ಗೋವಾ ಮೂಲದ ಎರಡು ಕ್ಯಾಂಟರ್ಗಳಲ್ಲಿ ಹಸು, ಹೋರಿ ಹಾಗೂ ಎಮ್ಮೆಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದ ಶ್ರೀರಾಮಸೇನೆ, ಭಜರಂಗದಳ ಹಾಗೂ ನರೇಂದ್ರ ಗ್ರಾಮಸ್ಥರು ವಾಹನಗಳಿಗೆ ಕಲ್ಲುತೂರಿ ರಸ್ತೆಯಲ್ಲೇ ತಡೆದು ನಿಲ್ಲಿಸಿದ್ದಾರೆ. ವಾಹನದಲ್ಲಿದ್ದ ಮೂವರು ಪರಾರಿಯಾಗಿದ್ದು, ಸದ್ದಾಂ ಎಂಬ ವ್ಯಕ್ತಿಗೆ ಸ್ಥಳೀಯರು ಥಳಿಸಿದ್ದಾರೆ. ವಾಹನದಲ್ಲಿದ್ದ ಹಸು, ಎಮ್ಮೆಗಳನ್ನು ಬಿಡುಗಡೆ ಮಾಡಿ, 10–12ಹಸುಗಳನ್ನು ಗ್ರಾಮಸ್ಥರೇ ಹೊಡೆದುಕೊಂಡು ಹೋಗಿದ್ದಾರೆ.