<p><strong>ಬೆಂಗಳೂರು:</strong> ಕೇಂದ್ರ ಪುರಸ್ಕೃತ ಯೋಜನೆಗಳಿಗೆ ನೀಡಬೇಕಿರುವ ₹4,195 ಕೋಟಿ ಬಾಕಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. </p><p>ಬುಧವಾರ ನಡೆದ ರಾಜ್ಯಮಟ್ಟದ ‘ದಿಶಾ’ ಸಮಿತಿ ಸಭೆಯ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.</p><p>2024-25ನೇ ಸಾಲಿನ 67 ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯದ ಪಾಲು ₹24,960 ಕೋಟಿ, ಕೇಂದ್ರದ ಪಾಲು ₹22,758 ಕೋಟಿ ಇದೆ. ಕೇಂದ್ರ ₹18,561 ಕೋಟಿ ಬಿಡುಗಡೆ ಮಾಡಿದೆ. 15ನೇ ಹಣಕಾಸು ಆಯೋಗದ ವಿಶೇಷ ಅನುದಾನ ₹5,495 ಕೋಟಿ, ಕೆರೆ ಅಭಿವೃದ್ಧಿ ಮತ್ತು ಫೆರಿಫೆರಲ್ ವರ್ತುಲ ರಸ್ತೆಗೆ ₹11,495 ಕೋಟಿ ಬರಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆಯ 5,300 ಕೋಟಿ ನೀಡಿಲ್ಲ’ ಎಂದರು.</p><p>ರಾಜ್ಯ ಸರ್ಕಾರವೇ ಬಹುತೇಕ ನೆರವು ನೀಡುವ ಯೋಜನೆಗಳಿಗೂ ಪ್ರಧಾನ ಮಂತ್ರಿ ಹಾಗೂ ಕೇಂದ್ರದ ಹೆಸರಿದೆ. ಆದರೆ, ಸಣ್ಣ ಮೊತ್ತವೂ ಕೇಂದ್ರದಿಂದ ಬಂದಿಲ್ಲ. ಇಂತಹ ಅನ್ಯಾಯವನ್ನು ಎಲ್ಲ ಸಂಸದರು ಒಟ್ಟಾಗಿ ಪ್ರಶ್ನಿಸಬೇಕು. ಮೌನ ಮುರಿದು ಗಟ್ಟಿಧ್ವನಿಯಲ್ಲಿ ಮಾತನಾಡಬೇಕು ಎಂದರು. </p><p>ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಎರಡು ವರ್ಷದ ಪಾಲು ₹10 ಸಾವಿರ ಬಾಕಿ ಕೋಟಿ ಬಾಕಿ ಇದೆ. ಕೇಂದ್ರ ಜಲಜೀವನ್ ಮಿಷನ್ನಲ್ಲಿ 23-24ನೇ ಸಾಲಿನ ₹7,656 ಕೋಟಿ, 24-25ನೇ ಸಾಲಿನ 3,233 ಕೋಟಿ ಬರಬೇಕಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲೂ ಬಾಕಿ ಉಳಿದಿದೆ ಎಂದು ವಿವರ ನೀಡಿದರು.</p><p>ಕೇಂದ್ರ ಸರ್ಕಾರ, ಕೇಂದ್ರದ ಸಚಿವರು, ಪ್ರಧಾನ ಮಂತ್ರಿಗೆ ನಿರಂತರವಾಗಿ ಪತ್ರ ಬರೆಯಲಾಗಿದೆ. ರಾಜ್ಯದಿಂದ ₹4.5 ಲಕ್ಷ ಕೋಟಿ ತೆರಿಗೆ ಕೊಟ್ಟರೂ ಸಣ್ಣ ನೆರವೂ ರಾಜ್ಯಕ್ಕೆ ಸಿಗುತ್ತಿಲ್ಲ. ಮತ್ತೊಂದು ಕಡೆ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದು ಕೇಂದ್ರ ಸಚಿವರು, ಬಿಜೆಪಿ ಸಂಸದರೇ ಆರೋಪ ಮಾಡುತ್ತಾರೆ ಎಂದು ದೂರಿದರು. </p><p>ರಾಜ್ಯಸಭೆ ಸದಸ್ಯ ಲಹರ್ ಸಿಂಗ್ ಸಿರೋಯಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಭೆಯಲ್ಲಿ ಉಪಸ್ಥಿತರಿದ್ದರು.</p>.<p><strong>ಪಿಂಚಣಿ ಮೊತ್ತಕ್ಕೂ ಕತ್ತರಿ</strong></p><p>ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿ ಗಳಿಗೆ ನೀಡುವ ಪಿಂಚಣಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿಸುತ್ತವೆ. 2024–25ನೇ ಸಾಲಿನಲ್ಲಿ ರಾಜ್ಯ ಸರ್ಕಾರ ₹5,665 ಕೋಟಿ, ಕೇಂದ್ರ ಸರ್ಕಾರ ₹559 ಕೋಟಿ ಮೊತ್ತ ನೀಡಬೇಕಿತ್ತು. ಆದರೆ, ಕೇಂದ್ರ ಇದುವರೆಗೂ ₹113.92 ಕೋಟಿಯಷ್ಟೇ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.</p><p>ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಪಿಂಚಣಿ ಯೋಜನೆಗಳಿಗೆ ನೀಡುವ ಸಣ್ಣ ಮೊತ್ತವನ್ನೂ ಕೊಡದ ಕೇಂದ್ರ ಎರಡು ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ. ಬಡವರ ಬದುಕಿಗೆ ಭದ್ರತೆ ಒದಗಿಸುವ ಯೋಜನೆಯ ಹಣಕ್ಕೂ ಕತ್ತರಿ ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು.</p>.<div><blockquote>ಕೇಂದ್ರ ಸರ್ಕಾರದ ಬಳಿ ಹಣ ಇಲ್ಲವೇ? ಕುಡಿಯುವ ನೀರಿಗೆ ಹಣ ಕೊಡಲಾಗದಷ್ಟು ಕೇಂದ್ರ ಸರ್ಕಾರ ದುರ್ಬಲವಾಗಿದೆಯೇ? </blockquote><span class="attribution">ರಿಜ್ವಾನ್ ಅರ್ಷದ್, ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೇಂದ್ರ ಪುರಸ್ಕೃತ ಯೋಜನೆಗಳಿಗೆ ನೀಡಬೇಕಿರುವ ₹4,195 ಕೋಟಿ ಬಾಕಿ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. </p><p>ಬುಧವಾರ ನಡೆದ ರಾಜ್ಯಮಟ್ಟದ ‘ದಿಶಾ’ ಸಮಿತಿ ಸಭೆಯ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.</p><p>2024-25ನೇ ಸಾಲಿನ 67 ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯದ ಪಾಲು ₹24,960 ಕೋಟಿ, ಕೇಂದ್ರದ ಪಾಲು ₹22,758 ಕೋಟಿ ಇದೆ. ಕೇಂದ್ರ ₹18,561 ಕೋಟಿ ಬಿಡುಗಡೆ ಮಾಡಿದೆ. 15ನೇ ಹಣಕಾಸು ಆಯೋಗದ ವಿಶೇಷ ಅನುದಾನ ₹5,495 ಕೋಟಿ, ಕೆರೆ ಅಭಿವೃದ್ಧಿ ಮತ್ತು ಫೆರಿಫೆರಲ್ ವರ್ತುಲ ರಸ್ತೆಗೆ ₹11,495 ಕೋಟಿ ಬರಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆಯ 5,300 ಕೋಟಿ ನೀಡಿಲ್ಲ’ ಎಂದರು.</p><p>ರಾಜ್ಯ ಸರ್ಕಾರವೇ ಬಹುತೇಕ ನೆರವು ನೀಡುವ ಯೋಜನೆಗಳಿಗೂ ಪ್ರಧಾನ ಮಂತ್ರಿ ಹಾಗೂ ಕೇಂದ್ರದ ಹೆಸರಿದೆ. ಆದರೆ, ಸಣ್ಣ ಮೊತ್ತವೂ ಕೇಂದ್ರದಿಂದ ಬಂದಿಲ್ಲ. ಇಂತಹ ಅನ್ಯಾಯವನ್ನು ಎಲ್ಲ ಸಂಸದರು ಒಟ್ಟಾಗಿ ಪ್ರಶ್ನಿಸಬೇಕು. ಮೌನ ಮುರಿದು ಗಟ್ಟಿಧ್ವನಿಯಲ್ಲಿ ಮಾತನಾಡಬೇಕು ಎಂದರು. </p><p>ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಎರಡು ವರ್ಷದ ಪಾಲು ₹10 ಸಾವಿರ ಬಾಕಿ ಕೋಟಿ ಬಾಕಿ ಇದೆ. ಕೇಂದ್ರ ಜಲಜೀವನ್ ಮಿಷನ್ನಲ್ಲಿ 23-24ನೇ ಸಾಲಿನ ₹7,656 ಕೋಟಿ, 24-25ನೇ ಸಾಲಿನ 3,233 ಕೋಟಿ ಬರಬೇಕಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲೂ ಬಾಕಿ ಉಳಿದಿದೆ ಎಂದು ವಿವರ ನೀಡಿದರು.</p><p>ಕೇಂದ್ರ ಸರ್ಕಾರ, ಕೇಂದ್ರದ ಸಚಿವರು, ಪ್ರಧಾನ ಮಂತ್ರಿಗೆ ನಿರಂತರವಾಗಿ ಪತ್ರ ಬರೆಯಲಾಗಿದೆ. ರಾಜ್ಯದಿಂದ ₹4.5 ಲಕ್ಷ ಕೋಟಿ ತೆರಿಗೆ ಕೊಟ್ಟರೂ ಸಣ್ಣ ನೆರವೂ ರಾಜ್ಯಕ್ಕೆ ಸಿಗುತ್ತಿಲ್ಲ. ಮತ್ತೊಂದು ಕಡೆ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದು ಕೇಂದ್ರ ಸಚಿವರು, ಬಿಜೆಪಿ ಸಂಸದರೇ ಆರೋಪ ಮಾಡುತ್ತಾರೆ ಎಂದು ದೂರಿದರು. </p><p>ರಾಜ್ಯಸಭೆ ಸದಸ್ಯ ಲಹರ್ ಸಿಂಗ್ ಸಿರೋಯಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಭೆಯಲ್ಲಿ ಉಪಸ್ಥಿತರಿದ್ದರು.</p>.<p><strong>ಪಿಂಚಣಿ ಮೊತ್ತಕ್ಕೂ ಕತ್ತರಿ</strong></p><p>ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿ ಗಳಿಗೆ ನೀಡುವ ಪಿಂಚಣಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿಸುತ್ತವೆ. 2024–25ನೇ ಸಾಲಿನಲ್ಲಿ ರಾಜ್ಯ ಸರ್ಕಾರ ₹5,665 ಕೋಟಿ, ಕೇಂದ್ರ ಸರ್ಕಾರ ₹559 ಕೋಟಿ ಮೊತ್ತ ನೀಡಬೇಕಿತ್ತು. ಆದರೆ, ಕೇಂದ್ರ ಇದುವರೆಗೂ ₹113.92 ಕೋಟಿಯಷ್ಟೇ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.</p><p>ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಪಿಂಚಣಿ ಯೋಜನೆಗಳಿಗೆ ನೀಡುವ ಸಣ್ಣ ಮೊತ್ತವನ್ನೂ ಕೊಡದ ಕೇಂದ್ರ ಎರಡು ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ. ಬಡವರ ಬದುಕಿಗೆ ಭದ್ರತೆ ಒದಗಿಸುವ ಯೋಜನೆಯ ಹಣಕ್ಕೂ ಕತ್ತರಿ ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು.</p>.<div><blockquote>ಕೇಂದ್ರ ಸರ್ಕಾರದ ಬಳಿ ಹಣ ಇಲ್ಲವೇ? ಕುಡಿಯುವ ನೀರಿಗೆ ಹಣ ಕೊಡಲಾಗದಷ್ಟು ಕೇಂದ್ರ ಸರ್ಕಾರ ದುರ್ಬಲವಾಗಿದೆಯೇ? </blockquote><span class="attribution">ರಿಜ್ವಾನ್ ಅರ್ಷದ್, ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>