<p>ಕಬ್ಬಿಗೆ ನ್ಯಾಯಸಮ್ಮತ ಹಾಗೂ ಲಾಭದಾಯಕ ದರ ನೀಡುವಂತೆ ರಾಜ್ಯದ ವಿವಿಧೆಡೆ ರೈತರು ಆರಂಭಿಸಿರುವ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಪ್ರತಿ ಟನ್ ಕಬ್ಬಿಗೆ ₹3,500 ದರ ನೀಡುವಂತೆ ರೈತರು ನಡೆಸುತ್ತಿರುವ ಈ ಹೋರಾಟ ಸಕ್ಕರೆ ಜಿಲ್ಲೆ ಎಂದೇ ಹೆಸರಾದ ಬೆಳಗಾವಿಯಲ್ಲಂತೂ ಹೆಚ್ಚು ಕಾವು ಪಡೆದಿದೆ. ಕೇಂದ್ರ ಸರ್ಕಾರ ಕಬ್ಬಿಗೆ ₹3,550 ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಅಂದ್ರೆ, ಎಫ್ಆರ್ಪಿ ನಿಗದಿ ಮಾಡಿದೆ. ಅದರೆ, ರಾಜ್ಯದ ಯಾವೊಂದು ಕಾರ್ಖಾನೆಯೂ ಈ ದರವನ್ನು ಈವರೆಗೆ ನೀಡಿಲ್ಲ. ಮಹಾರಾಷ್ಟ್ರದಲ್ಲಿ ₹3,410 ದರ ನಿಗದಿ ಮಾಡಲಾಗಿದೆ. ಹೀಗಾಗಿ, ಗಡಿ ಭಾಗದ ಸುಮಾರು 10 ಲಕ್ಷ ಟನ್ನಷ್ಟು ಕಬ್ಬು ಮಹಾರಾಷ್ಟ್ರಕ್ಕೆ ಸಾಗಣೆ ಆಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>