<p><strong>ಹರಪನಹಳ್ಳಿ (ವಿಜಯನಗರ ಜಿಲ್ಲೆ):</strong> ಸಾಹಿತಿ ‘ಬೀಚಿ’ (ರಾಯಸಂ ಭೀಮಸೇನ ರಾವ್) ಅವರು ಓದಿದ್ದ ಶಾಲೆ ಶಿಥಿಲಗೊಂಡಿದ್ದು ಕಾಯಕಲ್ಪದ ನಿರೀಕ್ಷೆಯಲ್ಲಿದೆ. ಬಾಣಗೆರೆಯಲ್ಲಿ 1903ರಲ್ಲಿ ಸ್ಥಾಪಿತ ಬಾಲಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 122 ವರ್ಷ ಗತಿಸಿದೆ. </p>.<p>1 ರಿಂದ 8ನೇ ತರಗತಿಯವರೆಗಿನ ಈ ಶಾಲೆಯಲ್ಲಿ 152 ವಿದ್ಯಾರ್ಥಿಗಳಿದ್ದಾರೆ. ಏಳು ಶಿಕ್ಷಕರು ಇದ್ದಾರೆ. ಒಟ್ಟು 17 ಕೊಠಡಿಗಳಿದ್ದು, ಅದರಲ್ಲಿ 4 ಕೊಠಡಿ ಉತ್ತಮ ಸ್ಥಿತಿಯಲ್ಲಿವೆ. ಉಳಿದ ಕೊಠಡಿ ದುರಸ್ತಿ ಆಗಬೇಕಿದೆ. ತರಗತಿ ಕೋಣೆಯಲ್ಲಿಯೇ ಬಿಸಿಊಟದ ಅಡುಗೆ ಸಿದ್ಧತೆಯೂ ನಡೆಯುತ್ತದೆ.</p>.<p>‘ಶಿಥಿಲ ಸ್ಥಿತಿಯಲ್ಲಿರುವ ಕಟ್ಟಡದ ಕೊಠಡಿಗಳು ಪಾಳು ಬಿದ್ದಿವೆ. ಕೊಂಚ ಸುಸ್ಥಿತಿಯಲ್ಲಿರುವ ಕಟ್ಟಡದ ಕೊಠಡಿಗಳಲ್ಲಿ ತರಗತಿಗಳನ್ನು ನಡೆಯುತ್ತಿವೆ. ಪಾಳು ಬಿದ್ದಿರುವ ಕೊಠಡಿಗಳನ್ನು ದುರಸ್ತಿಗೊಳಿಸಿದರೆ, ಹೆಚ್ಚು ಸ್ಥಳಾವಕಾಶ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಪಾಠ ಬೋಧಿಸಲು ಅನುಕೂಲವಾಗುತ್ತದೆ’ ಎಂದು ಗ್ರಾಮಸ್ಥರು ತಿಳಿಸಿದರು.</p>.<p>ಶಾಲಾವರಣದಲ್ಲಿ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಇದ್ದರೂ ಜನರು ಮಾತ್ರ ಘನತ್ಯಾಜ್ಯವನ್ನು ಶಾಲಾವರಣದಲ್ಲಿ ಬೀಸಾಡುತ್ತಾರೆ. ಇದರಿಂದ ಶಾಲಾ ಪರಿಸರವೇ ಹದಗೆಟ್ಟಿದೆ.</p>.<p>‘ಶಾಲೆಯ ಕಟ್ಟಡದ ಕೊರತೆ, ಸ್ವಚ್ಛತೆಯಿಂದ ವಂಚಿತವಾಗಿದೆ. ಇದರಿಂದ ಶಾಲೆಯಲ್ಲಿ ದಾಖಲಾತಿ ಪ್ರಮಾಣ ಇಳಿಮುಖವಾಗಿದೆ. 1ನೇ ತರಗತಿ ಪ್ರವೇಶಕ್ಕೆ ಈವರೆಗೆ 6 ಅರ್ಜಿಗಳು ಮಾತ್ರ ಬಂದಿವೆ. ಶಾಲೆಗೆ ಅಗತ್ಯವಿರುವ 4 ಹೊಸ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಬ್ರಿಟಿಷ್ ಕಾಲದ ಕಟ್ಟಡ ಸುರಕ್ಷತೆ ಬಗ್ಗೆಯೂ ಮನವಿ ಸಲ್ಲಿಸಲಾಗಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಎಚ್.ಶಫಿವುಲ್ಲಾ ತಿಳಿಸಿದರು.</p>.<p>‘ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಮಕ್ಕಳನ್ನು ಈ ಶಾಲೆಗೆ ಕಳಿಸಿದಾಗ ಕಟ್ಟಡ ಬಿದ್ದು ಅನಾಹುತ ಸಂಭವಿಸಿದರೆ ಹೊಣೆ ಯಾರು? ಕಟ್ಟಡ ಸರಿಪಡಿಸಿದರೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಯೋಚಿಸಬಹುದು’ ಎಂದು ಸುತ್ತಮುತ್ತ ವಾಸವಾಗಿರುವ ಬಾಣಗೆರೆ ಗ್ರಾಮಸ್ಥರು ತಿಳಿಸಿದರು. </p>.<div><blockquote>ಶತಮಾನ ಪೂರೈಸಿದ ಶಾಲೆಯಲ್ಲಿ ಓದಿದವರು ಸಾವಿರಾರು ಮಂದಿ ಉನ್ನತ ಸಾಧನೆ ಮಾಡಿದ್ದಾರೆ. ಈ ಶಾಲೆಯ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. </blockquote><span class="attribution">–ಜಾಕೀರ್ ಹುಸೇನ್, ಸದಸ್ಯ ಪುರಸಭೆ</span></div>.<div><blockquote>ತಾಲ್ಲೂಕಿನಲ್ಲಿ ವಿವಿಧ ಶಾಲೆಗಳ 410 ಕೊಠಡಿ ದುರಸ್ತಿ ಹಂತದಲ್ಲಿವೆ. 212 ಕೊಠಡಿಗಳ ದುರಸ್ತಿ ಪೂರ್ಣವಾಗಿದೆ. ಉಳಿದ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ. </blockquote><span class="attribution">–ಎಚ್.ಲೇಪಾಕ್ಷಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಹರಪನಹಳ್ಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ (ವಿಜಯನಗರ ಜಿಲ್ಲೆ):</strong> ಸಾಹಿತಿ ‘ಬೀಚಿ’ (ರಾಯಸಂ ಭೀಮಸೇನ ರಾವ್) ಅವರು ಓದಿದ್ದ ಶಾಲೆ ಶಿಥಿಲಗೊಂಡಿದ್ದು ಕಾಯಕಲ್ಪದ ನಿರೀಕ್ಷೆಯಲ್ಲಿದೆ. ಬಾಣಗೆರೆಯಲ್ಲಿ 1903ರಲ್ಲಿ ಸ್ಥಾಪಿತ ಬಾಲಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ 122 ವರ್ಷ ಗತಿಸಿದೆ. </p>.<p>1 ರಿಂದ 8ನೇ ತರಗತಿಯವರೆಗಿನ ಈ ಶಾಲೆಯಲ್ಲಿ 152 ವಿದ್ಯಾರ್ಥಿಗಳಿದ್ದಾರೆ. ಏಳು ಶಿಕ್ಷಕರು ಇದ್ದಾರೆ. ಒಟ್ಟು 17 ಕೊಠಡಿಗಳಿದ್ದು, ಅದರಲ್ಲಿ 4 ಕೊಠಡಿ ಉತ್ತಮ ಸ್ಥಿತಿಯಲ್ಲಿವೆ. ಉಳಿದ ಕೊಠಡಿ ದುರಸ್ತಿ ಆಗಬೇಕಿದೆ. ತರಗತಿ ಕೋಣೆಯಲ್ಲಿಯೇ ಬಿಸಿಊಟದ ಅಡುಗೆ ಸಿದ್ಧತೆಯೂ ನಡೆಯುತ್ತದೆ.</p>.<p>‘ಶಿಥಿಲ ಸ್ಥಿತಿಯಲ್ಲಿರುವ ಕಟ್ಟಡದ ಕೊಠಡಿಗಳು ಪಾಳು ಬಿದ್ದಿವೆ. ಕೊಂಚ ಸುಸ್ಥಿತಿಯಲ್ಲಿರುವ ಕಟ್ಟಡದ ಕೊಠಡಿಗಳಲ್ಲಿ ತರಗತಿಗಳನ್ನು ನಡೆಯುತ್ತಿವೆ. ಪಾಳು ಬಿದ್ದಿರುವ ಕೊಠಡಿಗಳನ್ನು ದುರಸ್ತಿಗೊಳಿಸಿದರೆ, ಹೆಚ್ಚು ಸ್ಥಳಾವಕಾಶ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಪಾಠ ಬೋಧಿಸಲು ಅನುಕೂಲವಾಗುತ್ತದೆ’ ಎಂದು ಗ್ರಾಮಸ್ಥರು ತಿಳಿಸಿದರು.</p>.<p>ಶಾಲಾವರಣದಲ್ಲಿ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಇದ್ದರೂ ಜನರು ಮಾತ್ರ ಘನತ್ಯಾಜ್ಯವನ್ನು ಶಾಲಾವರಣದಲ್ಲಿ ಬೀಸಾಡುತ್ತಾರೆ. ಇದರಿಂದ ಶಾಲಾ ಪರಿಸರವೇ ಹದಗೆಟ್ಟಿದೆ.</p>.<p>‘ಶಾಲೆಯ ಕಟ್ಟಡದ ಕೊರತೆ, ಸ್ವಚ್ಛತೆಯಿಂದ ವಂಚಿತವಾಗಿದೆ. ಇದರಿಂದ ಶಾಲೆಯಲ್ಲಿ ದಾಖಲಾತಿ ಪ್ರಮಾಣ ಇಳಿಮುಖವಾಗಿದೆ. 1ನೇ ತರಗತಿ ಪ್ರವೇಶಕ್ಕೆ ಈವರೆಗೆ 6 ಅರ್ಜಿಗಳು ಮಾತ್ರ ಬಂದಿವೆ. ಶಾಲೆಗೆ ಅಗತ್ಯವಿರುವ 4 ಹೊಸ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಬ್ರಿಟಿಷ್ ಕಾಲದ ಕಟ್ಟಡ ಸುರಕ್ಷತೆ ಬಗ್ಗೆಯೂ ಮನವಿ ಸಲ್ಲಿಸಲಾಗಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಎಚ್.ಶಫಿವುಲ್ಲಾ ತಿಳಿಸಿದರು.</p>.<p>‘ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಮಕ್ಕಳನ್ನು ಈ ಶಾಲೆಗೆ ಕಳಿಸಿದಾಗ ಕಟ್ಟಡ ಬಿದ್ದು ಅನಾಹುತ ಸಂಭವಿಸಿದರೆ ಹೊಣೆ ಯಾರು? ಕಟ್ಟಡ ಸರಿಪಡಿಸಿದರೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಯೋಚಿಸಬಹುದು’ ಎಂದು ಸುತ್ತಮುತ್ತ ವಾಸವಾಗಿರುವ ಬಾಣಗೆರೆ ಗ್ರಾಮಸ್ಥರು ತಿಳಿಸಿದರು. </p>.<div><blockquote>ಶತಮಾನ ಪೂರೈಸಿದ ಶಾಲೆಯಲ್ಲಿ ಓದಿದವರು ಸಾವಿರಾರು ಮಂದಿ ಉನ್ನತ ಸಾಧನೆ ಮಾಡಿದ್ದಾರೆ. ಈ ಶಾಲೆಯ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. </blockquote><span class="attribution">–ಜಾಕೀರ್ ಹುಸೇನ್, ಸದಸ್ಯ ಪುರಸಭೆ</span></div>.<div><blockquote>ತಾಲ್ಲೂಕಿನಲ್ಲಿ ವಿವಿಧ ಶಾಲೆಗಳ 410 ಕೊಠಡಿ ದುರಸ್ತಿ ಹಂತದಲ್ಲಿವೆ. 212 ಕೊಠಡಿಗಳ ದುರಸ್ತಿ ಪೂರ್ಣವಾಗಿದೆ. ಉಳಿದ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ. </blockquote><span class="attribution">–ಎಚ್.ಲೇಪಾಕ್ಷಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಹರಪನಹಳ್ಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>