<p><strong>ಚಿತ್ರದುರ್ಗ:</strong> ಹಿರಿಯೂರು ತಾಲ್ಲೂಕಿನ ಸಿಗೆಹಟ್ಟಿ ಗ್ರಾಮದ ಪ್ರೇಮಿಗಳು ಸಿನಿಮೀಯ ರೀತಿಯಲ್ಲಿ ವಿವಾಹವಾಗಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಪ್ರೀತಿಸಿದ ಕುರಿಗಾಹಿಗಾಗಿ ಓಡೋಡಿ ಬಂದ ಎಂಎ ಪದವೀಧರೆಗೆ ಪ್ರಿಯತಮ ಕುರಿ ಮೇಯಿಸುವ ಸ್ಥಳದಲ್ಲೇ ತಾಳಿ ಕಟ್ಟಿದ್ದಾನೆ.</p>.<p>ಕುರಿ ಕಾಯುವ ಅರುಣ್ ಹಾಗೂ ಎಂಎ ವ್ಯಾಸಂಗ ಮಾಡುತ್ತಿರುವ ಅಮೃತಾ ಇಬ್ಬರು ಒಂದೇ ಸಮುದಾಯದರು. ಇವರಿಬ್ಬರ ವಿವಾಹಕ್ಕೆ ಎರಡು ಮನೆಯವರ ವಿರೋಧವಿತ್ತು.</p>.<p>ಇವರಿಬ್ಬರು ಪ್ರೀತಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ಪೋಷಕರಿಗೆ ಗೊತ್ತಾಗಿತ್ತು. ಇದಕ್ಕೆ ಹುಡುಗಿ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಗ್ರಾಮದ ಮುಖಂಡರು ಸೇರಿ ರಾಜಿ ಪಂಚಾಯಿತಿ ಕೂಡ ಮಾಡಿದ್ದರು. ಆದರೆ ಅಮೃತಾಗೆ ಬೇರೆ ಮದುವೆ ಮಾಡಲು ಆಕೆ ಮನೆಯಲ್ಲಿ ಸಿದ್ಧತೆ ನಡೆದಿತ್ತು.</p>.<p>ತುಮಕೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಮೃತಾ, ಹಬ್ಬಕ್ಕೆಂದು ಊರಿಗೆ ಬಂದಿದ್ದರು. ಬಹಿರ್ದೆಸೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೊರಗೆ ಹೋದ ಅಮೃತಾ, ನೇರವಾಗಿ ಕುರಿ ಹಟ್ಟಿಗೆ ಹೋಗಿದ್ದಾಳೆ.</p>.<p>ಈ ವೇಳೆ ಓಡೋಡಿ ಬಂದ ಪ್ರೇಯಸಿಗೆ ಪ್ರಿಯತಮ ಅರಿಶಿಣದ ಕೊಂಬು ಕಟ್ಟಿದ್ದಾನೆ. ಈ ದೃಶ್ಯವನ್ನು ಟಿಕ್ಟಾಕ್ ಮಾಡಲಾಗಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ವಿವಾಹದ ವಿಡಿಯೊ ಹರಿದಾಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ಹಿರಿಯೂರು ತಾಲ್ಲೂಕಿನ ಸಿಗೆಹಟ್ಟಿ ಗ್ರಾಮದ ಪ್ರೇಮಿಗಳು ಸಿನಿಮೀಯ ರೀತಿಯಲ್ಲಿ ವಿವಾಹವಾಗಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಪ್ರೀತಿಸಿದ ಕುರಿಗಾಹಿಗಾಗಿ ಓಡೋಡಿ ಬಂದ ಎಂಎ ಪದವೀಧರೆಗೆ ಪ್ರಿಯತಮ ಕುರಿ ಮೇಯಿಸುವ ಸ್ಥಳದಲ್ಲೇ ತಾಳಿ ಕಟ್ಟಿದ್ದಾನೆ.</p>.<p>ಕುರಿ ಕಾಯುವ ಅರುಣ್ ಹಾಗೂ ಎಂಎ ವ್ಯಾಸಂಗ ಮಾಡುತ್ತಿರುವ ಅಮೃತಾ ಇಬ್ಬರು ಒಂದೇ ಸಮುದಾಯದರು. ಇವರಿಬ್ಬರ ವಿವಾಹಕ್ಕೆ ಎರಡು ಮನೆಯವರ ವಿರೋಧವಿತ್ತು.</p>.<p>ಇವರಿಬ್ಬರು ಪ್ರೀತಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ಪೋಷಕರಿಗೆ ಗೊತ್ತಾಗಿತ್ತು. ಇದಕ್ಕೆ ಹುಡುಗಿ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಗ್ರಾಮದ ಮುಖಂಡರು ಸೇರಿ ರಾಜಿ ಪಂಚಾಯಿತಿ ಕೂಡ ಮಾಡಿದ್ದರು. ಆದರೆ ಅಮೃತಾಗೆ ಬೇರೆ ಮದುವೆ ಮಾಡಲು ಆಕೆ ಮನೆಯಲ್ಲಿ ಸಿದ್ಧತೆ ನಡೆದಿತ್ತು.</p>.<p>ತುಮಕೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಮೃತಾ, ಹಬ್ಬಕ್ಕೆಂದು ಊರಿಗೆ ಬಂದಿದ್ದರು. ಬಹಿರ್ದೆಸೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೊರಗೆ ಹೋದ ಅಮೃತಾ, ನೇರವಾಗಿ ಕುರಿ ಹಟ್ಟಿಗೆ ಹೋಗಿದ್ದಾಳೆ.</p>.<p>ಈ ವೇಳೆ ಓಡೋಡಿ ಬಂದ ಪ್ರೇಯಸಿಗೆ ಪ್ರಿಯತಮ ಅರಿಶಿಣದ ಕೊಂಬು ಕಟ್ಟಿದ್ದಾನೆ. ಈ ದೃಶ್ಯವನ್ನು ಟಿಕ್ಟಾಕ್ ಮಾಡಲಾಗಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ವಿವಾಹದ ವಿಡಿಯೊ ಹರಿದಾಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>