<p><strong>ನವದೆಹಲಿ</strong>: ತುಮಕೂರು ಜಿಲ್ಲೆಯ ಪಾವಗಡದ ಸೋಲಾರ್ ಪಾರ್ಕ್ನಲ್ಲಿ 1,897 ಎಕರೆ ‘ನಿರುಪಯುಕ್ತ ಭೂಮಿ’ಗೂ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮವು (ಕೆಎಸ್ಪಿಡಿಸಿಎಲ್) 2015-16ರಿಂದ ಬಾಡಿಗೆ ಪಾವತಿಸುತ್ತಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಆಕ್ಷೇಪ ವ್ಯಕ್ತಪಡಿಸಿದೆ. </p>.<p>ಸೋಲಾರ್ ಪಾರ್ಕ್ಗಳ ಕಾರ್ಯನಿರ್ವಹಣೆ ಕುರಿತ ಸಿಎಜಿ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಅನುಪಯುಕ್ತ ಭೂಮಿಗೆ ಬಾಡಿಗೆ ನೀಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ಭಾರಿ ನಷ್ಟದ ಕುರಿತು ವರದಿಯಲ್ಲಿ ವಿವರಿಸಲಾಗಿದೆ. </p>.<p>1,897 ಎಕರೆ ಭೂಮಿಯಲ್ಲಿ 1,531 ಎಕರೆಯನ್ನು ಯೋಜನೆ ಅಭಿವೃದ್ಧಿಪಡಿಸುವವರಿಗೆ ಹಂಚಿಕೆಯನ್ನೇ ಮಾಡಿಲ್ಲ. ಈ ಭೂಮಿ ಸೌರಶಕ್ತಿ ಯೋಜನೆಗಳಿಗೆ ಸೂಕ್ತವಾಗಿಲ್ಲ ಎಂಬುದು ಕಾರಣ. ಆದರೂ, ಈ ಜಾಗಕ್ಕೆ ನಿಗಮವು ಪ್ರತಿ ವರ್ಷ ಬಾಡಿಗೆ ಪಾವತಿಸುತ್ತಿದೆ. ಅಷ್ಟೇ ಅಲ್ಲದೇ, ಗುತ್ತಿಗೆ ಅವಧಿಯನ್ನು 28 ವರ್ಷಗಳಿಗೆ ವಿಸ್ತರಿಸಲಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಈ ಭೂಮಿಗೆ ಬಾಡಿಗೆ ಶೇ 5ರಷ್ಟು ಹೆಚ್ಚಲಿದೆ. ಯೋಜನೆಗೆ ಅಗತ್ಯವಿರುವ ಏಕರೂಪದ ಭೂಮಿ ಪಡೆಯುವುದು ಸವಾಲಿನ ಕೆಲಸ. ಆದರೆ, ವಿಸ್ತೃತ ಯೋಜನಾ ವರದಿ ತಯಾರಿಗೆ ಮುನ್ನ ವಿವರವಾದ ಸಮೀಕ್ಷೆ ನಡೆಸಿದ್ದರೆ ಈ ಲೋಪ ತಪ್ಪಿಸಬಹುದು ಎಂದು ಸಿಎಜಿ ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ. </p>.<p>ಅನಗತ್ಯ ಭೂಸ್ವಾಧೀನ ವೆಚ್ಚವು ಒಟ್ಟು ಯೋಜನಾ ವೆಚ್ಚ ಹೆಚ್ಚಳಕ್ಕೆ ಕಾರಣವಾಯಿತು. ಕೊನೆಗೆ, ಇದರ ಹೊರೆ ಗ್ರಾಹಕರಿಗೆ ವರ್ಗಾವಣೆಯಾಯಿತು. ಸ್ವಲ್ಪ ಜಾಣ್ಮೆ ವಹಿಸಿದ್ದರೆ ನಿರುಪಯುಕ್ತ ಭೂಮಿಯ ಭೂಸ್ವಾಧೀನ ತಪ್ಪಿಸಬಹುದಿತ್ತು ಎಂದೂ ವರದಿಯಲ್ಲಿ ಹೇಳಲಾಗಿದೆ. </p>.<p>ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಯೋಜನೆ ಅಭಿವೃದ್ಧಿಪಡಿಸುವವರಿಗೆ ನಿಗಮವು 10,811 ಎಕರೆಯನ್ನು ಉಪಗುತ್ತಿಗೆ ನೀಡಿದೆ. 2015-16ರಿಂದ ಯೋಜನೆಯನ್ನು ಅಭಿವೃದ್ಧಿಪಡಿಸುವವರು ನಿಗಮಕ್ಕೆ ಭೂಗುತ್ತಿಗೆ ಶುಲ್ಕ ಪಾವತಿಸುತ್ತಿದ್ದಾರೆ. </p>.<p><strong>ರಾಜ್ಯದ ಸಾಧನೆಗೆ ಮೆಚ್ಚುಗೆ:</strong> ಸೌರ ವಿದ್ಯುತ್ ಉತ್ಪಾದನೆಯಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಸಾಧನೆ ಉತ್ತಮವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. </p>.<p>ರಾಜ್ಯದಲ್ಲಿ 2,500 ಮೆಗಾವಾಟ್ ಸೌರವಿದ್ಯುತ್ ಉತ್ಪಾದನೆಯ ಗುರಿ ನೀಡಲಾಗಿತ್ತು. ರಾಜ್ಯದಲ್ಲಿ 2,050 ಮೆಗಾವಾಟ್ ಸೌರವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಮೂಲಕ ಶೇ 82 ಸಾಧನೆ ಮಾಡಲಾಗಿದೆ. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳ ಸಾಧನೆ ಶೇ 8ರಿಂದ ಶೇ 34ರ ನಡುವೆ ಇದೆ ಎಂದು ವರದಿ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ತುಮಕೂರು ಜಿಲ್ಲೆಯ ಪಾವಗಡದ ಸೋಲಾರ್ ಪಾರ್ಕ್ನಲ್ಲಿ 1,897 ಎಕರೆ ‘ನಿರುಪಯುಕ್ತ ಭೂಮಿ’ಗೂ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮವು (ಕೆಎಸ್ಪಿಡಿಸಿಎಲ್) 2015-16ರಿಂದ ಬಾಡಿಗೆ ಪಾವತಿಸುತ್ತಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಆಕ್ಷೇಪ ವ್ಯಕ್ತಪಡಿಸಿದೆ. </p>.<p>ಸೋಲಾರ್ ಪಾರ್ಕ್ಗಳ ಕಾರ್ಯನಿರ್ವಹಣೆ ಕುರಿತ ಸಿಎಜಿ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಅನುಪಯುಕ್ತ ಭೂಮಿಗೆ ಬಾಡಿಗೆ ನೀಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ಭಾರಿ ನಷ್ಟದ ಕುರಿತು ವರದಿಯಲ್ಲಿ ವಿವರಿಸಲಾಗಿದೆ. </p>.<p>1,897 ಎಕರೆ ಭೂಮಿಯಲ್ಲಿ 1,531 ಎಕರೆಯನ್ನು ಯೋಜನೆ ಅಭಿವೃದ್ಧಿಪಡಿಸುವವರಿಗೆ ಹಂಚಿಕೆಯನ್ನೇ ಮಾಡಿಲ್ಲ. ಈ ಭೂಮಿ ಸೌರಶಕ್ತಿ ಯೋಜನೆಗಳಿಗೆ ಸೂಕ್ತವಾಗಿಲ್ಲ ಎಂಬುದು ಕಾರಣ. ಆದರೂ, ಈ ಜಾಗಕ್ಕೆ ನಿಗಮವು ಪ್ರತಿ ವರ್ಷ ಬಾಡಿಗೆ ಪಾವತಿಸುತ್ತಿದೆ. ಅಷ್ಟೇ ಅಲ್ಲದೇ, ಗುತ್ತಿಗೆ ಅವಧಿಯನ್ನು 28 ವರ್ಷಗಳಿಗೆ ವಿಸ್ತರಿಸಲಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಈ ಭೂಮಿಗೆ ಬಾಡಿಗೆ ಶೇ 5ರಷ್ಟು ಹೆಚ್ಚಲಿದೆ. ಯೋಜನೆಗೆ ಅಗತ್ಯವಿರುವ ಏಕರೂಪದ ಭೂಮಿ ಪಡೆಯುವುದು ಸವಾಲಿನ ಕೆಲಸ. ಆದರೆ, ವಿಸ್ತೃತ ಯೋಜನಾ ವರದಿ ತಯಾರಿಗೆ ಮುನ್ನ ವಿವರವಾದ ಸಮೀಕ್ಷೆ ನಡೆಸಿದ್ದರೆ ಈ ಲೋಪ ತಪ್ಪಿಸಬಹುದು ಎಂದು ಸಿಎಜಿ ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ. </p>.<p>ಅನಗತ್ಯ ಭೂಸ್ವಾಧೀನ ವೆಚ್ಚವು ಒಟ್ಟು ಯೋಜನಾ ವೆಚ್ಚ ಹೆಚ್ಚಳಕ್ಕೆ ಕಾರಣವಾಯಿತು. ಕೊನೆಗೆ, ಇದರ ಹೊರೆ ಗ್ರಾಹಕರಿಗೆ ವರ್ಗಾವಣೆಯಾಯಿತು. ಸ್ವಲ್ಪ ಜಾಣ್ಮೆ ವಹಿಸಿದ್ದರೆ ನಿರುಪಯುಕ್ತ ಭೂಮಿಯ ಭೂಸ್ವಾಧೀನ ತಪ್ಪಿಸಬಹುದಿತ್ತು ಎಂದೂ ವರದಿಯಲ್ಲಿ ಹೇಳಲಾಗಿದೆ. </p>.<p>ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಯೋಜನೆ ಅಭಿವೃದ್ಧಿಪಡಿಸುವವರಿಗೆ ನಿಗಮವು 10,811 ಎಕರೆಯನ್ನು ಉಪಗುತ್ತಿಗೆ ನೀಡಿದೆ. 2015-16ರಿಂದ ಯೋಜನೆಯನ್ನು ಅಭಿವೃದ್ಧಿಪಡಿಸುವವರು ನಿಗಮಕ್ಕೆ ಭೂಗುತ್ತಿಗೆ ಶುಲ್ಕ ಪಾವತಿಸುತ್ತಿದ್ದಾರೆ. </p>.<p><strong>ರಾಜ್ಯದ ಸಾಧನೆಗೆ ಮೆಚ್ಚುಗೆ:</strong> ಸೌರ ವಿದ್ಯುತ್ ಉತ್ಪಾದನೆಯಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಸಾಧನೆ ಉತ್ತಮವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. </p>.<p>ರಾಜ್ಯದಲ್ಲಿ 2,500 ಮೆಗಾವಾಟ್ ಸೌರವಿದ್ಯುತ್ ಉತ್ಪಾದನೆಯ ಗುರಿ ನೀಡಲಾಗಿತ್ತು. ರಾಜ್ಯದಲ್ಲಿ 2,050 ಮೆಗಾವಾಟ್ ಸೌರವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಮೂಲಕ ಶೇ 82 ಸಾಧನೆ ಮಾಡಲಾಗಿದೆ. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳ ಸಾಧನೆ ಶೇ 8ರಿಂದ ಶೇ 34ರ ನಡುವೆ ಇದೆ ಎಂದು ವರದಿ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>