ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನನು ಕ್ಯಾಪ್ಟನ್, ಸೀನಿಯರ್ ಹಾಗೂ ಬಲಭೀಮ ಎಂದೆಲ್ಲ ಹೆಸರು ಪಡೆದಿದ್ದ. ಅರ್ಜುನನ ಜತೆಗೆ ನಾಡಿನ ಜನರ ನಡುವೆ ಭಾವನಾತ್ಮಕ ಸಂಬಂಧವಿತ್ತು. ಈ ಕಾರಣದಿಂದಾಗಿ, ಅರ್ಜುನನ ನೆನಪು ಸದಾ ಉಳಿಯುವಂತೆ ಮಾಡಲು ಸ್ಮಾರಕ ನಿರ್ಮಿಸುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.