<p><strong>ಬೆಂಗಳೂರು:</strong> ಸರ್ಕಾರಿ ಶಾಲೆಗಳಲ್ಲಿ 36,000 ಕೊಠಡಿಗಳಷ್ಟು ಕೊರತೆ ಇದ್ದು, ಇದರ ಹೊಣೆ ಯಾರು ಹೊರಬೇಕು?... ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಸಿ.ಟಿ. ರವಿ ಅವರು ನಿಯಮ 72ರ ಅಡಿಯಲ್ಲಿ ಪ್ರಸ್ತಾಪಿಸಿದ ವಿಷಯ ಇಂಥದ್ದೊಂದು ಚರ್ಚೆಯನ್ನು ಹುಟ್ಟುಹಾಕಿತು.</p>.<p>ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಮಾತ್ರವಲ್ಲದೆ, ಕಟ್ಟಡಗಳು ಶಿಥಿಲವಾಗಿ ವಿದ್ಯಾರ್ಥಿಗಳು ಜೀವಭಯದಲ್ಲಿ ಅಧ್ಯಯನ ಮಾಡಬೇಕಾದ ಸ್ಥಿತಿ ಇದೆ ಎಂಬುದರತ್ತ ವಿರೋಧ ಪಕ್ಷಗಳ ಸದಸ್ಯರು ಗಮನ ಸೆಳೆದರು. ಆಡಳಿತ ಪಕ್ಷದ ಕೆಲ ಸದಸ್ಯರೂ ಈ ಬಗ್ಗೆ ದನಿಗೂಡಿಸಿದರು.</p>.<p>ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡದ ಪದಗಳ ಓದು–ಬರಹ ಬರುವುದಿಲ್ಲ, ಶಿಕ್ಷಕರಿಗಾಗಿ ಶಾಲೆ ನಡೆಸಲಾಗುತ್ತಿದೆ, ಕಲ್ಯಾಣ ಕರ್ನಾಟಕದ ಶಾಲೆಗಳಿಗೆ ಅನುದಾನವನ್ನೇ ನೀಡುತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮುಗಿಬಿದ್ದರು.</p>.<p>ಬಿಜೆಪಿಯ ಎಚ್.ವಿಶ್ವನಾಥ್, ‘ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆಗಳ ಮಧ್ಯೆ ಒಪ್ಪಂದ ಮಾಡಿಕೊಂಡು, ಸರ್ಕಾರಿ ಶಾಲೆಗಳನ್ನು ಮುಚ್ಚುವ ಸಂಚು ಜಾರಿಯಲ್ಲಿದೆ’ ಎಂದು ಆರೋಪಿಸಿದರು. </p>.<p>ಮಧು ಬಂಗಾರಪ್ಪ ಅವರು, ‘ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇರುವುದು ನಿಜ. ಆದರೆ, ಎರಡೇ ವರ್ಷದಲ್ಲಿ ಹತ್ತಾರು ಸಾವಿರ ಕೊಠಡಿಗಳು ಕೊರತೆಯಾದವೇ? ಖಾಸಗಿ ಶಾಲೆಗಳು ಎರಡು ವರ್ಷದಲ್ಲಿ ಹಿಡಿತ ಸಾಧಿಸಿದವೇ? ಈ ಹಿಂದಿನ ಎಲ್ಲ ಸರ್ಕಾರಗಳು ಮತ್ತು ಶಿಕ್ಷಣ ಸಚಿವರ ಹೊಣೆ ಇರಲಿಲ್ಲವೇ’ ಎಂದು ಹಿಂದಿನ ಸರ್ಕಾರದ ಮೇಲೆ ಹೊಣೆ ಹೊರಿಸಿದರು.</p>.<p>‘ಯಾರನ್ನೂ ದೂಷಿಸುವುದು ನನ್ನ ಉದ್ದೇಶವಲ್ಲ. ಹಿಂದಿನಿಂದ ಉಳಿಸಿಕೊಂಡು ಬಂದ ಕಾರಣಕ್ಕೇ, ಈ ಸಮಸ್ಯೆಗಳು ದೊಡ್ಡದಾಗಿವೆ. ನಾನು ಇಲಾಖೆಯು ಹೊಣೆಗಾರಿಕೆ ಹೊತ್ತಾಗ ಸರ್ಕಾರಿ ಶಾಲೆಗಳು ಐಸಿಯುನಲ್ಲಿ ಇದ್ದವು. ಈಗ ಅವುಗಳ ಸ್ಥಿತಿಯನ್ನು ಸುಧಾರಿಸಿ, ಜನರಲ್ ವಾರ್ಡ್ಗೆ ತರುವ ಕೆಲಸ ಮಾಡುತ್ತಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸರ್ಕಾರಿ ಶಾಲೆಗಳಲ್ಲಿ 36,000 ಕೊಠಡಿಗಳಷ್ಟು ಕೊರತೆ ಇದ್ದು, ಇದರ ಹೊಣೆ ಯಾರು ಹೊರಬೇಕು?... ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಸಿ.ಟಿ. ರವಿ ಅವರು ನಿಯಮ 72ರ ಅಡಿಯಲ್ಲಿ ಪ್ರಸ್ತಾಪಿಸಿದ ವಿಷಯ ಇಂಥದ್ದೊಂದು ಚರ್ಚೆಯನ್ನು ಹುಟ್ಟುಹಾಕಿತು.</p>.<p>ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಮಾತ್ರವಲ್ಲದೆ, ಕಟ್ಟಡಗಳು ಶಿಥಿಲವಾಗಿ ವಿದ್ಯಾರ್ಥಿಗಳು ಜೀವಭಯದಲ್ಲಿ ಅಧ್ಯಯನ ಮಾಡಬೇಕಾದ ಸ್ಥಿತಿ ಇದೆ ಎಂಬುದರತ್ತ ವಿರೋಧ ಪಕ್ಷಗಳ ಸದಸ್ಯರು ಗಮನ ಸೆಳೆದರು. ಆಡಳಿತ ಪಕ್ಷದ ಕೆಲ ಸದಸ್ಯರೂ ಈ ಬಗ್ಗೆ ದನಿಗೂಡಿಸಿದರು.</p>.<p>ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡದ ಪದಗಳ ಓದು–ಬರಹ ಬರುವುದಿಲ್ಲ, ಶಿಕ್ಷಕರಿಗಾಗಿ ಶಾಲೆ ನಡೆಸಲಾಗುತ್ತಿದೆ, ಕಲ್ಯಾಣ ಕರ್ನಾಟಕದ ಶಾಲೆಗಳಿಗೆ ಅನುದಾನವನ್ನೇ ನೀಡುತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮುಗಿಬಿದ್ದರು.</p>.<p>ಬಿಜೆಪಿಯ ಎಚ್.ವಿಶ್ವನಾಥ್, ‘ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆಗಳ ಮಧ್ಯೆ ಒಪ್ಪಂದ ಮಾಡಿಕೊಂಡು, ಸರ್ಕಾರಿ ಶಾಲೆಗಳನ್ನು ಮುಚ್ಚುವ ಸಂಚು ಜಾರಿಯಲ್ಲಿದೆ’ ಎಂದು ಆರೋಪಿಸಿದರು. </p>.<p>ಮಧು ಬಂಗಾರಪ್ಪ ಅವರು, ‘ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇರುವುದು ನಿಜ. ಆದರೆ, ಎರಡೇ ವರ್ಷದಲ್ಲಿ ಹತ್ತಾರು ಸಾವಿರ ಕೊಠಡಿಗಳು ಕೊರತೆಯಾದವೇ? ಖಾಸಗಿ ಶಾಲೆಗಳು ಎರಡು ವರ್ಷದಲ್ಲಿ ಹಿಡಿತ ಸಾಧಿಸಿದವೇ? ಈ ಹಿಂದಿನ ಎಲ್ಲ ಸರ್ಕಾರಗಳು ಮತ್ತು ಶಿಕ್ಷಣ ಸಚಿವರ ಹೊಣೆ ಇರಲಿಲ್ಲವೇ’ ಎಂದು ಹಿಂದಿನ ಸರ್ಕಾರದ ಮೇಲೆ ಹೊಣೆ ಹೊರಿಸಿದರು.</p>.<p>‘ಯಾರನ್ನೂ ದೂಷಿಸುವುದು ನನ್ನ ಉದ್ದೇಶವಲ್ಲ. ಹಿಂದಿನಿಂದ ಉಳಿಸಿಕೊಂಡು ಬಂದ ಕಾರಣಕ್ಕೇ, ಈ ಸಮಸ್ಯೆಗಳು ದೊಡ್ಡದಾಗಿವೆ. ನಾನು ಇಲಾಖೆಯು ಹೊಣೆಗಾರಿಕೆ ಹೊತ್ತಾಗ ಸರ್ಕಾರಿ ಶಾಲೆಗಳು ಐಸಿಯುನಲ್ಲಿ ಇದ್ದವು. ಈಗ ಅವುಗಳ ಸ್ಥಿತಿಯನ್ನು ಸುಧಾರಿಸಿ, ಜನರಲ್ ವಾರ್ಡ್ಗೆ ತರುವ ಕೆಲಸ ಮಾಡುತ್ತಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>