ದತ್ತಪೀಠದಿಂದ 14 ಕಿ.ಮೀ. ದೂರದಲ್ಲಿರುವ ನಾಗೇನಹಳ್ಳಿ ಗ್ರಾಮದಲ್ಲಿ ಎರಡು ದರ್ಗಾಗಳು ಇದ್ದು, ಅದು ಬಾಬಾಬುಡನ್ ದರ್ಗಾ ಎನ್ನುವುದಕ್ಕೆ ದಾಖಲೆಗಳಿವೆ. ಮುಸ್ಲಿಂ ಸಮಾಜಕ್ಕೆ ಅದನ್ನು ಒಪ್ಪಿಸಿ ಅಭಿವೃದ್ಧಿ ಮಾಡಿಕೊಡಬೇಕು. ದತ್ತಪೀಠ ಮುಜುರಾಯಿ ಇಲಾಖೆಗೆ ಸೇರಿದ್ದು, ಹಿಂದೂ ಹಾಗೂ ಮುಸ್ಲಿಂಮರಲ್ಲಿ ಸೌಹಾರ್ದ ನಿರ್ಮಾಣವಾಗಲು ಈಗಿರುವ ದತ್ತಪೀಠವನ್ನು ಹಿಂದೂಗಳಿಗೆ, ನಾಗೇನಹಳ್ಳಿಯ ದರ್ಗಾವನ್ನು ಮುಸ್ಲಿಮರಿಗೆ ಕೊಡಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿದರು.