‘ಒಂದು ಕಡೆ ಕೋವಿಡ್ 19ನಿಂದ ಸಾಕಷ್ಟು ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಮತ್ತೊಂದೆಡೆ ಚೀನಾ ತನ್ನ ಕುತಂತ್ರ ಪ್ರದರ್ಶಿಸುತ್ತಿದೆ. ಈ ಹಿಂದೆ, ಜವಾಹರ್ ಲಾಲ್ ನೆಹರು ಅವರ ಕಾಲದಲ್ಲೂ ಚೀನಾ ದಾಳಿ ನಡೆಸಿತ್ತು. ಆದರೆ, ಚೀನಾದವರಿಗೆ ಮೋದಿ ಹೆಚ್ಚು ಬೆಲೆ ಕೊಟ್ಟರು. ನರಿ ಬುದ್ದಿ ಪ್ರದರ್ಶಿಸುವ ಚೀನಾಗೆ ಅಷ್ಟೊಂದು ಮಹತ್ವ ಕೊಡಬಾರದಿತ್ತು. ನೆರೆಹೊರೆಯವರು ಎಂದು ಮೋದಿ ಅಲ್ಲಿಗೆ ಹೋಗಿದ್ದಾರೆ. ಅವರು ಇಲ್ಲಿಗೆ ಬಂದಿದ್ದಾರೆ. ಆದರೆ, ಚೀನಾ ಬೆನ್ನಿಗೆ ಇರಿಯುವುದನ್ನು ಬಿಟ್ಟಿಲ್ಲ. ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ’ ಎಂದು ಆರೋಪಿಸಿದರು.