸುವ ಮಾನವೀಯ ಮೌಲ್ಯದ ಪ್ರತಿಪಾದನೆ ಈಗ ಎಲ್ಲೆಡೆ ಜಾರಿಯಲ್ಲಿದೆ. ಈ ಮಧ್ಯೆ, ಇಂಥ ನಡವಳಿಕೆ ಎಷ್ಟು ಸರಿ’ ಎಂದಿದ್ದಾರೆ.</p>.<p>‘ಅದೇ ಅಭಿಮಾನಿಗಳು ಶಮಿ ಪರ ನಿಂತು ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಒಂಬತ್ತು ತಿಂಗಳ ಮಗಳ ಮೇಲೆ ಅತ್ಯಾಚಾರ ಮಾಡುವ ಪೈಶಾಚಿಕ ಸಂದೇಶ ರವಾನಿಸಿದ್ದಾರೆ. ಒಂದು ಧರ್ಮದವರ ವಿರುದ್ಧ ಈ ರೀತಿಯ ದ್ವೇಷದ ವಾತಾವರಣ ಹುಟ್ಟು ಹಾಕಿರುವುದು ಬಿಜೆಪಿ ಹಾಗೂ ಸಂಘ ಪರಿವಾರ ಸಂಘಟನೆಗಳೇ ಅಲ್ಲವೇ. ಅವರದೇ ಘೋಷ ವಾಕ್ಯದ ಪ್ರಕಾರ ಅವರು ‘ನಮ್ಮ ಸಂಸ್ಕೃತಿಯ ರಕ್ಷಕರು’’ ಎಂದು ಬಿಕೆಸಿ ವ್ಯಂಗ್ಯವಾಡಿದ್ದಾರೆ.</p>.<p>‘ಒಂಬತ್ತು ತಿಂಗಳ ಹೆಣ್ಣು ಕೂಸಿನ ವಿರುದ್ಧ ಈ ರೀತಿ ಆಲೋಚಿಸುವುದು ಭಾರತೀಯ ಸಂಸ್ಕೃತಿಯೇ. ಒಲಿಂಪಿಕ್ಸ್, ಕ್ರಿಕೆಟ್ ಮತ್ತಿತರ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡ ಜಯ ಗಳಿಸಿದಾಗ ಎಲ್ಲರಿಗಿಂತ ಮೊದಲು ಅಭಿನಂದಿಸುವ, ಚಹಾ ಕೂಟಕ್ಕೆ ಆಹ್ವಾನಿಸುವ ಪ್ರಧಾನಿ ಮೋದಿ ಈ ಕುರಿತು ಮೌನವಾಗಿರುವುದು ಏಕೆ’ ಎಂದೂ ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ದುಬೈಯಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಭಾರತದ ಸೋಲಿಗೆ ತಂಡದ ವೇಗಿ ಬೌಲರ್ ಶಮಿ ಮೊಹಮ್ಮದ್ ಅವರನ್ನು ಹೊಣೆಗಾರರನ್ನಾಗಿಸಿ, ಸಾಮಾಜಿಕ ಜಾಲತಾಣಗಳಲ್ಲಿ ತುಚ್ಛೀಕರಿಸಿ ಭಾರತೀಯ ಪ್ರೇಕ್ಷಕರು ಯಾವುದೇ ಪಾಪಪ್ರಜ್ಞೆ ಇಲ್ಲದೆ ಮತಾಂಧತೆ ಪ್ರದರ್ಶಿಸಿದ್ದಾರೆ. ಕ್ರಿಕೆಟ್ನಲ್ಲೂ ʼಧರ್ಮʼದ ಆಟ ಸರಿಯೇ’ ಎಂದುಕೆಪಿಸಿಸಿ ವಕ್ತಾರ ಪ್ರೊ. ಬಿ.ಕೆ. ಚಂದ್ರಶೇಖರ್ ಪ್ರಶ್ನಿಸಿದ್ದಾರೆ.</p>.<p>‘ಅಂತರರಾಷ್ಟ್ರೀಯ ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಪಂದ್ಯಗಳ ಆರಂಭಕ್ಕೆ ಮೊದಲು ‘ಮಂಡಿಯೂರಿ ಕುಳಿತು’ ವರ್ಣಭೇದ ವಿರೋಧಿಸುವ ಮಾನವೀಯ ಮೌಲ್ಯದ ಪ್ರತಿಪಾದನೆ ಈಗ ಎಲ್ಲೆಡೆ ಜಾರಿಯಲ್ಲಿದೆ. ಈ ಮಧ್ಯೆ, ಇಂಥ ನಡವಳಿಕೆ ಎಷ್ಟು ಸರಿ’ ಎಂದಿದ್ದಾರೆ.</p>.<p>‘ಅದೇ ಅಭಿಮಾನಿಗಳು ಶಮಿ ಪರ ನಿಂತು ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಒಂಬತ್ತು ತಿಂಗಳ ಮಗಳ ಮೇಲೆ ಅತ್ಯಾಚಾರ ಮಾಡುವ ಪೈಶಾಚಿಕ ಸಂದೇಶ ರವಾನಿಸಿದ್ದಾರೆ. ಒಂದು ಧರ್ಮದವರ ವಿರುದ್ಧ ಈ ರೀತಿಯ ದ್ವೇಷದ ವಾತಾವರಣ ಹುಟ್ಟು ಹಾಕಿರುವುದು ಬಿಜೆಪಿ ಹಾಗೂ ಸಂಘ ಪರಿವಾರ ಸಂಘಟನೆಗಳೇ ಅಲ್ಲವೇ. ಅವರದೇ ಘೋಷ ವಾಕ್ಯದ ಪ್ರಕಾರ ಅವರು ‘ನಮ್ಮ ಸಂಸ್ಕೃತಿಯ ರಕ್ಷಕರು’’ ಎಂದು ಬಿಕೆಸಿ ವ್ಯಂಗ್ಯವಾಡಿದ್ದಾರೆ.</p>.<p>‘ಒಂಬತ್ತು ತಿಂಗಳ ಹೆಣ್ಣು ಕೂಸಿನ ವಿರುದ್ಧ ಈ ರೀತಿ ಆಲೋಚಿಸುವುದು ಭಾರತೀಯ ಸಂಸ್ಕೃತಿಯೇ. ಒಲಿಂಪಿಕ್ಸ್, ಕ್ರಿಕೆಟ್ ಮತ್ತಿತರ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡ ಜಯ ಗಳಿಸಿದಾಗ ಎಲ್ಲರಿಗಿಂತ ಮೊದಲು ಅಭಿನಂದಿಸುವ, ಚಹಾ ಕೂಟಕ್ಕೆ ಆಹ್ವಾನಿಸುವ ಪ್ರಧಾನಿ ಮೋದಿ ಈ ಕುರಿತು ಮೌನವಾಗಿರುವುದು ಏಕೆ’ ಎಂದೂ ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>