ಕೇಂದ್ರ ಎರಡನೇ ಕಂತಿನಲ್ಲಿ ರಾಜ್ಯಕ್ಕೆ ಪರಿಹಾರದ ಹಣ ನೀಡುವುದಿಲ್ಲ. ಆ ನಿರೀಕ್ಷೆ ಇರಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ‘ನನ್ನ ವೇತನದಲ್ಲಿ ಎಸ್.ಕೆ. ಮೇಗಲ್ ಚಂದ್ರೇಗೌಡ ಕುಟುಂಬಕ್ಕೆ ₹2 ಲಕ್ಷ, ಕಾರಗದ್ದೆಯ ರೈತ ಚಂದ್ರೇಗೌಡ ಕುಟುಂಬಕ್ಕೆ ₹1 ಲಕ್ಷ ನೀಡಿದ್ದೇನೆ. ತಾಲ್ಲೂಕಿನಲ್ಲಿ ತೋಟ, ಗದ್ದೆಗೆ ಹಾನಿಯಾದ 38 ರೈತರಿಗೆ ₹10 ಸಾವಿರ ವೈಯಕ್ತಿಕವಾಗಿ ನೀಡಿದ್ದೇನೆ. ಸರ್ಕಾರಕ್ಕೆ ಈ ಮೂಲಕವಾದರೂ ಜ್ಞಾನೋದಯ ಆಗಲಿ ಎಂದು ನಾನೇ ಹಣ ವಿತರಿಸುತ್ತಿದ್ದೇನೆ’ ಎಂದೂ ಅವರು ಹೇಳಿದರು.