<p><strong>ಬೆಂಗಳೂರು: </strong>‘ಸಾಹಿತ್ಯ ಲೋಕಕ್ಕೂಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಬಹಳ ಕೊಡುಗೆ ನೀಡಿದ್ದಾರೆ. ಕೇವಲ ಸುಗಮ ಸಂಗೀತ ಕ್ಷೇತ್ರಕ್ಕೆಅವರನ್ನು ಸೀಮಿತಗೊಳಿಸಬಾರದು’ ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಅಭಿಪ್ರಾಯಪಟ್ಟರು.</p>.<p>ಸಂಗೀತ ಧಾಮ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದಭಾವಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರಿಗೆ ‘ಗೀತ ಗೌರವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಲಕ್ಷ್ಮೀನಾರಾಯಣ ಭಟ್ಟರು ಹಲವು ಪ್ರಮುಖ ಸಾಹಿತ್ಯಗಳ ಭಾಷಾಂತರದಲ್ಲೂ ಮೇಲುಗೈ ಸಾಧಿಸಿದ್ದರು. ಇದು,ಅವರಲ್ಲಿದ್ದ ಕಾವ್ಯ ಕುತೂಹಲ ಮತ್ತು ಭಾಷಾಂತರ ಪ್ರತಿಭೆಗಳಿಗೆ ನಿದರ್ಶನ. ಭಟ್ಟರ ಅನುವಾದದಿಂದ ಕನ್ನಡ ಕಾವ್ಯ ಸಮೃದ್ಧಗೊಂಡಿದೆ’ ಎಂದರು.</p>.<p>‘ಇಂತಹ ವ್ಯಕ್ತಿಯನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ಸೀಮಿತಗೊಳಿಸದೆ, ಸಾಹಿತ್ಯ ಲೋಕದಲ್ಲಿನ ಅವರ ಪಾತ್ರವನ್ನೂ ಪರಿಚಯಿಸುವ ಕೆಲಸವನ್ನು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಮಾಡಬೇಕು’ ಎಂದು ಒತ್ತಾಯಿಸಿದರು.</p>.<p>ಗಾಯಕ ವೈ.ಕೆ.ಮುದ್ದುಕೃಷ್ಣ, ‘ಭಟ್ಟರು ಸುಗಮ ಸಂಗೀತಕ್ಕೆ ದೊಡ್ಡ ಪರಿಕಲ್ಪನೆ ಸೃಷ್ಟಿಸಿದವರು. ಇಲ್ಲದಿದ್ದರೆ, ಅನೇಕರಿಗೆ ಹಾಡುವ ಅವಕಾಶಗಳು ಸಿಗುತ್ತಿರಲಿಲ್ಲ.ಭಟ್ಟರಿಗೆ ಸೌಂದರ್ಯ ಪ್ರಜ್ಞೆಯೂ ಹೆಚ್ಚಾಗಿತ್ತು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ, `ವಾಷ್ ರೂಂ ಎಲ್ಲಿದೆ' ಎಂದು ಕೇಳಿಕೊಂಡು ಹೋಗಿ, ತಲೆಬಾಚಿಕೊಂಡು, ಮುಖಕ್ಕೆ ಪೌಡರ್ ಹಚ್ಚಿಕೊಂಡು ಅಚ್ಚುಕಟ್ಟಾಗಿ ತಯಾರಾಗಿ ಬರುತ್ತಿದ್ದರು' ಎಂದು ಅವರಲ್ಲಿನ ಸೌಂದರ್ಯ ಪ್ರಜ್ಞೆಯನ್ನು ನೆನಪಿಸಿದರು.</p>.<p>ಗೀತ ಗಾಯನದಲ್ಲಿ ಕೆ.ಎಸ್.ಸುರೇಖಾ, ಮೃತ್ಯುಂಜಯ ದೊಡ್ಡವಾಡ, ಸುಪ್ರಿಯಾ ರಘುನಂದನ್, ಸೃಷ್ಟಿ ನಾಡಿಗ್, ಇಂಚರ ಪ್ರವೀಣ್ಕುಮಾರ್ ಸೇರಿದಂತೆ ಹಲವು ಗಾಯಕರು ಹಾಗೂ ಸಂಗೀತ ಧಾಮದ ವಿದ್ಯಾರ್ಥಿಗಳು ಲಕ್ಷ್ಮೀನಾರಾಯಣ ಭಟ್ಟರ ರಚನೆಯ ಗೀತೆಗಳನ್ನು ಹಾಡಿದರು.ವಿಮರ್ಶಕ ಎಚ್.ಎಸ್.ಸತ್ಯನಾರಾಯಣ ನುಡಿನಮನ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ಸಾಹಿತ್ಯ ಲೋಕಕ್ಕೂಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಬಹಳ ಕೊಡುಗೆ ನೀಡಿದ್ದಾರೆ. ಕೇವಲ ಸುಗಮ ಸಂಗೀತ ಕ್ಷೇತ್ರಕ್ಕೆಅವರನ್ನು ಸೀಮಿತಗೊಳಿಸಬಾರದು’ ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಅಭಿಪ್ರಾಯಪಟ್ಟರು.</p>.<p>ಸಂಗೀತ ಧಾಮ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದಭಾವಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರಿಗೆ ‘ಗೀತ ಗೌರವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಲಕ್ಷ್ಮೀನಾರಾಯಣ ಭಟ್ಟರು ಹಲವು ಪ್ರಮುಖ ಸಾಹಿತ್ಯಗಳ ಭಾಷಾಂತರದಲ್ಲೂ ಮೇಲುಗೈ ಸಾಧಿಸಿದ್ದರು. ಇದು,ಅವರಲ್ಲಿದ್ದ ಕಾವ್ಯ ಕುತೂಹಲ ಮತ್ತು ಭಾಷಾಂತರ ಪ್ರತಿಭೆಗಳಿಗೆ ನಿದರ್ಶನ. ಭಟ್ಟರ ಅನುವಾದದಿಂದ ಕನ್ನಡ ಕಾವ್ಯ ಸಮೃದ್ಧಗೊಂಡಿದೆ’ ಎಂದರು.</p>.<p>‘ಇಂತಹ ವ್ಯಕ್ತಿಯನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ಸೀಮಿತಗೊಳಿಸದೆ, ಸಾಹಿತ್ಯ ಲೋಕದಲ್ಲಿನ ಅವರ ಪಾತ್ರವನ್ನೂ ಪರಿಚಯಿಸುವ ಕೆಲಸವನ್ನು ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಮಾಡಬೇಕು’ ಎಂದು ಒತ್ತಾಯಿಸಿದರು.</p>.<p>ಗಾಯಕ ವೈ.ಕೆ.ಮುದ್ದುಕೃಷ್ಣ, ‘ಭಟ್ಟರು ಸುಗಮ ಸಂಗೀತಕ್ಕೆ ದೊಡ್ಡ ಪರಿಕಲ್ಪನೆ ಸೃಷ್ಟಿಸಿದವರು. ಇಲ್ಲದಿದ್ದರೆ, ಅನೇಕರಿಗೆ ಹಾಡುವ ಅವಕಾಶಗಳು ಸಿಗುತ್ತಿರಲಿಲ್ಲ.ಭಟ್ಟರಿಗೆ ಸೌಂದರ್ಯ ಪ್ರಜ್ಞೆಯೂ ಹೆಚ್ಚಾಗಿತ್ತು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ, `ವಾಷ್ ರೂಂ ಎಲ್ಲಿದೆ' ಎಂದು ಕೇಳಿಕೊಂಡು ಹೋಗಿ, ತಲೆಬಾಚಿಕೊಂಡು, ಮುಖಕ್ಕೆ ಪೌಡರ್ ಹಚ್ಚಿಕೊಂಡು ಅಚ್ಚುಕಟ್ಟಾಗಿ ತಯಾರಾಗಿ ಬರುತ್ತಿದ್ದರು' ಎಂದು ಅವರಲ್ಲಿನ ಸೌಂದರ್ಯ ಪ್ರಜ್ಞೆಯನ್ನು ನೆನಪಿಸಿದರು.</p>.<p>ಗೀತ ಗಾಯನದಲ್ಲಿ ಕೆ.ಎಸ್.ಸುರೇಖಾ, ಮೃತ್ಯುಂಜಯ ದೊಡ್ಡವಾಡ, ಸುಪ್ರಿಯಾ ರಘುನಂದನ್, ಸೃಷ್ಟಿ ನಾಡಿಗ್, ಇಂಚರ ಪ್ರವೀಣ್ಕುಮಾರ್ ಸೇರಿದಂತೆ ಹಲವು ಗಾಯಕರು ಹಾಗೂ ಸಂಗೀತ ಧಾಮದ ವಿದ್ಯಾರ್ಥಿಗಳು ಲಕ್ಷ್ಮೀನಾರಾಯಣ ಭಟ್ಟರ ರಚನೆಯ ಗೀತೆಗಳನ್ನು ಹಾಡಿದರು.ವಿಮರ್ಶಕ ಎಚ್.ಎಸ್.ಸತ್ಯನಾರಾಯಣ ನುಡಿನಮನ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>