<p><strong>ಮೈಸೂರು: </strong>ಕೊರೊನಾ ವೈರಸ್ ಸೋಂಕು (ಕೋವಿಡ್–19) ದೃಢಪಟ್ಟಿರುವ ದೆಹಲಿಯ ಐವರು ಧರ್ಮಗುರುಗಳು 40 ದಿನ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಸಂಚಾರ ಮಾಡಿದ್ದಾರೆ.</p>.<p>ಮಾರ್ಚ್ 13ರಿಂದ 23ರವರೆಗೆ ನಾಗಮಂಗಲದ ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಪ್ರತಿದಿನ ಐದು ಬಾರಿ ಪ್ರಾರ್ಥನೆ ಮಾಡಿದ್ದು, ಈ ವೇಳೆ ನೂರಾರು ಜನರು ಅವರ ಸಂಪರ್ಕಕ್ಕೆ ಬಂದಿದ್ದಾರೆ.</p>.<p>ಮಾರ್ಚ್ 23ರಿಂದ 29ರವರೆಗೆ ಮಳವಳ್ಳಿಯಲ್ಲಿ ವಾಸ್ತವ್ಯವಿದ್ದರು. ಲಾಕ್ಡೌನ್ ಘೋಷಣೆ ಆದ ನಂತರ ಮಸೀದಿ ಪಕ್ಕದ ಮನೆಯಲ್ಲಿ ವಾಸವಿದ್ದರು.</p>.<p>ಮಾರ್ಚ್ 29ರಂದು ಮತ್ತೆ ಮೈಸೂರಿಗೆ ತೆರಳುವಾಗ ಬನ್ನೂರು ಚೆಕ್ಪೋಸ್ಟ್ನಲ್ಲಿ ಮೈಸೂರು ಜಿಲ್ಲಾಡಳಿತ ವಶಕ್ಕೆ ಪಡೆದಿತ್ತು. ಬಳಿಕ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ.</p>.<p><strong>ಒಂದೇ ದಿನ ಮೈಸೂರಿನಲ್ಲಿ ಸೋಂಕಿಗೆ ಒಳಗಾದವರು 7 ಮಂದಿ!</strong></p>.<p>ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 7 ಮಂದಿಯಲ್ಲಿ ‘ಕೋವಿಡ್–19’ ಕಾಯಿಲೆ ಕಾಣಿಸಿಕೊಂಡಿದೆ.</p>.<p>ಇವರಲ್ಲಿ ಇಬ್ಬರು ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯ ನೌಕರರ ಸಂಪರ್ಕಕ್ಕೆ ಬಂದವರಾಗಿದ್ದರೆ, ಉಳಿದ ಐವರು ದೆಹಲಿ ಪ್ರವಾಸದಿಂದ ಬಂದವರಾಗಿದ್ದಾರೆ. ಎಲ್ಲರನ್ನೂ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.</p>.<p>ಇಲ್ಲಿಗೆ ಜಿಲ್ಲೆಯಲ್ಲಿ ಕೋವಿಡ್–19 ಕ್ಕೆ ಒಳಗಾದವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಕೊರೊನಾ ವೈರಸ್ ಸೋಂಕು (ಕೋವಿಡ್–19) ದೃಢಪಟ್ಟಿರುವ ದೆಹಲಿಯ ಐವರು ಧರ್ಮಗುರುಗಳು 40 ದಿನ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಸಂಚಾರ ಮಾಡಿದ್ದಾರೆ.</p>.<p>ಮಾರ್ಚ್ 13ರಿಂದ 23ರವರೆಗೆ ನಾಗಮಂಗಲದ ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಪ್ರತಿದಿನ ಐದು ಬಾರಿ ಪ್ರಾರ್ಥನೆ ಮಾಡಿದ್ದು, ಈ ವೇಳೆ ನೂರಾರು ಜನರು ಅವರ ಸಂಪರ್ಕಕ್ಕೆ ಬಂದಿದ್ದಾರೆ.</p>.<p>ಮಾರ್ಚ್ 23ರಿಂದ 29ರವರೆಗೆ ಮಳವಳ್ಳಿಯಲ್ಲಿ ವಾಸ್ತವ್ಯವಿದ್ದರು. ಲಾಕ್ಡೌನ್ ಘೋಷಣೆ ಆದ ನಂತರ ಮಸೀದಿ ಪಕ್ಕದ ಮನೆಯಲ್ಲಿ ವಾಸವಿದ್ದರು.</p>.<p>ಮಾರ್ಚ್ 29ರಂದು ಮತ್ತೆ ಮೈಸೂರಿಗೆ ತೆರಳುವಾಗ ಬನ್ನೂರು ಚೆಕ್ಪೋಸ್ಟ್ನಲ್ಲಿ ಮೈಸೂರು ಜಿಲ್ಲಾಡಳಿತ ವಶಕ್ಕೆ ಪಡೆದಿತ್ತು. ಬಳಿಕ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ.</p>.<p><strong>ಒಂದೇ ದಿನ ಮೈಸೂರಿನಲ್ಲಿ ಸೋಂಕಿಗೆ ಒಳಗಾದವರು 7 ಮಂದಿ!</strong></p>.<p>ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 7 ಮಂದಿಯಲ್ಲಿ ‘ಕೋವಿಡ್–19’ ಕಾಯಿಲೆ ಕಾಣಿಸಿಕೊಂಡಿದೆ.</p>.<p>ಇವರಲ್ಲಿ ಇಬ್ಬರು ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯ ನೌಕರರ ಸಂಪರ್ಕಕ್ಕೆ ಬಂದವರಾಗಿದ್ದರೆ, ಉಳಿದ ಐವರು ದೆಹಲಿ ಪ್ರವಾಸದಿಂದ ಬಂದವರಾಗಿದ್ದಾರೆ. ಎಲ್ಲರನ್ನೂ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.</p>.<p>ಇಲ್ಲಿಗೆ ಜಿಲ್ಲೆಯಲ್ಲಿ ಕೋವಿಡ್–19 ಕ್ಕೆ ಒಳಗಾದವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>