<p><strong>ಮೈಸೂರು:</strong> ಬಹುತೇಕ ಎಲ್ಲ ಬಗೆಯ ಕ್ಯಾನ್ಸರ್ಗಳಿಗೂ ಒಂದೇ ಔಷಧಿಯನ್ನು ಮೈಸೂರು ವಿಶ್ವವಿದ್ಯಾಲಯ ಹಾಗೂ ಚೀನಾದ ಸಿಂಗುವಾ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ಆವಿಷ್ಕರಿಸಿದ್ದಾರೆ.</p>.<p>ಈ ಔಷಧಿಯನ್ನು ಈಗಾಗಲೇ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಫಲ ಸಿಕ್ಕಿದೆ. ಮಾನವರ ಮೇಲೆ ಪ್ರಯೋಗಕ್ಕೆ ವೇದಿಕೆ ಸಿದ್ಧವಾಗುತ್ತಿದೆ.</p>.<p>ರಸಾಯನ ವಿಜ್ಞಾನಿ, ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಸಂಶೋಧಕರಾದ ಡಾ. ಸಿ.ಡಿ.ಮೋಹನ್, ಡಾ. ಆರ್.ಶೋಭಿತ್, ಡಾ. ಬಸಪ್ಪ ಹಾಗೂ ಚೀನಾದ ಸಿಂಗುವಾ ವಿಶ್ವವಿದ್ಯಾಲಯದ ಪ್ರೊ. ಪೀಟರ್ ಇ.ಲಾಬಿ ಅವರ ತಂಡವು ಈ ಸಂಶೋಧನೆ ನಡೆಸಿದೆ. ನೂರಕ್ಕೂ ಹೆಚ್ಚು ಕ್ಯಾನ್ಸರ್ ವಿಧಗಳಿಗೆ ಒಂದೊಂದು ರೀತಿಯ ಔಷಧಗಳಿವೆ. ಈ ಪರಿಕಲ್ಪನೆಯನ್ನು ಬದಲಿಸಿ ಎಲ್ಲದಕ್ಕೂ ಒಂದೇ ಔಷಧವನ್ನು ಪ್ರಯೋಗಿಸುವ ಮಹತ್ವದ ಸಂಶೋಧನೆ ಇದಾಗಲಿದೆ.</p>.<p>ಕ್ಯಾನ್ಸರ್ ವಿಧಗಳು ಹಾಗೂ ಅವುಗಳ ತೀವ್ರತೆಗೆ ಅನುಗುಣವಾಗಿ ಮೂರು ಮುಖ್ಯ ಚಿಕಿತ್ಸಾ ವಿಧಾನಗಳಿವೆ. ಶಸ್ತ್ರಚಿಕಿತ್ಸೆ, ಕಿಮೊಥೆರಪಿ ಹಾಗೂ ರೇಡಿಯೊಥೆರಪಿ ಬಳಕೆಯಾಗುತ್ತಿವೆ. ಔಷಧದ ಮೂಲಕ ಗುಣಪಡಿಸುವ ವಿಧಾನವಾದ ಕಿಮೊಥೆರಪಿಯನ್ನು ಈ ತಂಡವು ಆಯ್ಕೆ ಮಾಡಿಕೊಂಡು ಔಷಧ ಕಂಡುಹಿಡಿದಿದೆ. ಸಾಮಾನ್ಯವಾಗಿ ಕ್ಯಾನ್ಸರ್ ಕೋಶಗಳು ಆರೋಗ್ಯವಂತ ಕೋಶಗಳಿಗಿಂತ ಬಹುಬೇಗನೇ ಬೆಳೆಯುತ್ತವೆ, ಹರಡುತ್ತವೆ. ಅಲ್ಲದೆ, ಈ ಕ್ಯಾನ್ಸರ್ ಕೋಶಗಳಿಗೆ ‘ಬಿಸಿಎಲ್–2 ಅಗೋನಿಸ್ಟ್ ಆಫ್ ಸೆಲ್ ಡೆತ್’ (BAD) ಎಂಬ ಪ್ರೋಟೀನ್ ರಕ್ಷಣೆ ನೀಡುತ್ತಿರುತ್ತದೆ. ಹಾಗಾಗಿ, ಇವು ಔಷಧಿಗೆ ಸ್ಪಂದಿಸುವುದಿಲ್ಲ. ವಿಜ್ಞಾನಿಗಳು ಸಂಶೋಧಿಸಿರುವ ಈ ಹೊಸ ಔಷಧಿಯು ನೇರವಾಗಿ ರಕ್ಷಣೆ ನೀಡುವ ಪ್ರೋಟೀನನ್ನೇ ನಾಶಗೊಳಿಸುತ್ತದೆ.</p>.<p>‘ಬಿಎಡಿ’ ಪ್ರೋಟೀನ್ ನಾಶವಾದ ಕೂಡಲೇ ಅದರ ಜತೆ ಇರುವ ಕ್ಯಾನ್ಸರ್ ಕೋಶ ತಾನಾಗೇ ಸಾಯುತ್ತದೆ. ಇದನ್ನು ಸಂಶೋಧನಾ ತಂಡವು ಇಲಿಗಳ ಮೇಲೆ ಪ್ರಯೋಗ ನಡೆಸಿದೆ. ಪ್ರಯೋಗದಲ್ಲಿ ಕಡಿಮೆ ಪ್ರಮಾಣದ ಔಷಧಿಗೇ ಕ್ಯಾನ್ಸರ್ ಪೀಡಿತ ಕೋಶಗಳು ನಾಶವಾಗಿ, ಇಲಿಯು ಆರೋಗ್ಯವಂತವಾಗುವುದು ಕಂಡುಬಂದಿದೆ.</p>.<p class="Subhead">ಅಡ್ಡಪರಿಣಾಮ ಇಲ್ಲ: ‘ಕ್ಯಾನ್ಸರ್ಗೆ ನೀಡುವ ಕಿಮೊಥೆರಪಿ ಔಷಧಿಗಳಿಂದ ಅಡ್ಡಪರಿಣಾಮಗಳು ಹೆಚ್ಚು. ಭೇದಿ, ವಾಂತಿ, ಕೂದಲು ಉದುರುವುದು ಸಾಮಾನ್ಯ. ಅಲ್ಲದೆ, ಕ್ಯಾನ್ಸರ್ ಸಂಪೂರ್ಣ ಗುಣವಾಗುವುದೂ ಅನುಮಾನ. ಜತೆಗೆ, ಕಿಮೊಥೆರಪಿ ಔಷಧಿಗಳು ಕ್ಯಾನ್ಸರ್ ಕೋಶಗಳಷ್ಟೇ ಅಲ್ಲದೆ, ಆರೋಗ್ಯವಂತ ಕೋಶಗಳನ್ನೂ ನಾಶಪಡಿಸುತ್ತವೆ. ಆದರೆ, ಈ ಹೊಸ ಔಷಧವು ಕೇವಲ ‘ಬಿಎಡಿ’ ಪ್ರೋಟೀನ್ಗಳ ಮೇಲೆ ಮಾತ್ರ ದಾಳಿ ಮಾಡುವ ಕಾರಣ, ಈ ಪ್ರೋಟೀನಿಗೆ ಅಂಟಿಕೊಂಡಿರುವ ಕ್ಯಾನ್ಸರ್ ಕೋಶಗಳು ಸಾಯುತ್ತವೆ. ಆರೋಗ್ಯವಂತ ಕೋಶಗಳಲ್ಲಿ ಈ ಪ್ರೋಟೀನ್ ಇರುವುದೇ ಇಲ್ಲ. ಆದ್ದರಿಂದ ಅಡ್ಡಪರಿಣಾಮವೂ ಇರುವುದಿಲ್ಲ’ ಎಂದು ಪ್ರೊ.ರಂಗಪ್ಪ ವಿವರಿಸಿದರು.</p>.<p>ಈ ಸಂಶೋಧನೆಯ ಪ್ರಬಂಧವು ಅಮೆರಿಕದ ‘ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ ವೈಜ್ಞಾನಿಕ ನಿಯತಕಾಲಿಕದಲ್ಲಿ ಪ್ರಕಟಣೆಗಾಗಿ ಸ್ವೀಕೃತಗೊಂಡಿದೆ. ಈ ಔಷಧವನ್ನು ವಿಶ್ವದ ಪ್ರಮುಖ ಕ್ಯಾನ್ಸರ್ ತಜ್ಞ ವಿಜ್ಞಾನಿಗಳು ಪರಾಮರ್ಶಿಸಿ, ಮಾನವನ ಮೇಲೆ ಪ್ರಯೋಗಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಮುಂದಿನ ಹಂತದಲ್ಲಿ ಸಂಶೋಧನೆ ಯಶಸ್ಸು ಕಂಡರೆ ಕ್ಯಾನ್ಸರ್ಗೆ ಪರಿಪೂರ್ಣ ಚಿಕಿತ್ಸೆ ಸಾಧ್ಯ ಎಂದು ತಿಳಿಸಿದರು.</p>.<p><strong>ಔಷಧ ತಯಾರಿ ಹೇಗೆ?</strong></p>.<p>ಭೌತವಿಜ್ಞಾನಿಗಳು ಯಾವುದೇ ಹೊಸ ಔಷಧವನ್ನು ಕಂಡುಹಿಡಿಯುವಾಗ ಆ ಔಷಧದ ಸೂತ್ರವನ್ನಷ್ಟೇ ಸಂಶೋಧಿಸುತ್ತಾರೆ. ಅದನ್ನು ಅಣುಬೀಜ ರಚನೆ (Molecular Structure) ಎನ್ನುತ್ತಾರೆ. ಈ ಸೂತ್ರವು ವೈದ್ಯಕೀಯ ಲೋಕಕ್ಕೆ ಒಪ್ಪಿಗೆಯಾದ ಮೇಲೆ ಔಷಧ ತಯಾರಿಕಾ ಕಂಪನಿಗಳು ಔಷಧವನ್ನು ತಯಾರಿಸುತ್ತವೆ.</p>.<p>ಕಿಮೊಥೆರಪಿ ಔಷಧಗಳನ್ನು ಸಾಮಾನ್ಯವಾಗಿ ದ್ರವ ರೂಪದಲ್ಲಿ ನೀಡಲಾಗುತ್ತದೆ. ಅದನ್ನು ವ್ಯಕ್ತಿಯ ರಕ್ತನಾಳಕ್ಕೆ ನೇರವಾಗಿ ಸೇರಿಸಲಾಗುತ್ತದೆ. ಕ್ಯಾನ್ಸರ್ ಔಷಧವು ಕ್ಯಾನ್ಸರ್ ಪೀಡಿತ ಕೋಶಗಳನ್ನು ಗುರಿಯಾಗಿಸಿಕೊಂಡು ಚಿಕಿತ್ಸೆ ಆರಂಭಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಬಹುತೇಕ ಎಲ್ಲ ಬಗೆಯ ಕ್ಯಾನ್ಸರ್ಗಳಿಗೂ ಒಂದೇ ಔಷಧಿಯನ್ನು ಮೈಸೂರು ವಿಶ್ವವಿದ್ಯಾಲಯ ಹಾಗೂ ಚೀನಾದ ಸಿಂಗುವಾ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ಆವಿಷ್ಕರಿಸಿದ್ದಾರೆ.</p>.<p>ಈ ಔಷಧಿಯನ್ನು ಈಗಾಗಲೇ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಫಲ ಸಿಕ್ಕಿದೆ. ಮಾನವರ ಮೇಲೆ ಪ್ರಯೋಗಕ್ಕೆ ವೇದಿಕೆ ಸಿದ್ಧವಾಗುತ್ತಿದೆ.</p>.<p>ರಸಾಯನ ವಿಜ್ಞಾನಿ, ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಸಂಶೋಧಕರಾದ ಡಾ. ಸಿ.ಡಿ.ಮೋಹನ್, ಡಾ. ಆರ್.ಶೋಭಿತ್, ಡಾ. ಬಸಪ್ಪ ಹಾಗೂ ಚೀನಾದ ಸಿಂಗುವಾ ವಿಶ್ವವಿದ್ಯಾಲಯದ ಪ್ರೊ. ಪೀಟರ್ ಇ.ಲಾಬಿ ಅವರ ತಂಡವು ಈ ಸಂಶೋಧನೆ ನಡೆಸಿದೆ. ನೂರಕ್ಕೂ ಹೆಚ್ಚು ಕ್ಯಾನ್ಸರ್ ವಿಧಗಳಿಗೆ ಒಂದೊಂದು ರೀತಿಯ ಔಷಧಗಳಿವೆ. ಈ ಪರಿಕಲ್ಪನೆಯನ್ನು ಬದಲಿಸಿ ಎಲ್ಲದಕ್ಕೂ ಒಂದೇ ಔಷಧವನ್ನು ಪ್ರಯೋಗಿಸುವ ಮಹತ್ವದ ಸಂಶೋಧನೆ ಇದಾಗಲಿದೆ.</p>.<p>ಕ್ಯಾನ್ಸರ್ ವಿಧಗಳು ಹಾಗೂ ಅವುಗಳ ತೀವ್ರತೆಗೆ ಅನುಗುಣವಾಗಿ ಮೂರು ಮುಖ್ಯ ಚಿಕಿತ್ಸಾ ವಿಧಾನಗಳಿವೆ. ಶಸ್ತ್ರಚಿಕಿತ್ಸೆ, ಕಿಮೊಥೆರಪಿ ಹಾಗೂ ರೇಡಿಯೊಥೆರಪಿ ಬಳಕೆಯಾಗುತ್ತಿವೆ. ಔಷಧದ ಮೂಲಕ ಗುಣಪಡಿಸುವ ವಿಧಾನವಾದ ಕಿಮೊಥೆರಪಿಯನ್ನು ಈ ತಂಡವು ಆಯ್ಕೆ ಮಾಡಿಕೊಂಡು ಔಷಧ ಕಂಡುಹಿಡಿದಿದೆ. ಸಾಮಾನ್ಯವಾಗಿ ಕ್ಯಾನ್ಸರ್ ಕೋಶಗಳು ಆರೋಗ್ಯವಂತ ಕೋಶಗಳಿಗಿಂತ ಬಹುಬೇಗನೇ ಬೆಳೆಯುತ್ತವೆ, ಹರಡುತ್ತವೆ. ಅಲ್ಲದೆ, ಈ ಕ್ಯಾನ್ಸರ್ ಕೋಶಗಳಿಗೆ ‘ಬಿಸಿಎಲ್–2 ಅಗೋನಿಸ್ಟ್ ಆಫ್ ಸೆಲ್ ಡೆತ್’ (BAD) ಎಂಬ ಪ್ರೋಟೀನ್ ರಕ್ಷಣೆ ನೀಡುತ್ತಿರುತ್ತದೆ. ಹಾಗಾಗಿ, ಇವು ಔಷಧಿಗೆ ಸ್ಪಂದಿಸುವುದಿಲ್ಲ. ವಿಜ್ಞಾನಿಗಳು ಸಂಶೋಧಿಸಿರುವ ಈ ಹೊಸ ಔಷಧಿಯು ನೇರವಾಗಿ ರಕ್ಷಣೆ ನೀಡುವ ಪ್ರೋಟೀನನ್ನೇ ನಾಶಗೊಳಿಸುತ್ತದೆ.</p>.<p>‘ಬಿಎಡಿ’ ಪ್ರೋಟೀನ್ ನಾಶವಾದ ಕೂಡಲೇ ಅದರ ಜತೆ ಇರುವ ಕ್ಯಾನ್ಸರ್ ಕೋಶ ತಾನಾಗೇ ಸಾಯುತ್ತದೆ. ಇದನ್ನು ಸಂಶೋಧನಾ ತಂಡವು ಇಲಿಗಳ ಮೇಲೆ ಪ್ರಯೋಗ ನಡೆಸಿದೆ. ಪ್ರಯೋಗದಲ್ಲಿ ಕಡಿಮೆ ಪ್ರಮಾಣದ ಔಷಧಿಗೇ ಕ್ಯಾನ್ಸರ್ ಪೀಡಿತ ಕೋಶಗಳು ನಾಶವಾಗಿ, ಇಲಿಯು ಆರೋಗ್ಯವಂತವಾಗುವುದು ಕಂಡುಬಂದಿದೆ.</p>.<p class="Subhead">ಅಡ್ಡಪರಿಣಾಮ ಇಲ್ಲ: ‘ಕ್ಯಾನ್ಸರ್ಗೆ ನೀಡುವ ಕಿಮೊಥೆರಪಿ ಔಷಧಿಗಳಿಂದ ಅಡ್ಡಪರಿಣಾಮಗಳು ಹೆಚ್ಚು. ಭೇದಿ, ವಾಂತಿ, ಕೂದಲು ಉದುರುವುದು ಸಾಮಾನ್ಯ. ಅಲ್ಲದೆ, ಕ್ಯಾನ್ಸರ್ ಸಂಪೂರ್ಣ ಗುಣವಾಗುವುದೂ ಅನುಮಾನ. ಜತೆಗೆ, ಕಿಮೊಥೆರಪಿ ಔಷಧಿಗಳು ಕ್ಯಾನ್ಸರ್ ಕೋಶಗಳಷ್ಟೇ ಅಲ್ಲದೆ, ಆರೋಗ್ಯವಂತ ಕೋಶಗಳನ್ನೂ ನಾಶಪಡಿಸುತ್ತವೆ. ಆದರೆ, ಈ ಹೊಸ ಔಷಧವು ಕೇವಲ ‘ಬಿಎಡಿ’ ಪ್ರೋಟೀನ್ಗಳ ಮೇಲೆ ಮಾತ್ರ ದಾಳಿ ಮಾಡುವ ಕಾರಣ, ಈ ಪ್ರೋಟೀನಿಗೆ ಅಂಟಿಕೊಂಡಿರುವ ಕ್ಯಾನ್ಸರ್ ಕೋಶಗಳು ಸಾಯುತ್ತವೆ. ಆರೋಗ್ಯವಂತ ಕೋಶಗಳಲ್ಲಿ ಈ ಪ್ರೋಟೀನ್ ಇರುವುದೇ ಇಲ್ಲ. ಆದ್ದರಿಂದ ಅಡ್ಡಪರಿಣಾಮವೂ ಇರುವುದಿಲ್ಲ’ ಎಂದು ಪ್ರೊ.ರಂಗಪ್ಪ ವಿವರಿಸಿದರು.</p>.<p>ಈ ಸಂಶೋಧನೆಯ ಪ್ರಬಂಧವು ಅಮೆರಿಕದ ‘ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ ವೈಜ್ಞಾನಿಕ ನಿಯತಕಾಲಿಕದಲ್ಲಿ ಪ್ರಕಟಣೆಗಾಗಿ ಸ್ವೀಕೃತಗೊಂಡಿದೆ. ಈ ಔಷಧವನ್ನು ವಿಶ್ವದ ಪ್ರಮುಖ ಕ್ಯಾನ್ಸರ್ ತಜ್ಞ ವಿಜ್ಞಾನಿಗಳು ಪರಾಮರ್ಶಿಸಿ, ಮಾನವನ ಮೇಲೆ ಪ್ರಯೋಗಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಮುಂದಿನ ಹಂತದಲ್ಲಿ ಸಂಶೋಧನೆ ಯಶಸ್ಸು ಕಂಡರೆ ಕ್ಯಾನ್ಸರ್ಗೆ ಪರಿಪೂರ್ಣ ಚಿಕಿತ್ಸೆ ಸಾಧ್ಯ ಎಂದು ತಿಳಿಸಿದರು.</p>.<p><strong>ಔಷಧ ತಯಾರಿ ಹೇಗೆ?</strong></p>.<p>ಭೌತವಿಜ್ಞಾನಿಗಳು ಯಾವುದೇ ಹೊಸ ಔಷಧವನ್ನು ಕಂಡುಹಿಡಿಯುವಾಗ ಆ ಔಷಧದ ಸೂತ್ರವನ್ನಷ್ಟೇ ಸಂಶೋಧಿಸುತ್ತಾರೆ. ಅದನ್ನು ಅಣುಬೀಜ ರಚನೆ (Molecular Structure) ಎನ್ನುತ್ತಾರೆ. ಈ ಸೂತ್ರವು ವೈದ್ಯಕೀಯ ಲೋಕಕ್ಕೆ ಒಪ್ಪಿಗೆಯಾದ ಮೇಲೆ ಔಷಧ ತಯಾರಿಕಾ ಕಂಪನಿಗಳು ಔಷಧವನ್ನು ತಯಾರಿಸುತ್ತವೆ.</p>.<p>ಕಿಮೊಥೆರಪಿ ಔಷಧಗಳನ್ನು ಸಾಮಾನ್ಯವಾಗಿ ದ್ರವ ರೂಪದಲ್ಲಿ ನೀಡಲಾಗುತ್ತದೆ. ಅದನ್ನು ವ್ಯಕ್ತಿಯ ರಕ್ತನಾಳಕ್ಕೆ ನೇರವಾಗಿ ಸೇರಿಸಲಾಗುತ್ತದೆ. ಕ್ಯಾನ್ಸರ್ ಔಷಧವು ಕ್ಯಾನ್ಸರ್ ಪೀಡಿತ ಕೋಶಗಳನ್ನು ಗುರಿಯಾಗಿಸಿಕೊಂಡು ಚಿಕಿತ್ಸೆ ಆರಂಭಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>