ತಂಪೆರದ ವರಣು ಕೆಲವು ಕಡೆ ಅವಘಡಗಳನ್ನೂ ಸೃಷ್ಟಿಸಿದ್ದಾನೆ. ಮೋರಿಗಳು ಬೋರ್ಗರೆದು ಹರಿಯುತ್ತಿವೆ, ಕೆಲವು ಕಡೆ ಮರಗಳು ಧರೆಗುರುಳಿವೆ. ಬಸ್, ಲಾರಿಗಳ ನಡುವೆ ಬೈಕ್ ಸವಾರರಿಗೆ ಕಾರಂಜಿಗಳ ಸಿಂಚನವಾಗಿದೆ. ಮಳೆಯಿಂದಾಗಿ ವಾಯುವಿಹಾರಿಗಳಿಗೆ ಅಡ್ಡಿಯಾಗಿದ್ದು, ನಿತ್ಯ ಸಾರ್ವಜನಿಕರಿಂದ ಗಿಜಿಗುಡುತ್ತಿದ್ದ ಉದ್ಯಾನಗಳು ಇಂದು ಬಿಕೊ ಎನ್ನುತ್ತಿದ್ದವು. ಕೆಲವರು ಮಳೆಯ ಜತೆಯಲ್ಲಿಯೇ ಜಾಗಿಂಗ್ ಮುಂದುವರಿಸಿದರು.