<p><strong>ವಿಜಯಪುರ:</strong> ‘ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಲಭ್ಯವಾದ ಪರಿಣಾಮ ನಾನು ಕೊರೊನಾ ರೋಗದಿಂದ ಗುಣಮುಖವಾಗಿ ಹೊರಬಂದಿದ್ದೇನೆ’ ಎಂದು 36 ವರ್ಷ ವಯೋಮಾನದ ರೋಗಿ (ಪಿ308) ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಇಲ್ಲಿನ ಕೋವಿಡ್ 19 ಜಿಲ್ಲಾಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಯಾದ ಬಳಿಕ ಅವರು ಮಾತನಾಡಿದರು.</p>.<p>‘ಕೋವಿಡ್-19 ತಗುಲಿದ ತಕ್ಷಣ ಅತ್ಯಂತ ವಿಚಲಿತ ಮತ್ತು ಆತಂಕದ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರ್ಪಡೆಯಾದೆ. ಜೊತೆಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಎಲ್ಲ ವೈದ್ಯರ, ಸಿಬ್ಬಂದಿಯ ಅಪಾರ ನೆರವಿನ ಫಲವಾಗಿ ಸಂಪೂರ್ಣ ಗುಣಮುಖರಾಗಲು ಸಾಧ್ಯವಾಯಿತು’ ಎಂದರು.</p>.<p>ಸರ್ಕಾರದ ‘ಆಪ್ತಮಿತ್ರ’ ಆ್ಯಪ್ ಕೂಡಾ ಅವಶ್ಯಕ ಮಾರ್ಗದರ್ಶನ ನೀಡುವಲ್ಲಿ ಸಹಕಾರಿಯಾಗಿದೆ. ಮಾನಸಿಕವಾಗಿ ಸದೃಢಗೊಳಿಸಲು ವೈದ್ಯರು ಅಪಾರವಾಗಿ ನೆರವಾಗಿದ್ದು, ಮನೆ ಸ್ಯಾನಿಟೈಸ್ ಮಾಡಲು ಪಾಲಿಕೆ ಆಯುಕ್ತರು ಮತ್ತು ಸಿಬ್ಬಂದಿ ನೆರವಾಗಿದಕ್ಕೆ ಅಭಿನಂದನೆ ಸಲ್ಲಿಸಿದರು.</p>.<p>ಕೋವಿಡ್ನಿಂದ ಮುಕ್ತರಾಗಲು ಪ್ರತಿಯೊಬ್ಬ ರೋಗಿ ತಪ್ಪದೇ ಪ್ರಾಮಾಣಿಕವಾಗಿ ಮತ್ತು ವಸ್ತುನಿಷ್ಠವಾಗಿ ತಮ್ಮ ಪ್ರಯಾಣ ವಿವರ ನೀಡಬೇಕು. ಯಾವುದೇ ಮಾಹಿತಿಯನ್ನು ಮುಚ್ಚಿಡದೇ ವೈದ್ಯರಿಗೆ ಸಹಕರಿಸಿ, ಈ ರೋಗದಿಂದ ಮುಕ್ತವಾಗುವಂತೆ ಮನವಿ ಮಾಡಿದರು.<br />ಕೋವಿಡ್ ರೋಗದಿಂದ ಗುಣಮುಖ ಪಡಿಸುವಲ್ಲಿ ನೆರವಾಗಿರುವ ರಾಜ್ಯ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಹಾಗೂ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.</p>.<p><strong>ಐವರು ಬಿಡುಗಡೆ:</strong> ಕೋವಿಡ್-19 ಸೋಂಕಿನಿಂದ ಗುಣಮುಖರಾದ ಐವರನ್ನು ಶುಕ್ರವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.ಒಂದೂವರೆ ವರ್ಷದ ಹೆಣ್ಣುಮಗು (ಪಿ310), 65(ಪಿ306), 62(ಪಿ307) ಮತ್ತು 60 ವರ್ಷ ವಯಸ್ಸಿನ(ಪಿ362) ಮೂವರು ವೃದ್ದರು ಹಾಗೂ 36 ವರ್ಷ ವಯೋಮಾನದ (ಪಿ308) ಮತ್ತೊಬ್ಬರು ಕೊರೊನಾದಿಂದ ಗುಣಮುಖರಾಗಿ ಮನೆಗೆ ಮರಳಿದರು.</p>.<p>ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗಳಿಗೆ ವೈದ್ಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ, ಡ್ರೈಫ್ರೂಟ್ಸ್ ನೀಡಿ ಸ್ವಾಗತಿಸಿದರು.<br />ಜಿಲ್ಲೆಯಲ್ಲಿ ಈವರೆಗೆ 11 ಕೋವಿಡ್ ಪಾಸಿಟಿವ್ ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.<br />ಆಸ್ಪತ್ರೆಯ ಸರ್ಜನ್ ಶರಣಪ್ಪ ಕಟ್ಟಿ, ಡಾ.ಲಕ್ಕಣ್ಣವರ, ಡಾ.ಇಂಗಳೆ, ಡಾ.ಎ.ಜೆ. ಬಿರಾದಾರ, ಡಾ. ಶೈಲಶ್ರೀ ಎಂ, ಮೇಲ್ವಿಚಾರಕ ಅಜೀತ, ಪಿಎಸ್ಐ ಶಿವಕುಮಾರ, ನರ್ಸ್ ಶಾಂತಾ, ಸುಜಾತಾ ಮತ್ತು ಮೋಮಿನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಲಭ್ಯವಾದ ಪರಿಣಾಮ ನಾನು ಕೊರೊನಾ ರೋಗದಿಂದ ಗುಣಮುಖವಾಗಿ ಹೊರಬಂದಿದ್ದೇನೆ’ ಎಂದು 36 ವರ್ಷ ವಯೋಮಾನದ ರೋಗಿ (ಪಿ308) ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಇಲ್ಲಿನ ಕೋವಿಡ್ 19 ಜಿಲ್ಲಾಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಯಾದ ಬಳಿಕ ಅವರು ಮಾತನಾಡಿದರು.</p>.<p>‘ಕೋವಿಡ್-19 ತಗುಲಿದ ತಕ್ಷಣ ಅತ್ಯಂತ ವಿಚಲಿತ ಮತ್ತು ಆತಂಕದ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರ್ಪಡೆಯಾದೆ. ಜೊತೆಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಎಲ್ಲ ವೈದ್ಯರ, ಸಿಬ್ಬಂದಿಯ ಅಪಾರ ನೆರವಿನ ಫಲವಾಗಿ ಸಂಪೂರ್ಣ ಗುಣಮುಖರಾಗಲು ಸಾಧ್ಯವಾಯಿತು’ ಎಂದರು.</p>.<p>ಸರ್ಕಾರದ ‘ಆಪ್ತಮಿತ್ರ’ ಆ್ಯಪ್ ಕೂಡಾ ಅವಶ್ಯಕ ಮಾರ್ಗದರ್ಶನ ನೀಡುವಲ್ಲಿ ಸಹಕಾರಿಯಾಗಿದೆ. ಮಾನಸಿಕವಾಗಿ ಸದೃಢಗೊಳಿಸಲು ವೈದ್ಯರು ಅಪಾರವಾಗಿ ನೆರವಾಗಿದ್ದು, ಮನೆ ಸ್ಯಾನಿಟೈಸ್ ಮಾಡಲು ಪಾಲಿಕೆ ಆಯುಕ್ತರು ಮತ್ತು ಸಿಬ್ಬಂದಿ ನೆರವಾಗಿದಕ್ಕೆ ಅಭಿನಂದನೆ ಸಲ್ಲಿಸಿದರು.</p>.<p>ಕೋವಿಡ್ನಿಂದ ಮುಕ್ತರಾಗಲು ಪ್ರತಿಯೊಬ್ಬ ರೋಗಿ ತಪ್ಪದೇ ಪ್ರಾಮಾಣಿಕವಾಗಿ ಮತ್ತು ವಸ್ತುನಿಷ್ಠವಾಗಿ ತಮ್ಮ ಪ್ರಯಾಣ ವಿವರ ನೀಡಬೇಕು. ಯಾವುದೇ ಮಾಹಿತಿಯನ್ನು ಮುಚ್ಚಿಡದೇ ವೈದ್ಯರಿಗೆ ಸಹಕರಿಸಿ, ಈ ರೋಗದಿಂದ ಮುಕ್ತವಾಗುವಂತೆ ಮನವಿ ಮಾಡಿದರು.<br />ಕೋವಿಡ್ ರೋಗದಿಂದ ಗುಣಮುಖ ಪಡಿಸುವಲ್ಲಿ ನೆರವಾಗಿರುವ ರಾಜ್ಯ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಹಾಗೂ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.</p>.<p><strong>ಐವರು ಬಿಡುಗಡೆ:</strong> ಕೋವಿಡ್-19 ಸೋಂಕಿನಿಂದ ಗುಣಮುಖರಾದ ಐವರನ್ನು ಶುಕ್ರವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.ಒಂದೂವರೆ ವರ್ಷದ ಹೆಣ್ಣುಮಗು (ಪಿ310), 65(ಪಿ306), 62(ಪಿ307) ಮತ್ತು 60 ವರ್ಷ ವಯಸ್ಸಿನ(ಪಿ362) ಮೂವರು ವೃದ್ದರು ಹಾಗೂ 36 ವರ್ಷ ವಯೋಮಾನದ (ಪಿ308) ಮತ್ತೊಬ್ಬರು ಕೊರೊನಾದಿಂದ ಗುಣಮುಖರಾಗಿ ಮನೆಗೆ ಮರಳಿದರು.</p>.<p>ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗಳಿಗೆ ವೈದ್ಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ, ಡ್ರೈಫ್ರೂಟ್ಸ್ ನೀಡಿ ಸ್ವಾಗತಿಸಿದರು.<br />ಜಿಲ್ಲೆಯಲ್ಲಿ ಈವರೆಗೆ 11 ಕೋವಿಡ್ ಪಾಸಿಟಿವ್ ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.<br />ಆಸ್ಪತ್ರೆಯ ಸರ್ಜನ್ ಶರಣಪ್ಪ ಕಟ್ಟಿ, ಡಾ.ಲಕ್ಕಣ್ಣವರ, ಡಾ.ಇಂಗಳೆ, ಡಾ.ಎ.ಜೆ. ಬಿರಾದಾರ, ಡಾ. ಶೈಲಶ್ರೀ ಎಂ, ಮೇಲ್ವಿಚಾರಕ ಅಜೀತ, ಪಿಎಸ್ಐ ಶಿವಕುಮಾರ, ನರ್ಸ್ ಶಾಂತಾ, ಸುಜಾತಾ ಮತ್ತು ಮೋಮಿನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>