<p><strong>ಬೆಂಗಳೂರು:</strong> ಕರ್ನಾಟಕದಲ್ಲಿ ಬುಧವಾರ ಮಧ್ಯಾಹ್ನದವರೆಗೆ 41 ಇದ್ದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಸಂಜೆ ಹೊತ್ತಿಗೆ 51ಕ್ಕೆ ಏರಿತು. ಈ ಮೂಲಕ ಕರ್ನಾಟಕವು ಮಹಾರಾಷ್ಟ್ರ (128), ಕೇರಳ (118) ನಂತರದ ಸ್ಥಾನಕ್ಕೇರಿತು.</p>.<p>ರಾಜ್ಯದಲ್ಲಿ ಗುರುವಾರಒಂದೇ ದಿನ 10 ಕೊರೊನಾ ವೈರಸ್ ಪ್ರಕರಣಗಳು ದೃಢವಾಗಿದ್ದು,ಸಹಜವಾಗಿಯೇ ಆತಂಕ ಮೂಡಿಸಿದೆ. ಇನ್ನು ಈ ಬೆಳವಣಿಗೆ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ಕೊಂಚ ಅಸಹಾಯಕತೆಯಿಂದಲೇ ಮಾತನಾಡಿದ್ದಾರೆ. ‘ನಿನ್ನೆ 41 ಇದ್ದ ಪ್ರಕರಣಗಳು ಇಂದು 51 ಆಗಿದೆ. ಮುಂದೆ ಏನಾಗುತ್ತದೋ ಹೇಳಲಾಗುತ್ತಿಲ್ಲ,’ ಎಂದು ಕಳಾಹೀನರಾಗಿ ನುಡಿದಿದ್ದು ರಾಜ್ಯದ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿತು.</p>.<p>ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಲಾಕ್ಡೌನ್ಗೆ ಬದ್ಧರಾಗಿರಬೇಕು, ಮನೆಗಳಿಂದ ಹೆಚ್ಚು ಹೊರಬರಬಾರದು ಎಂಬುದು ಸರ್ಕಾರ, ವೈದ್ಯರು ಸಲಹೆಯಾಗಿದೆ. ಅಲ್ಲದೆ, ಸೋಂಕು ತಡೆಯುವ ಕ್ರಮಗಳನ್ನೂ ಕಟ್ಟು ನಿಟ್ಟಾಗಿ ಪಾಲಿಸಬೇಕಾದ ತುರ್ತು ಎದುರಾಗಿದೆ.<br /><br /><strong>ಸೋಂಕು ತಡೆಯುವ ಕ್ರಮಗಳು ಮುನ್ನೆಚ್ಚರಿಕೆ ಕ್ರಮಗಳು...</strong></p>.<p>* ಪದೇ ಪದೇ ಸಾಬೂನು ಬಳಸಿ ಕೈಗಳನ್ನು ಸ್ವಚ್ಛಗೊಳಿಸುವುದು.</p>.<p>* ಕೈ ತೊಳೆಯದೇ ಕಣ್ಣು, ಬಾಯಿ, ಮೂಗನ್ನು ಮುಟ್ಟದೇ ಇರುವುದು.</p>.<p>* ಸೋಂಕಿತರಿಂದ ಸಾಧ್ಯವಾದಷ್ಟು ದೂರ ಇರುವುದು.</p>.<p>* ಮುಖಗವಸು ಅಥವಾ ಮಾಸ್ಕ್ ಬಳಕೆ ಮಾಡುವುದು</p>.<p>* ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಬೇಕು</p>.<p>* ವನ್ಯಜೀವಿಗಳು ಹಾಗೂ ಫಾರ್ಮ್ಗಳಲ್ಲಿ ಬೆಳೆಸಿರುವ ಪ್ರಾಣಿಗಳನ್ನು ಮುಟ್ಟುವಾಗ ಸುರಕ್ಷಿತಾ ಕವಚಗಳನ್ನು ಬಳಕೆ ಮಾಡುವುದು.</p>.<p>* ಶೀತ, ನೆಗಡಿ, ಜ್ವರ ಕಾಣಿಸಿಕೊಂಡರೆ ಮನೆಯಲ್ಲಿ ವಿಶ್ರಾಂತಿ ಪಡೆಯುವುದು.</p>.<p>* ಮೇಲಿನ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿಸುವುದು.</p>.<p><strong>ಮನೆಯಲ್ಲಿಯೇ ಪ್ರತ್ಯೇಕವಾಗಿಇರಬೇಕಾದವರಿಗೆ ಮಾರ್ಗಸೂಚಿಗಳು</strong></p>.<p>– ಪ್ರತ್ಯೇಕ ವಾಸದ ಅವಧಿಯಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ವರದಿ ಮಾಡಿಕೊಳ್ಳಬೇಕು</p>.<p>– ಪ್ರತ್ಯೇಕ ಶೌಚಾಲಯ ಇರುವ ಕೊಠಡಿಯಲ್ಲಿ ಇರಬೇಕು</p>.<p>– ಮನೆಯಿಂದ ಹೊರಗಡೆ ಹೋಗಬಾರದು. ಕುಟುಂಬದ ಸದಸ್ಯರೊಂದಿಗೂ ಅಂತರ ಕಾಯ್ದುಕೊಳ್ಳಬೇಕು</p>.<p>– ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸಿದರೂ ಕನಿಷ್ಠ 2 ಮೀಟರ್ ಅಂತರ ಇಟ್ಟುಕೊಳ್ಳಬೇಕು</p>.<p>– ಮನೆಗಳಿಗೆ ಸಂದರ್ಶಕರು ಬರುವುದನ್ನು ತಡೆಯಬೇಕು</p>.<p>– ಬಾಯಿ, ಕಣ್ಣು, ಮೂಗನ್ನು ಮುಟ್ಟಿಕೊಳ್ಳಬಾರದು</p>.<p>– ಮುಖಗವಸು ಧರಿಸಿರಬೇಕು. ಆಗಾಗ ಸ್ಯಾನಿಟೈಸರ್ನಿಂದ ಕೈಗಳನ್ನು ತೊಳೆದುಕೊಳ್ಳಬೇಕು</p>.<p>– ಕೆಮ್ಮುವಾಗ, ಸೀನುವಾಗ ಕರವಸ್ತ್ರವನ್ನು ಬಳಕೆ ಮಾಡಬೇಕು</p>.<p>– ಎಲ್ಲೆಂದರಲ್ಲಿ ಉಗುಳುವ ಹವ್ಯಾಸ ರೂಢಿಸಿಕೊಳ್ಳಬಾರದು</p>.<p>– ಮಕ್ಕಳು, ವೃದ್ಧರು, ಗರ್ಭಿಣಿಯರಿಂದ ಆದಷ್ಟು ಅಂತರ ಕಾಯ್ದುಕೊಳ್ಳಬೇಕು</p>.<p>–ಯಾವುದೇ ಸಾರ್ವಜನಿಕ ಸಭೆ, ಸಮಾರಂಭದಲ್ಲಿ ಭಾಗವಹಿಸಬಾರದು</p>.<p>–6ರಿಂದ 8 ಗಂಟೆಗೊಮ್ಮೆ ಮಾಸ್ಕ್ ಬದಲಿಸಬೇಕು</p>.<p>–ಬಳಸಿದ ಮಾಸ್ಕ್ಗಳನ್ನು ಮುಚ್ಚಳವಿರುವ ಕಸದ ತೊಟ್ಟಿಯಲ್ಲಿ ಹಾಕಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು</p>.<p>–14 ದಿನಗಳ ಅವಧಿಯಲ್ಲಿ ಜ್ವರ, ಕೆಮ್ಮು, ನೆಗಡಿಯಾದರೆ ಹತ್ತಿರದ ಆಸ್ಪತ್ರೆಯನ್ನು ಸಂಪರ್ಕಿಸಬೇಕು</p>.<p><strong>ಆರೋಗ್ಯ ಸಹಾಯವಾಣಿ: 104 ಅಥವಾ 080 66692000/ 46848600</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕದಲ್ಲಿ ಬುಧವಾರ ಮಧ್ಯಾಹ್ನದವರೆಗೆ 41 ಇದ್ದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಸಂಜೆ ಹೊತ್ತಿಗೆ 51ಕ್ಕೆ ಏರಿತು. ಈ ಮೂಲಕ ಕರ್ನಾಟಕವು ಮಹಾರಾಷ್ಟ್ರ (128), ಕೇರಳ (118) ನಂತರದ ಸ್ಥಾನಕ್ಕೇರಿತು.</p>.<p>ರಾಜ್ಯದಲ್ಲಿ ಗುರುವಾರಒಂದೇ ದಿನ 10 ಕೊರೊನಾ ವೈರಸ್ ಪ್ರಕರಣಗಳು ದೃಢವಾಗಿದ್ದು,ಸಹಜವಾಗಿಯೇ ಆತಂಕ ಮೂಡಿಸಿದೆ. ಇನ್ನು ಈ ಬೆಳವಣಿಗೆ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ಕೊಂಚ ಅಸಹಾಯಕತೆಯಿಂದಲೇ ಮಾತನಾಡಿದ್ದಾರೆ. ‘ನಿನ್ನೆ 41 ಇದ್ದ ಪ್ರಕರಣಗಳು ಇಂದು 51 ಆಗಿದೆ. ಮುಂದೆ ಏನಾಗುತ್ತದೋ ಹೇಳಲಾಗುತ್ತಿಲ್ಲ,’ ಎಂದು ಕಳಾಹೀನರಾಗಿ ನುಡಿದಿದ್ದು ರಾಜ್ಯದ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿತು.</p>.<p>ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಲಾಕ್ಡೌನ್ಗೆ ಬದ್ಧರಾಗಿರಬೇಕು, ಮನೆಗಳಿಂದ ಹೆಚ್ಚು ಹೊರಬರಬಾರದು ಎಂಬುದು ಸರ್ಕಾರ, ವೈದ್ಯರು ಸಲಹೆಯಾಗಿದೆ. ಅಲ್ಲದೆ, ಸೋಂಕು ತಡೆಯುವ ಕ್ರಮಗಳನ್ನೂ ಕಟ್ಟು ನಿಟ್ಟಾಗಿ ಪಾಲಿಸಬೇಕಾದ ತುರ್ತು ಎದುರಾಗಿದೆ.<br /><br /><strong>ಸೋಂಕು ತಡೆಯುವ ಕ್ರಮಗಳು ಮುನ್ನೆಚ್ಚರಿಕೆ ಕ್ರಮಗಳು...</strong></p>.<p>* ಪದೇ ಪದೇ ಸಾಬೂನು ಬಳಸಿ ಕೈಗಳನ್ನು ಸ್ವಚ್ಛಗೊಳಿಸುವುದು.</p>.<p>* ಕೈ ತೊಳೆಯದೇ ಕಣ್ಣು, ಬಾಯಿ, ಮೂಗನ್ನು ಮುಟ್ಟದೇ ಇರುವುದು.</p>.<p>* ಸೋಂಕಿತರಿಂದ ಸಾಧ್ಯವಾದಷ್ಟು ದೂರ ಇರುವುದು.</p>.<p>* ಮುಖಗವಸು ಅಥವಾ ಮಾಸ್ಕ್ ಬಳಕೆ ಮಾಡುವುದು</p>.<p>* ಮಾಂಸ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಬೇಕು</p>.<p>* ವನ್ಯಜೀವಿಗಳು ಹಾಗೂ ಫಾರ್ಮ್ಗಳಲ್ಲಿ ಬೆಳೆಸಿರುವ ಪ್ರಾಣಿಗಳನ್ನು ಮುಟ್ಟುವಾಗ ಸುರಕ್ಷಿತಾ ಕವಚಗಳನ್ನು ಬಳಕೆ ಮಾಡುವುದು.</p>.<p>* ಶೀತ, ನೆಗಡಿ, ಜ್ವರ ಕಾಣಿಸಿಕೊಂಡರೆ ಮನೆಯಲ್ಲಿ ವಿಶ್ರಾಂತಿ ಪಡೆಯುವುದು.</p>.<p>* ಮೇಲಿನ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿಸುವುದು.</p>.<p><strong>ಮನೆಯಲ್ಲಿಯೇ ಪ್ರತ್ಯೇಕವಾಗಿಇರಬೇಕಾದವರಿಗೆ ಮಾರ್ಗಸೂಚಿಗಳು</strong></p>.<p>– ಪ್ರತ್ಯೇಕ ವಾಸದ ಅವಧಿಯಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ವರದಿ ಮಾಡಿಕೊಳ್ಳಬೇಕು</p>.<p>– ಪ್ರತ್ಯೇಕ ಶೌಚಾಲಯ ಇರುವ ಕೊಠಡಿಯಲ್ಲಿ ಇರಬೇಕು</p>.<p>– ಮನೆಯಿಂದ ಹೊರಗಡೆ ಹೋಗಬಾರದು. ಕುಟುಂಬದ ಸದಸ್ಯರೊಂದಿಗೂ ಅಂತರ ಕಾಯ್ದುಕೊಳ್ಳಬೇಕು</p>.<p>– ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸಿದರೂ ಕನಿಷ್ಠ 2 ಮೀಟರ್ ಅಂತರ ಇಟ್ಟುಕೊಳ್ಳಬೇಕು</p>.<p>– ಮನೆಗಳಿಗೆ ಸಂದರ್ಶಕರು ಬರುವುದನ್ನು ತಡೆಯಬೇಕು</p>.<p>– ಬಾಯಿ, ಕಣ್ಣು, ಮೂಗನ್ನು ಮುಟ್ಟಿಕೊಳ್ಳಬಾರದು</p>.<p>– ಮುಖಗವಸು ಧರಿಸಿರಬೇಕು. ಆಗಾಗ ಸ್ಯಾನಿಟೈಸರ್ನಿಂದ ಕೈಗಳನ್ನು ತೊಳೆದುಕೊಳ್ಳಬೇಕು</p>.<p>– ಕೆಮ್ಮುವಾಗ, ಸೀನುವಾಗ ಕರವಸ್ತ್ರವನ್ನು ಬಳಕೆ ಮಾಡಬೇಕು</p>.<p>– ಎಲ್ಲೆಂದರಲ್ಲಿ ಉಗುಳುವ ಹವ್ಯಾಸ ರೂಢಿಸಿಕೊಳ್ಳಬಾರದು</p>.<p>– ಮಕ್ಕಳು, ವೃದ್ಧರು, ಗರ್ಭಿಣಿಯರಿಂದ ಆದಷ್ಟು ಅಂತರ ಕಾಯ್ದುಕೊಳ್ಳಬೇಕು</p>.<p>–ಯಾವುದೇ ಸಾರ್ವಜನಿಕ ಸಭೆ, ಸಮಾರಂಭದಲ್ಲಿ ಭಾಗವಹಿಸಬಾರದು</p>.<p>–6ರಿಂದ 8 ಗಂಟೆಗೊಮ್ಮೆ ಮಾಸ್ಕ್ ಬದಲಿಸಬೇಕು</p>.<p>–ಬಳಸಿದ ಮಾಸ್ಕ್ಗಳನ್ನು ಮುಚ್ಚಳವಿರುವ ಕಸದ ತೊಟ್ಟಿಯಲ್ಲಿ ಹಾಕಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು</p>.<p>–14 ದಿನಗಳ ಅವಧಿಯಲ್ಲಿ ಜ್ವರ, ಕೆಮ್ಮು, ನೆಗಡಿಯಾದರೆ ಹತ್ತಿರದ ಆಸ್ಪತ್ರೆಯನ್ನು ಸಂಪರ್ಕಿಸಬೇಕು</p>.<p><strong>ಆರೋಗ್ಯ ಸಹಾಯವಾಣಿ: 104 ಅಥವಾ 080 66692000/ 46848600</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>