<p><strong>ಬೆಳಗಾವಿ</strong>: ಆರಂಭಿಕ ಬ್ಯಾಟರ್ ಪ್ರಕಾಶ ಜಯರಾಮಯ್ಯ ದ್ವಿಶತಕದ ನೆರವಿನಿಂದ ಕರ್ನಾಟಕ ಅಂಧರ ಕ್ರಿಕೆಟ್ ತಂಡವು ಇಲ್ಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಮಂಗಳವಾರ ನಡೆದ ಪುರುಷರ ರಾಷ್ಟ್ರಮಟ್ಟದ ಅಂಧರ ಟಿ20 ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡದ ವಿರುದ್ಧ 145 ರನ್ಗಳಿಂದ ಜಯಿಸಿತು.</p>.<p>ಸಮರ್ಥನಂ ಅಂಗವಿಕಲರ ಸಂಸ್ಥೆ, ಪ್ರಜಾವಾಣಿ, ಇಂಡಸ್ಇಂಡ್ ಬ್ಯಾಂಕ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಸಹಯೋಗದಲ್ಲಿ ನಡೆದ ‘ನಾಗೇಶ ಟ್ರೋಫಿ’ಯ ಲೀಗ್ ಪಂದ್ಯದಲ್ಲಿ ಆತಿಥೇಯ ತಂಡ ಸತತ ಮೂರನೇ ದಿನ ಜಯಿಸಿತು.</p>.<p>ಟಾಸ್ ಗೆದ್ದ ಕರ್ನಾಟಕ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಕಾಶ (ಔಟಾಗದೆ 220 ರನ್, 84 ಎಸೆತ, 47 ಬೌಂಡರಿ) ಅಬ್ಬರದ ಬ್ಯಾಟಿಂಗ್ನಿಂದಾಗಿ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತು. ಆರ್.ಸುನೀಲ್ (ಔಟಾಗದೆ 46 ರನ್, 16 ಎಸೆತ, 8 ಬೌಂಡರಿ) ಉತ್ತಮ ಆಟವಾಡಿದರು.</p>.<p>ಗುರಿ ಬೆನ್ನಟ್ಟಿದ ಮಹಾರಾಷ್ಟ್ರ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಿತು. ರೋಹಿತ್ ಭರ್ಗುನೆ(59 ರನ್, 49 ಎಸೆತ, 5 ಬೌಂಡರಿ) ಅರ್ಧಶತಕ ಬಾರಿಸಿದರು. ಆದರೂ ಗೆಲುವಿನ ದಡ ತಲುಪಲಿಲ್ಲ.</p>.<p>ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ, ಪಶ್ಚಿಮ ಬಂಗಾಳ ತಂಡವು ಉತ್ತರಪ್ರದೇಶ ವಿರುದ್ಧ 7 ವಿಕೆಟ್ಗಳ ಅಂತರದಿಂದ ಗೆದ್ದಿತು. ಉತ್ತರಪ್ರದೇಶ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಪಶ್ಚಿಮ ಬಂಗಾಳ 19.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಗೆದ್ದಿತು.</p>.<p>ಸಂಕ್ಷಿಪ್ತ ಸ್ಕೋರು: ಕರ್ನಾಟಕ: 20 ಓವರ್ಗಳಲ್ಲಿ 2 ವಿಕೆಟ್ಗಳಿಗೆ 312 (ಪ್ರಕಾಶ ಜಯರಾಮಯ್ಯ 220, ಆರ್.ಸುನೀಲ್ 46, ಸ್ವಪ್ನಿಲ್ ವಾಘ್ 47ಕ್ಕೆ1)</p>.<p>ಮಹಾರಾಷ್ಟ್ರ: 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 167(ಅಭಿಜಿತ್ ಧೋಬೆ 18, ವಿನೋದ ಮಹಾಲೆ 12, ರೋಹಿತ್ ಭರ್ಗುನೆ ಔಟಾಗದೆ 59, ಪಾಂಡುರಂಗ ಜಂಬೆ 34, ಆರ್.ಸುನೀಲ್ 8ಕ್ಕೆ1, ಎಸ್.ಕೃಷ್ಣಮೂರ್ತಿ 24ಕ್ಕೆ1, ಕೆ.ಎಸ್.ಪುನೀತ್ 9ಕ್ಕೆ1). ಫಲಿತಾಂಶ: ಕರ್ನಾಟಕ ತಂಡಕ್ಕೆ 145 ರನ್ಗಳಿಂದ ಜಯ. ಪಂದ್ಯಶ್ರೇಷ್ಠ: ಪ್ರಕಾಶ ಜಯರಾಮಯ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಆರಂಭಿಕ ಬ್ಯಾಟರ್ ಪ್ರಕಾಶ ಜಯರಾಮಯ್ಯ ದ್ವಿಶತಕದ ನೆರವಿನಿಂದ ಕರ್ನಾಟಕ ಅಂಧರ ಕ್ರಿಕೆಟ್ ತಂಡವು ಇಲ್ಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಮಂಗಳವಾರ ನಡೆದ ಪುರುಷರ ರಾಷ್ಟ್ರಮಟ್ಟದ ಅಂಧರ ಟಿ20 ಟೂರ್ನಿಯಲ್ಲಿ ಮಹಾರಾಷ್ಟ್ರ ತಂಡದ ವಿರುದ್ಧ 145 ರನ್ಗಳಿಂದ ಜಯಿಸಿತು.</p>.<p>ಸಮರ್ಥನಂ ಅಂಗವಿಕಲರ ಸಂಸ್ಥೆ, ಪ್ರಜಾವಾಣಿ, ಇಂಡಸ್ಇಂಡ್ ಬ್ಯಾಂಕ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಸಹಯೋಗದಲ್ಲಿ ನಡೆದ ‘ನಾಗೇಶ ಟ್ರೋಫಿ’ಯ ಲೀಗ್ ಪಂದ್ಯದಲ್ಲಿ ಆತಿಥೇಯ ತಂಡ ಸತತ ಮೂರನೇ ದಿನ ಜಯಿಸಿತು.</p>.<p>ಟಾಸ್ ಗೆದ್ದ ಕರ್ನಾಟಕ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಕಾಶ (ಔಟಾಗದೆ 220 ರನ್, 84 ಎಸೆತ, 47 ಬೌಂಡರಿ) ಅಬ್ಬರದ ಬ್ಯಾಟಿಂಗ್ನಿಂದಾಗಿ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತು. ಆರ್.ಸುನೀಲ್ (ಔಟಾಗದೆ 46 ರನ್, 16 ಎಸೆತ, 8 ಬೌಂಡರಿ) ಉತ್ತಮ ಆಟವಾಡಿದರು.</p>.<p>ಗುರಿ ಬೆನ್ನಟ್ಟಿದ ಮಹಾರಾಷ್ಟ್ರ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಿತು. ರೋಹಿತ್ ಭರ್ಗುನೆ(59 ರನ್, 49 ಎಸೆತ, 5 ಬೌಂಡರಿ) ಅರ್ಧಶತಕ ಬಾರಿಸಿದರು. ಆದರೂ ಗೆಲುವಿನ ದಡ ತಲುಪಲಿಲ್ಲ.</p>.<p>ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ, ಪಶ್ಚಿಮ ಬಂಗಾಳ ತಂಡವು ಉತ್ತರಪ್ರದೇಶ ವಿರುದ್ಧ 7 ವಿಕೆಟ್ಗಳ ಅಂತರದಿಂದ ಗೆದ್ದಿತು. ಉತ್ತರಪ್ರದೇಶ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಪಶ್ಚಿಮ ಬಂಗಾಳ 19.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಗೆದ್ದಿತು.</p>.<p>ಸಂಕ್ಷಿಪ್ತ ಸ್ಕೋರು: ಕರ್ನಾಟಕ: 20 ಓವರ್ಗಳಲ್ಲಿ 2 ವಿಕೆಟ್ಗಳಿಗೆ 312 (ಪ್ರಕಾಶ ಜಯರಾಮಯ್ಯ 220, ಆರ್.ಸುನೀಲ್ 46, ಸ್ವಪ್ನಿಲ್ ವಾಘ್ 47ಕ್ಕೆ1)</p>.<p>ಮಹಾರಾಷ್ಟ್ರ: 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 167(ಅಭಿಜಿತ್ ಧೋಬೆ 18, ವಿನೋದ ಮಹಾಲೆ 12, ರೋಹಿತ್ ಭರ್ಗುನೆ ಔಟಾಗದೆ 59, ಪಾಂಡುರಂಗ ಜಂಬೆ 34, ಆರ್.ಸುನೀಲ್ 8ಕ್ಕೆ1, ಎಸ್.ಕೃಷ್ಣಮೂರ್ತಿ 24ಕ್ಕೆ1, ಕೆ.ಎಸ್.ಪುನೀತ್ 9ಕ್ಕೆ1). ಫಲಿತಾಂಶ: ಕರ್ನಾಟಕ ತಂಡಕ್ಕೆ 145 ರನ್ಗಳಿಂದ ಜಯ. ಪಂದ್ಯಶ್ರೇಷ್ಠ: ಪ್ರಕಾಶ ಜಯರಾಮಯ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>