‘ಹೈಕೋರ್ಟ್ ಆದೇಶ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಶಿಫಾರಸಿನಂತೆ ಗಣಿ ಉದ್ಯಮ ಪುನರಾ ರಂಭಿಸಲು ಪರವಾನಗಿ ನೀಡುವಂತೆ ಆದೇಶಿಸುವುದಾಗಿ ನೀವು ನನಗೆ ತಿಳಿಸಿದ್ದೀರಿ. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಗಣಿ ಸಚಿವ ಸಿ.ಸಿ.ಪಾಟೀಲ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸಹಿತ ಹಲವಾರು ಮಂದಿಯೊಂದಿಗೆ ನಾನು ಈ ವಿಚಾರ ಚರ್ಚಿಸಿದ್ದೇನೆ. ಎಲ್ಲರೂ ಕ್ರಮ ಕೈಗೊಳ್ಳುವುದಾಗಿ ಹೇಳಿದರೂ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿರುವ ದೇವೇಗೌಡರು, ‘ಧರಣಿ ಹೊರತು ಬೇರೆ ದಾರಿ ಉಳಿದಿಲ್ಲ’ ಎಂದು ತಿಳಿಸಿದ್ದಾರೆ.