‘ಎಂಟಿಬಿ ಬೇಡಿಕೆಗಳಿಗೆ ಮುಖ್ಯಮಂತ್ರಿಯೂ ಸ್ಪಂದಿಸುತ್ತಾರೆ. ಸುಧಾಕರ ಅವರ ಮನವೊಲಿಸಿ. ಪಕ್ಷಕ್ಕೆ ಒಳಿತಾಗುವ ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನು ಎಂಟಿಬಿ ನೀಡಿದ್ದಾರೆ. ಇದು ಅವರೇ ಕಟ್ಟಿದ ಪಕ್ಷ, ಕಾಂಗ್ರೆಸ್ ತೊಂದರೆಗೆ ಸಿಲುಕುವುದ ಬೇಡ. ಪಕ್ಷ ಎಲ್ಲರಿಗಿಂತಲೂ ದೊಡ್ಡದು. ಎಂಟಿಬಿ ನಮ್ಮ ಮನವಿಗೆ ಒಪ್ಪಿದ್ದಾರೆ. ಮುಂದೆ ಒಳ್ಳೇ ತೀರ್ಮಾನ ತಗೊಳ್ತಾರೆ’ ಎಂದು ಪರಮೇಶ್ವರ ಆಶಯ ವ್ಯಕ್ತಪಡಿಸಿದರು.