ಗುರುವಾರ, 6 ನವೆಂಬರ್ 2025
×
ADVERTISEMENT
ADVERTISEMENT

ಶ್ರವಣದೋಷವುಳ್ಳ ವಕೀಲರು ಅಲ್ಪಸಂಖ್ಯಾತರು: ಹೈಕೋರ್ಟ್ ಐತಿಹಾಸಿಕ ಉಲ್ಲೇಖ

Published : 6 ನವೆಂಬರ್ 2025, 16:18 IST
Last Updated : 6 ನವೆಂಬರ್ 2025, 16:18 IST
ಫಾಲೋ ಮಾಡಿ
Comments
ಶ್ರವಣದೋಷವುಳ್ಳ ವಕೀಲರ ವೃತ್ತಿಪರತೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನಮ್ಮ ಮಾನವೀಯ ಅಂತಃಕರಣ ಮಾತನಾಡಬೇಕಿದೆ. ಅಂತಹ ಅಂತಃಕರಣದ ಧ್ವನಿ ಸಮಾನತೆಯ ಕಡೆಗಿನ ಸಾಮೂಹಿಕ ನಡಿಗೆಗೆ ಸಾಕ್ಷಿಯಾಗುತ್ತದೆ
ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ಇತಿಹಾಸ ಸೃಜಿಸಿದ ಸಾರಾ ಸನ್ನಿ
‘ಯಾವುದೇ ಅನುಭವಿ ವಕೀಲರಿಗೆ ಸರಿಸಮಾನವಾಗಿ ತಮ್ಮ ವಾದವನ್ನು ಶಾಂತತೆಯಿಂದ ಮಂಡಿಸಿರುವ ಸಾರಾ ಸನ್ನಿ ಪ್ರತಿ ಅವಮಾನವನ್ನೂ ಧಿಕ್ಕರಿಸಿದ್ದಾರೆ. ಧ್ವನಿ ಅಥವಾ ಸಂಕೇತಗಳ ತೀವ್ರತೆಯನ್ನು ಚಾತುರ್ಯದಿಂದ ಪ್ರಸ್ತುತಪಡಿಸಿದ್ದಾರೆ’ ಎಂದು ನ್ಯಾಯಪೀಠ ಬಣ್ಣಿಸಿದೆ.  ‘ಸಂಸ್ಕರಣಗೊಂಡ ವಿಶಿಷ್ಟ ಲಕ್ಷಣದ ವಾದ ಮಂಡನೆಯ ಪ್ರಯತ್ನ ಮತ್ತು ಎಲ್ಲರಿಗೂ ಇದೊಂದು ಶಾಶ್ವತ ಸ್ಫೂರ್ತಿಯಾಗಿ ಉಳಿಯುತ್ತದೆ. ಮಾತ್ರವಲ್ಲ ನ್ಯಾಯವು ತನ್ನ ನಿಜವಾದ ಅರ್ಥದಲ್ಲಿ ಹೇಗಿರುತ್ತದೆ ಎಂಬುದನ್ನು ಅವರ ಈ ಪ್ರಯತ್ನ ನ್ಯಾಯಾಂಗದ ಸ್ಮೃತಿಪಟಲದಲ್ಲಿ ದೇದೀಪ್ಯಮಾನವಾಗಿ ಉಳಿಸುತ್ತದೆ’ ಎಂದು ಹೇಳಿದೆ. ಡಾ.ವಿ.ಎನ್‌.ರೇಣುಕಾ ಅವರು ಸಾರಾ ಸನ್ನಿ ಅವರಿಗೆ ಸಂಕೇತ ಭಾಷೆಯ ನೆರವು ನೀಡಿದ್ದರು. ಅರ್ಜಿದಾರ ಪತಿಯ ಪರ ಹೈಕೋರ್ಟ್ ವಕೀಲ ಕೆ.ರವೀಂದ್ರನಾಥ್‌ ಮತ್ತು ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ ಕಾಮತ್‌ ಹಾಗೂ ಡೆಪ್ಯುಟಿ ಸಾಲಿಸಿಟರ್‌ ಜನರಲ್ ಎಚ್.ಶಾಂತಿಭೂಷಣ್‌ ವಾದ ಮಂಡಿಸಿದ್ದರು.
ಬೆಂಗಳೂರಿನವರಾದ ಸಾರಾ ಸನ್ನಿ ದುಭಾಷಿಯ ನೆರವಿನಿಂದ ಸಂಕೇತ ಭಾಷೆ ಬಳಸಿ 2024ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿ ಇತಿಹಾಸ ಸೃಷ್ಟಿಸಿದ್ದರು. ಇದೀಗ ಇದೇ ಪ್ರಥಮ ಬಾರಿಗೆ ಹೈಕೋರ್ಟ್‌ನಲ್ಲೂ ಅವರು ವಾದ ಮಂಡಿಸಿದ್ದ ಪ್ರಕರಣ ವಿಲೇವಾರಿಗೊಂಡಿದ್ದು ಈ ಮೂಲಕ ಅವರು ಕರ್ನಾಟಕ ಹೈಕೋರ್ಟ್‌ನ ಇತಿಹಾಸದಲ್ಲಿ ಹೊಸ ಮಜಲಿಗೆ ಕಾರಣೀಭೂತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT