ತಾವು ಯಾವುದೇ ರೀತಿಯಲ್ಲೂ ಕರ್ತವ್ಯಲೋಪ ಎಸಗಿಲ್ಲ. ಅಧಿಕಾರದ ವ್ಯಾಪ್ತಿಯನ್ನೂ ಮೀರಿ ವರ್ತಿಸಿಲ್ಲ. ಸಭಾಪತಿಯವರ ಪೀಠದಲ್ಲಿದ್ದ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರಿಗೆ ತಾವು ಕಡತ ನೀಡಿಲ್ಲ. ಬೇರೊಬ್ಬ ಅಧಿಕಾರಿ ಕಡತ ನೀಡಿದ್ದಾರೆ. ಸದನದ ನಿಯಾಮವಳಿಯ ಝೆರಾಕ್ಸ್ ಪ್ರತಿಯನ್ನು ತಮ್ಮ ಬಳಿ ಇರಿಸಿಕೊಂಡಿದ್ದು, ಅದನ್ನು ಮಾತ್ರ ಉಪ ಸಭಾಪತಿಗೆ ನೀಡಲಾಗಿತ್ತು ಎಂದು ಕಾರ್ಯದರ್ಶಿ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.