<p><strong>ಬೆಂಗಳೂರು:</strong> ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಶೇ 40 ರಷ್ಟು ಕಮಿಷನ್ ಕುರಿತ ಆರೋಪದ ತನಿಖೆಗಾಗಿ ನೇಮಿಸಲಾಗಿದ್ದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ವಿಚಾರಣಾ ಆಯೋಗದ ಅವಧಿಯನ್ನು ಇದೇ 30 ರವರೆಗೆ ವಿಸ್ತರಿಸಲಾಗಿದೆ.</p>.<p>ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಹಿಂದಿನ ಅಧ್ಯಕ್ಷ ಡಿ.ಕೆಂಪಣ್ಣ ಅವರ ಆರೋಪ ಆಧರಿಸಿ, 2023 ರ ಆಗಸ್ಟ್ನಲ್ಲಿ ಈ ಆಯೋಗವನ್ನು ರಚಿಸಲಾಗಿತ್ತು. ಬಳಿಕ, ಅನೇಕ ಬಾರಿ ಅವಧಿಯನ್ನು ವಿಸ್ತರಿಸಲಾಗಿತ್ತು. ಆಯೋಗದ ಅವಧಿ ಇದೇ ಆಗಸ್ಟ್ 30 ಕ್ಕೆ ಕೊನೆಗೊಂಡಿತ್ತು.</p>.<p>ನಾರಾಯಣಪುರ ಉಪ/ಸೀಳು ಕಾಲುವೆಗೆ ಸಂಬಂಧಿಸಿದ ಗೋಪ್ಯ ಕಡತಗಳು ಮತ್ತು ವಿಚಾರಣಾ ಆಯೋಗದ ಪೀಠೋಪಕರಣ ಹಾಗೂ ಸಾಮಗ್ರಿಗಳನ್ನು ಹಸ್ತಾಂತರಿಸುವುದು ಬಾಕಿ ಇದೆ. ಇದೇ 1 ರಂದು ಸಲ್ಲಿಸಿರುವ ತನಿಖಾ ವರದಿಗೆ ಸಂಬಂಧಿಸಿದ ಗೋಪ್ಯ ಕಡತಗಳನ್ನು ಹಸ್ತಾಂತರಿಸುವುದು ಬಾಕಿ ಇದೆ. ಈ ಕಾರಣದಿಂದ ಅವಧಿ ಮುಂದುವರಿಸುವಂತೆ ಸರ್ಕಾರಕ್ಕೆ ಆಯೋಗ ಬೇಡಿಕೆ ಸಲ್ಲಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಶೇ 40 ರಷ್ಟು ಕಮಿಷನ್ ಕುರಿತ ಆರೋಪದ ತನಿಖೆಗಾಗಿ ನೇಮಿಸಲಾಗಿದ್ದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ವಿಚಾರಣಾ ಆಯೋಗದ ಅವಧಿಯನ್ನು ಇದೇ 30 ರವರೆಗೆ ವಿಸ್ತರಿಸಲಾಗಿದೆ.</p>.<p>ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಹಿಂದಿನ ಅಧ್ಯಕ್ಷ ಡಿ.ಕೆಂಪಣ್ಣ ಅವರ ಆರೋಪ ಆಧರಿಸಿ, 2023 ರ ಆಗಸ್ಟ್ನಲ್ಲಿ ಈ ಆಯೋಗವನ್ನು ರಚಿಸಲಾಗಿತ್ತು. ಬಳಿಕ, ಅನೇಕ ಬಾರಿ ಅವಧಿಯನ್ನು ವಿಸ್ತರಿಸಲಾಗಿತ್ತು. ಆಯೋಗದ ಅವಧಿ ಇದೇ ಆಗಸ್ಟ್ 30 ಕ್ಕೆ ಕೊನೆಗೊಂಡಿತ್ತು.</p>.<p>ನಾರಾಯಣಪುರ ಉಪ/ಸೀಳು ಕಾಲುವೆಗೆ ಸಂಬಂಧಿಸಿದ ಗೋಪ್ಯ ಕಡತಗಳು ಮತ್ತು ವಿಚಾರಣಾ ಆಯೋಗದ ಪೀಠೋಪಕರಣ ಹಾಗೂ ಸಾಮಗ್ರಿಗಳನ್ನು ಹಸ್ತಾಂತರಿಸುವುದು ಬಾಕಿ ಇದೆ. ಇದೇ 1 ರಂದು ಸಲ್ಲಿಸಿರುವ ತನಿಖಾ ವರದಿಗೆ ಸಂಬಂಧಿಸಿದ ಗೋಪ್ಯ ಕಡತಗಳನ್ನು ಹಸ್ತಾಂತರಿಸುವುದು ಬಾಕಿ ಇದೆ. ಈ ಕಾರಣದಿಂದ ಅವಧಿ ಮುಂದುವರಿಸುವಂತೆ ಸರ್ಕಾರಕ್ಕೆ ಆಯೋಗ ಬೇಡಿಕೆ ಸಲ್ಲಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>