ಗಾಯಕ ವೈ.ಕೆ.ಮುದ್ದುಕೃಷ್ಣ, ‘ಭಟ್ಟರು ಸುಗಮ ಸಂಗೀತಕ್ಕೆ ದೊಡ್ಡ ಪರಿಕಲ್ಪನೆ ಸೃಷ್ಟಿಸಿದವರು. ಇಲ್ಲದಿದ್ದರೆ, ಅನೇಕರಿಗೆ ಹಾಡುವ ಅವಕಾಶಗಳು ಸಿಗುತ್ತಿರಲಿಲ್ಲ.ಭಟ್ಟರಿಗೆ ಸೌಂದರ್ಯ ಪ್ರಜ್ಞೆಯೂ ಹೆಚ್ಚಾಗಿತ್ತು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ, `ವಾಷ್ ರೂಂ ಎಲ್ಲಿದೆ' ಎಂದು ಕೇಳಿಕೊಂಡು ಹೋಗಿ, ತಲೆಬಾಚಿಕೊಂಡು, ಮುಖಕ್ಕೆ ಪೌಡರ್ ಹಚ್ಚಿಕೊಂಡು ಅಚ್ಚುಕಟ್ಟಾಗಿ ತಯಾರಾಗಿ ಬರುತ್ತಿದ್ದರು' ಎಂದು ಅವರಲ್ಲಿನ ಸೌಂದರ್ಯ ಪ್ರಜ್ಞೆಯನ್ನು ನೆನಪಿಸಿದರು.