<p><strong>ರಾಮನಗರ:</strong> ಕನಕಪುರ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ವಾಕಿಂಗ್ಗೆ ತೆರಳಿದ್ದ ವೇಳೆ ಆನೆ ತುಳಿದು ಚೇತನ್ ಕುಮಾರ್ (25) ಎಂಬ ಯುವಕ ಮೃತಪಟ್ಟಿದ್ದಾನೆ.<br /><br />ಟಿ. ಬೇಕುಪ್ಪೆ ನಿವಾಸಿಯಾದ ಅವರು ಮುಂಜಾನೆ ಐದರ ಸುಮಾರಿಗೆ ಕೋಡಿಹಳ್ಳಿ ಮುಖ್ಯರಸ್ತೆಯಲ್ಲಿ ಸ್ನೇಹಿತರ ಜೊತೆಗೂಡಿ ವಾಕಿಂಗ್ಗೆ ಹೋಗಿದ್ದರು. ಉಳಿದ ಇಬ್ಬರು ಸ್ನೇಹಿತರು ಮುಂದೆ ಹೋಗಿದ್ದು, ಇವರು ಹಿಂದೆ ಸಾಗುತ್ತಿದ್ದ ವೇಳೆ ಆನೆ ದಿಢೀರ್ ದಾಳಿ ನಡೆಸಿತು. ತುಳಿತಕ್ಕೆ ಸಿಕ್ಕ ಚೇತನ್ ಸ್ಥಳದಲ್ಲೇ ಅಸುನೀಗಿದ್ದಾರೆ.</p>.<p>ಸುಮಾರು ಹೊತ್ತಾದರೂ ಗೆಳೆಯ ಜೊತೆಗೆ ಬಾರದಿದ್ದ ಕಾರಣ ಆತಂಕಗೊಂಡ ಸ್ನೇಹಿತರು ಚೇತನ್ ಮೊಬೈಲ್ಗೆ ಕರೆ ಮಾಡಿದರು. ಆತ ಕರೆ ಸ್ವೀಕರಿಸದೇ ಇದ್ದಾಗ ಹಿಂದಕ್ಕೆ ಬಂದು ಹುಡುಕಿದರು. ಈ ವೇಳೆ ಚೇತನ್ ಶವ ಪತ್ತೆಯಾಯಿತು.</p>.<p>ಅರಣ್ಯಾಧಿಕಾರಿಗಳು ಹಾಗೂ ಕನಕಪುರ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಕನಕಪುರ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ವಾಕಿಂಗ್ಗೆ ತೆರಳಿದ್ದ ವೇಳೆ ಆನೆ ತುಳಿದು ಚೇತನ್ ಕುಮಾರ್ (25) ಎಂಬ ಯುವಕ ಮೃತಪಟ್ಟಿದ್ದಾನೆ.<br /><br />ಟಿ. ಬೇಕುಪ್ಪೆ ನಿವಾಸಿಯಾದ ಅವರು ಮುಂಜಾನೆ ಐದರ ಸುಮಾರಿಗೆ ಕೋಡಿಹಳ್ಳಿ ಮುಖ್ಯರಸ್ತೆಯಲ್ಲಿ ಸ್ನೇಹಿತರ ಜೊತೆಗೂಡಿ ವಾಕಿಂಗ್ಗೆ ಹೋಗಿದ್ದರು. ಉಳಿದ ಇಬ್ಬರು ಸ್ನೇಹಿತರು ಮುಂದೆ ಹೋಗಿದ್ದು, ಇವರು ಹಿಂದೆ ಸಾಗುತ್ತಿದ್ದ ವೇಳೆ ಆನೆ ದಿಢೀರ್ ದಾಳಿ ನಡೆಸಿತು. ತುಳಿತಕ್ಕೆ ಸಿಕ್ಕ ಚೇತನ್ ಸ್ಥಳದಲ್ಲೇ ಅಸುನೀಗಿದ್ದಾರೆ.</p>.<p>ಸುಮಾರು ಹೊತ್ತಾದರೂ ಗೆಳೆಯ ಜೊತೆಗೆ ಬಾರದಿದ್ದ ಕಾರಣ ಆತಂಕಗೊಂಡ ಸ್ನೇಹಿತರು ಚೇತನ್ ಮೊಬೈಲ್ಗೆ ಕರೆ ಮಾಡಿದರು. ಆತ ಕರೆ ಸ್ವೀಕರಿಸದೇ ಇದ್ದಾಗ ಹಿಂದಕ್ಕೆ ಬಂದು ಹುಡುಕಿದರು. ಈ ವೇಳೆ ಚೇತನ್ ಶವ ಪತ್ತೆಯಾಯಿತು.</p>.<p>ಅರಣ್ಯಾಧಿಕಾರಿಗಳು ಹಾಗೂ ಕನಕಪುರ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>