ಪಾಲಿಕೆ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪಾಲಿಕೆಯ ಕಾಂಗ್ರೆಸ್ ನಾಯಕ ವಾಜಿದ್, ಬಿಜೆಪಿ ಒಡೆದು ಆಳುವ ನೀತಿ ಅನುಸರಿಸಿದೆ. ಹೀಗಾಗಿ ಅವರ ಅಭ್ಯರ್ಥಿಯ ಬಗ್ಗೆ ಅಲ್ಲಿನ ಸದಸ್ಯರು ಗೊಂದಲಗೊಂಡಿದ್ದಾರೆ. ಹೀಗಾಗಿ ನಾವು ಮತ್ತೊಮ್ಮೆ ಗೆಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ. ನಮಗೆ ಕೊರತೆಯಾಗಿದ್ದದ್ದು ಎರಡು ವೋಟುಗಳು ಮಾತ್ರ. ಆದರೆ, ಈಗ 6 ಮಂದಿ ಬಿಜೆಪಿ ಸದಸ್ಯರು ನಮ್ಮ ಸಂಪರ್ಕ ಬಂದಿದ್ದಾರೆ ಎಂದಿದ್ದಾರೆ.