ಹಿಂದೂ ಜನ ಜಾಗೃತಿ ಸಮಿತಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಎಡಪಂಥೀಯರ ಹಿಂದೂ ವಿರೋಧಿ ಷಡ್ಯಂತ್ರ ಬಹಿರಂಗೊಳಿಸಲು’ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ತಪ್ಪೊಪ್ಪಿಗೆ ಹೇಳಿಕೆ ನೀಡುವಂತೆ ಪ್ರಕರಣದ ಆರೋಪಿ ಸುರೇಶ್ ಮೇಲೆ ಒತ್ತಡ ಹೇರುವ ಎಸ್ಐಟಿ ಅಧಿಕಾರಿಗಳು ಅದನ್ನು ಬಾಯಿ ಪಾಠ ಮಾಡಿಸುತ್ತಾರೆ. ಮರು ದಿನ ಬೆಳಿಗ್ಗೆ 9.30ಕ್ಕೆ ಆತನನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತದೆ. ಆ ಸಂದರ್ಭದಲ್ಲಿ ವಕೀಲರನ್ನು ಬಿಟ್ಟರೆ ಬೇರೆ ಯಾರೂ ಅಲ್ಲಿರುವುದಿಲ್ಲ. ಆತ ಹೇಳಿಕೆ ನೀಡುವಾಗ ನ್ಯಾಯಾಧೀಶರಿಗೆ ಫೋನ್ ಕರೆ ಬರುತ್ತದೆ, ನಾವು ನ್ಯಾಯವನ್ನು ಅಪೇಕ್ಷಿಸುವ ನ್ಯಾಯಾಧೀಶರಿಗೇ ಕರೆ ಬರುತ್ತದೆ. ‘ಸುರೇಶ್ ಹೇಳಿಕೆ ನೀಡಿದ್ದಾನಲ್ಲ’ ಎಂದು ಕರೆ ಮಾಡಿದ ವ್ಯಕ್ತಿ ಕೇಳುತ್ತಾರೆ. ಆ ನಂತರ ನ್ಯಾಯಾಧೀಶರ ಕೊಠಡಿಗೆ ಎಸ್ಐಟಿಯ ಮೂವರು ಅಧಿಕಾರಿಗಳು ಹೋಗುತ್ತಾರೆ. ಕೇಸರಿ ಭಯೋತ್ಪಾದನೆ ಸ್ಥಾಪಿಸಲು ಈ ರೀತಿ ಮಾಡುತ್ತಾರೆ’ ಎಂದರು.