<p><strong>ಮೈಸೂರು:</strong> ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು– ಶಿಕ್ಷಕರ ಅನುಪಾತವನ್ನೇ (ಪಿಟಿಆರ್) ಪರಿಷ್ಕರಿಸಿರುವ ಶಿಕ್ಷಣ ಇಲಾಖೆಯು ಈಗ ‘ಹೆಚ್ಚುವರಿ’ ಶಿಕ್ಷಕರ ಪಟ್ಟಿ ಸಿದ್ಧಪಡಿಸಿದೆ. ಇದು ದಾಖಲಾತಿ ಮತ್ತು ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿ ಪ್ರತಿಕೂಲ ಪರಿಣಾಮ ಬೀರುವ ಆತಂಕ ಎದುರಾಗಿದೆ.</p><p>ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆಗುಣಮಟ್ಟದ ಶಿಕ್ಷಣ ಸಿಗಬೇಕು. ಪೂರಕವಾಗಿ ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಿಸಲು ಒತ್ತು ನೀಡಬೇಕು ಎಂಬ ಬೇಡಿಕೆ ಇರುವಾಗಲೇ, ಮರುಹೊಂದಾಣಿಕೆ ಕಸರತ್ತಿನ ಮೂಲಕ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಸದ್ದಿಲ್ಲದೆ ಮಾಡಿದೆ.</p> .<div><blockquote>ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಶಿಕ್ಷಕರ ಮರು ಹೊಂದಾಣಿಕೆ ಹೆಸರಿನಲ್ಲಿ ಮುಚ್ಚುವ ಹುನ್ನಾರ ನಡೆಸಬಾರದು. ಮೊದಲು ಖಾಲಿ ಹುದ್ದೆ ತುಂಬಲಿ</blockquote><span class="attribution">ಶಶಿಧರ ಕೋಸಂಬೆ, ಸದಸ್ಯ ಮಕ್ಕಳ ರಕ್ಷಣಾ ಹಕ್ಕುಗಳ ಆಯೋಗ</span></div>.<div><blockquote>60 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದೆ ಎಂದು ಸರ್ಕಾರವೇ ಹೇಳುತ್ತಿದೆ. 2024ರ ಡಿಸೆಂಬರ್ ಅಂಕಿ–ಅಂಶ ಆಧರಿಸಿ ಹೆಚ್ಚುವರಿ ಶಿಕ್ಷಕರ ಪಟ್ಟಿ ಸಿದ್ಧಪಡಿಸಿರುವುದು ಸರಿಯಲ್ಲ</blockquote><span class="attribution">ನಿರಂಜನಾರಾಧ್ಯ ವಿ.ಪಿ., ಶಿಕ್ಷಣ ತಜ್ಞ</span></div>.<p>ಕಿರಿಯ ಪ್ರಾಥಮಿಕ ಶಾಲೆ (1ರಿಂದ 5ನೇ ತರಗತಿ) ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ (6ರಿಂದ 8ನೇ ತಗರತಿ) ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆಯ ಕೋಷ್ಟಕ ಸಿದ್ಧಪಡಿಸಿ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಈಚೆಗೆ ಸುತ್ತೋಲೆಯನ್ನು ಹೊರಡಿಸಿದೆ.</p><p>‘ಸುಮಾರು 10 ಸಾವಿರ ಹೆಚ್ಚುವರಿ ಶಿಕ್ಷಕರ ಪಟ್ಟಿ ರಚಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗಳಿಗೆ ಇವರನ್ನು ವರ್ಗಾವಣೆ ಮಾಡಲಾಗುವುದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರ ಇದಾಗಿದೆ’ ಎಂದು ಶಿಕ್ಷಣ ಇಲಾಖೆ ಆಯುಕ್ತ ತ್ರಿಲೋಕ್ಚಂದ್ರ ಪ್ರತಿಕ್ರಿಯಿಸಿದ್ದಾರೆ. </p><p>1ರಿಂದ 11 ವಿದ್ಯಾರ್ಥಿ ಗಳಿಗೆ ಒಬ್ಬ ಶಿಕ್ಷಕ ಎಂಬ ಪಿಟಿಆರ್ ಹಾಗೇ ಉಳಿಸಲಾಗಿದೆ. 1ರಿಂದ 7ನೇ ತರಗತಿ ವರೆಗಿನ ಶಾಲೆ ಗಳಲ್ಲಿ ಹಿಂದೆ ಮುಖ್ಯೋಪಾಧ್ಯಾಯರು ಸೇರಿ ಐದು ಹುದ್ದೆಗಳನ್ನು ನಿಗದಿಪಡಿಸಲಾಗಿತ್ತು. ಈ ವರ್ಷ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 60 ಮೀರಿದರೆ ಮುಖ್ಯ ಶಿಕ್ಷಕರು ಸೇರಿದಂತೆ 4 ಹುದ್ದೆಗಳಿಗೆ ಸೀಮಿತಗೊಳಿಸಲಾಗಿದೆ.</p><p>ದಾಖಲಾತಿ ಕಡಿಮೆಯುಳ್ಳ ಶಾಲೆಗಳಲ್ಲಿ ಇದರಿಂದ ಶಿಕ್ಷಕರ ಸಂಖ್ಯೆ ಕಡಿತವಾಗಲಿವೆ. ಒಬ್ಬರೇ ಶಿಕ್ಷಕ ಎರಡು ತರಗತಿನಿರ್ವಹಿಸಬೇಕಾಗುತ್ತದೆ. ಇಬ್ಬರು ಶಿಕ್ಷಕರಿದ್ದಲ್ಲಿ ಆರು ವಿಷಯಗಳನ್ನು ಹಂಚಿಕೊಂಡು ಬೋಧಿಸಬೇಕಿದೆ ಎನ್ನುತ್ತಾರೆ ಕೊಡಗು ಜಿಲ್ಲೆ ಸರ್ಕಾರಿ ಶಾಲೆಯೊಂದರ ಇಂಗ್ಲಿಷ್ ವಿಷಯ ಶಿಕ್ಷಕ.</p><p>ಅಧಿಕಾರಿಗಳು ಹೇಳುವುದೇನು?: ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ,ಶಿಕ್ಷಕರಿಲ್ಲ ಎಂಬ ಕೊರತೆಯನ್ನು ಮರು ಹೊಂದಾಣಿಕೆ ವ್ಯವಸ್ಥೆನೀಗಿಸಲಿದೆ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಗಳು.</p><p>‘ಶಿಕ್ಷಕರ ಮರು ಹೊಂದಾಣಿಕೆ ಅವೈಜ್ಞಾನಿಕ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 60 ಮಕ್ಕಳಿದ್ದಲ್ಲಿ ಮುಖ್ಯ ಶಿಕ್ಷಕರು ಸೇರಿ ಐವರು ಶಿಕ್ಷಕರು ಇರಬೇಕು. ಮಕ್ಕಳ ದಾಖಲಾತಿಯು 90 ದಾಟಿದರೆ ಕನಿಷ್ಠ ಆರು ಶಿಕ್ಷಕರಿರಬೇಕು’ ಎಂಬುದು ಡಿಎಸ್ಇ ಆರ್ಟಿಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು. </p>.<h2>‘ಸರ್ಕಾರಿ ಶಾಲೆ ತ್ವರಿತ ಮುಚ್ಚಿಸುವ ಹುನ್ನಾರ’</h2><p>50ಸಾವಿರದಿಂದ 60ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದೆ ಎಂದು ಸರ್ಕಾರವೇ ಅಂಕಿಅಂಶ ನೀಡುತ್ತಿದೆ. ಆದರೆ, ಈಗ ಶಿಕ್ಷಕರ ಮರು ಹೊಂದಾಣಿಕೆಯು ಸರ್ಕಾರಿ ಶಾಲೆಗಳನ್ನು ಆದಷ್ಟು ತ್ವರಿತವಾಗಿ ಮುಚ್ಚುವ ಹುನ್ನಾರ’ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಅಸಮಾಧಾನ ವ್ಯಕ್ತಪಡಿಸಿದರು.</p><p>ಈ ವರ್ಷದ ಮೇ–ಜೂನ್ನಲ್ಲಾದ ದಾಖಲಾತಿ ಪರಿಗಣಿದೆ, 2024ರ ಡಿಸೆಂಬರ್ ಅಂಕಿಅಂಶ ಆಧರಿಸಿ ಹೆಚ್ಚುವರಿ ಶಿಕ್ಷಕರ ಪಟ್ಟಿ ಸಿದ್ಧಪಡಿಸಿರುವುದು ಸರಿಯಲ್ಲ ಎನ್ನುವುದು ಎನ್ನುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು– ಶಿಕ್ಷಕರ ಅನುಪಾತವನ್ನೇ (ಪಿಟಿಆರ್) ಪರಿಷ್ಕರಿಸಿರುವ ಶಿಕ್ಷಣ ಇಲಾಖೆಯು ಈಗ ‘ಹೆಚ್ಚುವರಿ’ ಶಿಕ್ಷಕರ ಪಟ್ಟಿ ಸಿದ್ಧಪಡಿಸಿದೆ. ಇದು ದಾಖಲಾತಿ ಮತ್ತು ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿ ಪ್ರತಿಕೂಲ ಪರಿಣಾಮ ಬೀರುವ ಆತಂಕ ಎದುರಾಗಿದೆ.</p><p>ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆಗುಣಮಟ್ಟದ ಶಿಕ್ಷಣ ಸಿಗಬೇಕು. ಪೂರಕವಾಗಿ ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಿಸಲು ಒತ್ತು ನೀಡಬೇಕು ಎಂಬ ಬೇಡಿಕೆ ಇರುವಾಗಲೇ, ಮರುಹೊಂದಾಣಿಕೆ ಕಸರತ್ತಿನ ಮೂಲಕ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಸದ್ದಿಲ್ಲದೆ ಮಾಡಿದೆ.</p> .<div><blockquote>ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಶಿಕ್ಷಕರ ಮರು ಹೊಂದಾಣಿಕೆ ಹೆಸರಿನಲ್ಲಿ ಮುಚ್ಚುವ ಹುನ್ನಾರ ನಡೆಸಬಾರದು. ಮೊದಲು ಖಾಲಿ ಹುದ್ದೆ ತುಂಬಲಿ</blockquote><span class="attribution">ಶಶಿಧರ ಕೋಸಂಬೆ, ಸದಸ್ಯ ಮಕ್ಕಳ ರಕ್ಷಣಾ ಹಕ್ಕುಗಳ ಆಯೋಗ</span></div>.<div><blockquote>60 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದೆ ಎಂದು ಸರ್ಕಾರವೇ ಹೇಳುತ್ತಿದೆ. 2024ರ ಡಿಸೆಂಬರ್ ಅಂಕಿ–ಅಂಶ ಆಧರಿಸಿ ಹೆಚ್ಚುವರಿ ಶಿಕ್ಷಕರ ಪಟ್ಟಿ ಸಿದ್ಧಪಡಿಸಿರುವುದು ಸರಿಯಲ್ಲ</blockquote><span class="attribution">ನಿರಂಜನಾರಾಧ್ಯ ವಿ.ಪಿ., ಶಿಕ್ಷಣ ತಜ್ಞ</span></div>.<p>ಕಿರಿಯ ಪ್ರಾಥಮಿಕ ಶಾಲೆ (1ರಿಂದ 5ನೇ ತರಗತಿ) ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ (6ರಿಂದ 8ನೇ ತಗರತಿ) ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆಯ ಕೋಷ್ಟಕ ಸಿದ್ಧಪಡಿಸಿ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಈಚೆಗೆ ಸುತ್ತೋಲೆಯನ್ನು ಹೊರಡಿಸಿದೆ.</p><p>‘ಸುಮಾರು 10 ಸಾವಿರ ಹೆಚ್ಚುವರಿ ಶಿಕ್ಷಕರ ಪಟ್ಟಿ ರಚಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗಳಿಗೆ ಇವರನ್ನು ವರ್ಗಾವಣೆ ಮಾಡಲಾಗುವುದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರ ಇದಾಗಿದೆ’ ಎಂದು ಶಿಕ್ಷಣ ಇಲಾಖೆ ಆಯುಕ್ತ ತ್ರಿಲೋಕ್ಚಂದ್ರ ಪ್ರತಿಕ್ರಿಯಿಸಿದ್ದಾರೆ. </p><p>1ರಿಂದ 11 ವಿದ್ಯಾರ್ಥಿ ಗಳಿಗೆ ಒಬ್ಬ ಶಿಕ್ಷಕ ಎಂಬ ಪಿಟಿಆರ್ ಹಾಗೇ ಉಳಿಸಲಾಗಿದೆ. 1ರಿಂದ 7ನೇ ತರಗತಿ ವರೆಗಿನ ಶಾಲೆ ಗಳಲ್ಲಿ ಹಿಂದೆ ಮುಖ್ಯೋಪಾಧ್ಯಾಯರು ಸೇರಿ ಐದು ಹುದ್ದೆಗಳನ್ನು ನಿಗದಿಪಡಿಸಲಾಗಿತ್ತು. ಈ ವರ್ಷ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 60 ಮೀರಿದರೆ ಮುಖ್ಯ ಶಿಕ್ಷಕರು ಸೇರಿದಂತೆ 4 ಹುದ್ದೆಗಳಿಗೆ ಸೀಮಿತಗೊಳಿಸಲಾಗಿದೆ.</p><p>ದಾಖಲಾತಿ ಕಡಿಮೆಯುಳ್ಳ ಶಾಲೆಗಳಲ್ಲಿ ಇದರಿಂದ ಶಿಕ್ಷಕರ ಸಂಖ್ಯೆ ಕಡಿತವಾಗಲಿವೆ. ಒಬ್ಬರೇ ಶಿಕ್ಷಕ ಎರಡು ತರಗತಿನಿರ್ವಹಿಸಬೇಕಾಗುತ್ತದೆ. ಇಬ್ಬರು ಶಿಕ್ಷಕರಿದ್ದಲ್ಲಿ ಆರು ವಿಷಯಗಳನ್ನು ಹಂಚಿಕೊಂಡು ಬೋಧಿಸಬೇಕಿದೆ ಎನ್ನುತ್ತಾರೆ ಕೊಡಗು ಜಿಲ್ಲೆ ಸರ್ಕಾರಿ ಶಾಲೆಯೊಂದರ ಇಂಗ್ಲಿಷ್ ವಿಷಯ ಶಿಕ್ಷಕ.</p><p>ಅಧಿಕಾರಿಗಳು ಹೇಳುವುದೇನು?: ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ,ಶಿಕ್ಷಕರಿಲ್ಲ ಎಂಬ ಕೊರತೆಯನ್ನು ಮರು ಹೊಂದಾಣಿಕೆ ವ್ಯವಸ್ಥೆನೀಗಿಸಲಿದೆ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಗಳು.</p><p>‘ಶಿಕ್ಷಕರ ಮರು ಹೊಂದಾಣಿಕೆ ಅವೈಜ್ಞಾನಿಕ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 60 ಮಕ್ಕಳಿದ್ದಲ್ಲಿ ಮುಖ್ಯ ಶಿಕ್ಷಕರು ಸೇರಿ ಐವರು ಶಿಕ್ಷಕರು ಇರಬೇಕು. ಮಕ್ಕಳ ದಾಖಲಾತಿಯು 90 ದಾಟಿದರೆ ಕನಿಷ್ಠ ಆರು ಶಿಕ್ಷಕರಿರಬೇಕು’ ಎಂಬುದು ಡಿಎಸ್ಇ ಆರ್ಟಿಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು. </p>.<h2>‘ಸರ್ಕಾರಿ ಶಾಲೆ ತ್ವರಿತ ಮುಚ್ಚಿಸುವ ಹುನ್ನಾರ’</h2><p>50ಸಾವಿರದಿಂದ 60ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದೆ ಎಂದು ಸರ್ಕಾರವೇ ಅಂಕಿಅಂಶ ನೀಡುತ್ತಿದೆ. ಆದರೆ, ಈಗ ಶಿಕ್ಷಕರ ಮರು ಹೊಂದಾಣಿಕೆಯು ಸರ್ಕಾರಿ ಶಾಲೆಗಳನ್ನು ಆದಷ್ಟು ತ್ವರಿತವಾಗಿ ಮುಚ್ಚುವ ಹುನ್ನಾರ’ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಅಸಮಾಧಾನ ವ್ಯಕ್ತಪಡಿಸಿದರು.</p><p>ಈ ವರ್ಷದ ಮೇ–ಜೂನ್ನಲ್ಲಾದ ದಾಖಲಾತಿ ಪರಿಗಣಿದೆ, 2024ರ ಡಿಸೆಂಬರ್ ಅಂಕಿಅಂಶ ಆಧರಿಸಿ ಹೆಚ್ಚುವರಿ ಶಿಕ್ಷಕರ ಪಟ್ಟಿ ಸಿದ್ಧಪಡಿಸಿರುವುದು ಸರಿಯಲ್ಲ ಎನ್ನುವುದು ಎನ್ನುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>