<p><strong>ಮಂಗಳೂರು:</strong> 'ದ್ವೇಷ ಭಾಷಣ ಮಸೂದೆ ವಿಧಾನಮಂಡಲದ ಉಭಯಸದನಗಳಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಅದನ್ನು ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅವರು ತಿರಸ್ಕರಿಸಿಲ್ಲ , ಹಿಂದಕ್ಕೂ ಕಳುಹಿಸಿಲ್ಲ. ಅದರ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿಲ್ಲ' ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.</p><p>ಈ ಮಸೂದೆಯನ್ನು ವಿರೋಧಿಸಿ ಬಿಜೆಪಿ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡುವ ವಿಚಾರದ ಕುರಿತು ಇಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, 'ರಾಜ್ಯಪಾಲರು ಈ ಮಸೂದೆ ಬಗ್ಗೆ ವಿವರಣೆ ಕೇಳಿದರೆ, ಹೋಗಿ ವಿವರಿಸುತ್ತೇನೆ. ಅವರು ಯಾವಾಗ ಕರೆಯುತ್ತಾರೆ ನೋಡೋಣ' ಎಂದರು.</p> .ದ್ವೇಷ ಭಾಷಣ ಮಸೂದೆ ತಿರಸ್ಕರಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ.ಯಾದಗಿರಿ: ದ್ವೇಷ ಭಾಷಣ, ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ವಿರೋಧಿಸಿ ಹೋರಾಟ. <p><strong>ಬ್ಯಾನರ್ ತೆರವು ಬಳ್ಳಾರಿ ಘಟನೆಗೆ ಪ್ರಚೋದನೆ: ಸಿದ್ದರಾಮಯ್ಯ</strong></p><p>ಬಳ್ಳಾರಿಯಿಂದ ಬೆಂಗಳೂರಿಗೆ ಬಿಜೆಪಿ ಪಾದಯಾತ್ರೆ ನಡೆಸಲು ತಯಾರಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ಪಾದಯಾತ್ರೆ ಮಾಡಲಿ ಪಾಪ. ಬೇಡ ಎಂದವರು ಯಾರು. ಬಿಜೆಪಿಯವರು, ಅದರಲ್ಲೂ ಜನಾರ್ಧನ ರೆಡ್ಡಿ, ಶ್ರೀರಾಮುಲು ಕಾಯುತ್ತಾ ಇದ್ದಾರೆ. ಅಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಅಸೂಯೆಯಿಂದ ಈ ರೀತಿ ಮಾಡುತ್ತಿದ್ದಾರೆ' ಎಂದರು.</p><p>'ನಾವು ಹಿಂದೆ ಬಳ್ಳಾರಿ ಪಾದಯಾತ್ರೆ ಮಾಡಿದ್ದು ಒಳ್ಳೆಯ ವಿಚಾರಕ್ಕಾಗಿ. ರೆಡ್ಡಿ ಸಹೋದರರು ಬಳ್ಳಾರಿ ಆಫ್ ರಿಪಬ್ಲಿಕ್ ನಡೆಸುತ್ತಿದ್ದಾರೆ. ಅಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆಗಿನ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ವರದಿ ಕೊಟ್ಟಿದ್ದರು. ಆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ನಡೆಸಿದಾಗ ರೆಡ್ಡಿ ಸಹೋದರರು ಮತ್ತು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಮೈಮೇಲೆ ಬಿದ್ದಿದ್ದರು. ಅದಕ್ಕೋಸ್ಕರ ನಾವು ಆಗ ಪಾದಯಾತ್ರೆ ಮಾಡಿದ್ದೆವು' ಎಂದರು.</p><p>'ಬಿಜೆಪಿಯವರು ಯಾವುದಕ್ಕೋಸ್ಕರ ಪಾದಯಾತ್ರೆ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮಿಕಿ ಪ್ರತಿಮೆ ಉದ್ಘಾಟನೆಯ ಬ್ಯಾನರ್ ಹಾಕಿದ್ದನ್ನು ತೆಗೆದವರು ಯಾರು. ಅದನ್ನು ತೆಗೆಯಬೇಕಾದ ಅಗತ್ಯ ಏನಿತ್ತು. ಅದರಿಂದಲೇ ಪ್ರಚೋದನೆ ಆಗಿದ್ದಲ್ಲವೇ. ಬ್ಯಾನರ್ ತೆಗೆಯದೇ ಇದ್ದಿದ್ದರೆ ಪ್ರಚೋದನೆ ಎಲ್ಲಿ ಆಗುತ್ತಿತ್ತು' ಎಂದು ಪ್ರಶ್ನಿಸಿದರು.</p><p>'ಸಂಕ್ರಾತಿ ಬಳಿಕ ಕುರ್ಚಿ ಕಾಳಗ ಭಾಗ- 2 ಆರಂಭ' ಎಂದು ಬಿಜೆಪಿಯವರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ಕಾಳಗ ಎಲ್ಲಿದೆ. ಕಾಳಗವೇ ಇಲ್ಲ. ಎಲ್ಲಾ ಸುಮ್ನೇ ಕೇಳುತ್ತೀರಿ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> 'ದ್ವೇಷ ಭಾಷಣ ಮಸೂದೆ ವಿಧಾನಮಂಡಲದ ಉಭಯಸದನಗಳಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಅದನ್ನು ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅವರು ತಿರಸ್ಕರಿಸಿಲ್ಲ , ಹಿಂದಕ್ಕೂ ಕಳುಹಿಸಿಲ್ಲ. ಅದರ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿಲ್ಲ' ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.</p><p>ಈ ಮಸೂದೆಯನ್ನು ವಿರೋಧಿಸಿ ಬಿಜೆಪಿ ಮುಖಂಡರು ರಾಜ್ಯಪಾಲರನ್ನು ಭೇಟಿ ಮಾಡುವ ವಿಚಾರದ ಕುರಿತು ಇಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, 'ರಾಜ್ಯಪಾಲರು ಈ ಮಸೂದೆ ಬಗ್ಗೆ ವಿವರಣೆ ಕೇಳಿದರೆ, ಹೋಗಿ ವಿವರಿಸುತ್ತೇನೆ. ಅವರು ಯಾವಾಗ ಕರೆಯುತ್ತಾರೆ ನೋಡೋಣ' ಎಂದರು.</p> .ದ್ವೇಷ ಭಾಷಣ ಮಸೂದೆ ತಿರಸ್ಕರಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ.ಯಾದಗಿರಿ: ದ್ವೇಷ ಭಾಷಣ, ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ವಿರೋಧಿಸಿ ಹೋರಾಟ. <p><strong>ಬ್ಯಾನರ್ ತೆರವು ಬಳ್ಳಾರಿ ಘಟನೆಗೆ ಪ್ರಚೋದನೆ: ಸಿದ್ದರಾಮಯ್ಯ</strong></p><p>ಬಳ್ಳಾರಿಯಿಂದ ಬೆಂಗಳೂರಿಗೆ ಬಿಜೆಪಿ ಪಾದಯಾತ್ರೆ ನಡೆಸಲು ತಯಾರಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ಪಾದಯಾತ್ರೆ ಮಾಡಲಿ ಪಾಪ. ಬೇಡ ಎಂದವರು ಯಾರು. ಬಿಜೆಪಿಯವರು, ಅದರಲ್ಲೂ ಜನಾರ್ಧನ ರೆಡ್ಡಿ, ಶ್ರೀರಾಮುಲು ಕಾಯುತ್ತಾ ಇದ್ದಾರೆ. ಅಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಅಸೂಯೆಯಿಂದ ಈ ರೀತಿ ಮಾಡುತ್ತಿದ್ದಾರೆ' ಎಂದರು.</p><p>'ನಾವು ಹಿಂದೆ ಬಳ್ಳಾರಿ ಪಾದಯಾತ್ರೆ ಮಾಡಿದ್ದು ಒಳ್ಳೆಯ ವಿಚಾರಕ್ಕಾಗಿ. ರೆಡ್ಡಿ ಸಹೋದರರು ಬಳ್ಳಾರಿ ಆಫ್ ರಿಪಬ್ಲಿಕ್ ನಡೆಸುತ್ತಿದ್ದಾರೆ. ಅಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆಗಿನ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ವರದಿ ಕೊಟ್ಟಿದ್ದರು. ಆ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ನಡೆಸಿದಾಗ ರೆಡ್ಡಿ ಸಹೋದರರು ಮತ್ತು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಮೈಮೇಲೆ ಬಿದ್ದಿದ್ದರು. ಅದಕ್ಕೋಸ್ಕರ ನಾವು ಆಗ ಪಾದಯಾತ್ರೆ ಮಾಡಿದ್ದೆವು' ಎಂದರು.</p><p>'ಬಿಜೆಪಿಯವರು ಯಾವುದಕ್ಕೋಸ್ಕರ ಪಾದಯಾತ್ರೆ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮಿಕಿ ಪ್ರತಿಮೆ ಉದ್ಘಾಟನೆಯ ಬ್ಯಾನರ್ ಹಾಕಿದ್ದನ್ನು ತೆಗೆದವರು ಯಾರು. ಅದನ್ನು ತೆಗೆಯಬೇಕಾದ ಅಗತ್ಯ ಏನಿತ್ತು. ಅದರಿಂದಲೇ ಪ್ರಚೋದನೆ ಆಗಿದ್ದಲ್ಲವೇ. ಬ್ಯಾನರ್ ತೆಗೆಯದೇ ಇದ್ದಿದ್ದರೆ ಪ್ರಚೋದನೆ ಎಲ್ಲಿ ಆಗುತ್ತಿತ್ತು' ಎಂದು ಪ್ರಶ್ನಿಸಿದರು.</p><p>'ಸಂಕ್ರಾತಿ ಬಳಿಕ ಕುರ್ಚಿ ಕಾಳಗ ಭಾಗ- 2 ಆರಂಭ' ಎಂದು ಬಿಜೆಪಿಯವರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ಕಾಳಗ ಎಲ್ಲಿದೆ. ಕಾಳಗವೇ ಇಲ್ಲ. ಎಲ್ಲಾ ಸುಮ್ನೇ ಕೇಳುತ್ತೀರಿ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>