ಮಂಗಳವಾರ, 3 ಫೆಬ್ರುವರಿ 2026
×
ADVERTISEMENT
ADVERTISEMENT

ಅಬಕಾರಿ ಇಲಾಖೆ ಭ್ರಷ್ಟಾಚಾರ: ವಿಧಾನಸಭೆಯಲ್ಲಿ ಕೋಲಾಹಲ

Published : 3 ಫೆಬ್ರುವರಿ 2026, 21:25 IST
Last Updated : 3 ಫೆಬ್ರುವರಿ 2026, 21:25 IST
ಫಾಲೋ ಮಾಡಿ
Comments
ಮನೆ ಮನೆಗೆ ಮದ್ಯ ಪೂರೈಕೆಯೇ ನಿಮ್ಮ ಸರ್ಕಾರದ ಕಲ್ಯಾಣ ಕಾರ್ಯಕ್ರಮ. ಈ ಹಗರಣ ಸರ್ಕಾರಕ್ಕೆ ದೊಡ್ಡ ಕಪ್ಪು ಚುಕ್ಕೆಯಾಗಿದೆ.
-ಆರಗ ಜ್ಞಾನೇಂದ್ರ, ಬಿಜೆಪಿ
ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದಿದ್ದರೆ ಸಚಿವರು ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಇಷ್ಟೆಲ್ಲ ದಾಖಲೆಗಳನ್ನು ಕೊಡುತ್ತಿದ್ದರೂ ಕೇಳಿಸಿಕೊಂಡು ಕುಳಿತಿದ್ದಾರೆ.
-ವಿ.ಸುನಿಲ್‌ಕುಮಾರ್, ಬಿಜೆಪಿ
ಯಾವುದೋ ಬಾರಲ್ಲಿ ನಡೆದ ಕಥೆಯನ್ನು ಇಲ್ಲಿ ಹೇಳುತ್ತಿದ್ದಾರೆ. ಇಂತಹ ಕಥೆಗಳು ಬೇಕಾದಷ್ಟಿವೆ. ಅವುಗಳನ್ನೆಲ್ಲ ಇಲ್ಲಿ ಚರ್ಚೆ ಮಾಡಲು ಅವಕಾಶ ನೀಡಬಾರದು.
-ಕೆ.ಎಂ. ಶಿವಲಿಂಗೇಗೌಡ, ಕಾಂಗ್ರೆಸ್‌
ನಮ್ಮ ಮುಖ್ಯಮಂತ್ರಿ ಕಳಂಕರಹಿತರು ಭ್ರಷ್ಟಾಚಾರದ ಒಂದೂ ಕಪ್ಪು ಚುಕ್ಕೆ ಅವರ ಮೇಲಿಲ್ಲ. ಅವರ ವಿರುದ್ಧ ಬಿಜೆಪಿಯವರು ವೃಥಾ ಆರೋಪ ಹೊರಿಸಿದ್ದಾರೆ.
-ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್‌
ಕೆಲಸಕ್ಕೆ ಬಾರದ್ದನ್ನು ಇಲ್ಲಿಗೆ ತಂದು ಸಾಕ್ಷ್ಯ ಎಂದರೆ ಒಪ್ಪಲು ಸಾಧ್ಯವಿಲ್ಲ. ನಿಮ್ಮ ಬಳಿ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ಕೊಡಿ.
-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
ಸಿ.ಡಿ ಪ್ರದರ್ಶಿಸಿದ ಅಶೋಕ; ಕಡತ ತಂದ ಮುನಿರತ್ನ!
‘ಅಬಕಾರಿ ಇಲಾಖೆ ಭ್ರಷ್ಟಾಚಾರದ ಕುರಿತು ಅಧಿಕಾರಿಗಳು ಮಾತನಾಡಿರುವ ಮೂರು ಆಡಿಯೊಗಳು ನನ್ನ ಬಳಿ ಇವೆ’ ಎಂದ ಆರ್‌.ಅಶೋಕ ಅವರು ಪೆನ್‌ಡ್ರೈವ್‌ಗಳನ್ನು ‍ಪ್ರದರ್ಶಿಸಿದರು. ‘ಇದೇ ವಿಷಯದ ಕುರಿತಂತೆ ಕಡತಗಳ ಎರಡು ದೊಡ್ಡ ಕಟ್ಟುಗಳನ್ನು ಹೊತ್ತು ತಂದಿದ್ದ ಬಿಜೆಪಿಯ ಮುನಿರತ್ನ ಅವರು ತಮ್ಮ ಬಳಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕಡತಗಳಿವೆ ಮಾತನಾಡಲು ಅವಕಾಶ ನೀಡಿ’ ಎಂದು ಅವರು ಸಭಾಧ್ಯಕ್ಷರನ್ನು ಕೋರಿದರು. ಸಚಿವರು ಉತ್ತರ ನೀಡುವಾಗ ಅವಕಾಶ ನೀಡುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT