‘ಅವರ ನಡೆನುಡಿ, ಬದುಕು ನಮಗೆ ಮಾತ್ರವಲ್ಲ. ಎಲ್ಲ ಸಮುದಾಯಗಳಿಗೆ ಆದರ್ಶವಾಗಿತ್ತು. ಅವರು ಎಲ್ಲ ಧರ್ಮಗಳ ಅಧಿಕೃತ ಧರ್ಮಗುರುಗಳಾಗಿದ್ದರು. ಬಸವಣ್ಣಾದಿ ಶರಣರ ಕಾಯಕ ಮತ್ತು ದಾಸೋಹ ಸಿದ್ಧಾಂತದಡಿ ಕೆಲಸಗಳನ್ನು ಮಾಡುತ್ತಿದ್ದರು. ಜೀವದಯಾಪರವಾಗಿದ್ದರು. ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರಿದವರು. ಅವರ ಬದುಕಿನ ಹಾದಿ ಎಲ್ಲರ ಬದುಕಿನ ದಾರಿಯಾಗಲಿ’ ಎಂದು ತಿಳಿಸಿದರು.