ಸಕಲೇಶಪುರ ಅರಣ್ಯ ವಲಯದಲ್ಲಿ ಶೋಲಾ ಅರಣ್ಯ ಒತ್ತುವರಿಯಾಗಿರುವ ಕುರಿತು ಸ್ಥಳ ತನಿಖೆ, ಭೂಮಾಪನ ನಡೆಸಿ ವರದಿ ಸಲ್ಲಿಸುವಂತೆ ವಿಶೇಷ ನ್ಯಾಯಾಲಯವು ಹಾಸನ ಜಿಲ್ಲಾಧಿಕಾರಿಗೆ ಆದೇಶಿಸಿತ್ತು. ಸಕಲೇಶಪುರ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಸ್ಥಳ ತನಿಖೆ ಮತ್ತು ಭೂಮಾಪನ ನಡೆಸಲಾಗಿತ್ತು. ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿಯ ಅಚ್ಚನಹಳ್ಳಿ ಗ್ರಾಮದ ಸರ್ವೆ ನಂಬರ್ 91, 92, 45 ಮತ್ತು 93ರಲ್ಲಿ 13 ಪ್ರಕರಣಗಳಲ್ಲಿ 63 ಎಕರೆ 24 ಗಂಟೆ ಅರಣ್ಯ ಜಮೀನು ಒತ್ತುವರಿಯಾಗಿದೆ ಎಂದು ಹಾಸನ ಜಿಲ್ಲಾಧಿಕಾರಿಯವರು ಫೆಬ್ರುವರಿ 16ರಂದು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿದ್ದರು.