ತುಮಕೂರು: ದೇವೇಗೌಡರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ನಾನು ಬಿಜೆಪಿ ಅಭ್ಯರ್ಥಿ ಬಸವರಾಜ್ ಬೆಂಬಲಿಸಿದೆ. ಆದರೆ ದೇವೇಗೌಡರ ಬಗ್ಗೆ ಗೌರವ ಇದೆ. ನನ್ನ ಒಮ್ಮೆ ಅವರು ಶಾಸಕನನ್ನಾಗಿ ಮಾಡಿದ್ದರು. ಆ ಋಣ ಇದೆ. ಆದರೆ ಅವರ ಅಕ್ಕ ಪಕ್ಕ ಇದ್ದವರು ನಮ್ಮ ಮೇಲೆ ಚಾಡಿ ಹೇಳಿದರು. ನಾವು ದೂರವಾದೆವು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಾಜಣ್ಣ ಹೇಳಿದರು.