’ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಶಾಲೆ ಬಿಟ್ಟಿದ್ದ ನಮಗೆ 8ನೇ ತರಗತಿಗೆ ಸೇರಿಸಿದಾಗ ಓದುತ್ತೇವೆ ಎನ್ನುವ ಆತ್ಮವಿಶ್ವಾಸವಿರಲಿಲ್ಲ. ಆದರೆ, ಶಾಲೆಯ ಶಿಕ್ಷಕರು ಹಾಗೂ ಸ್ಪರ್ಶ ಟ್ರಸ್ಟ್ ಎಲ್ಲ ನೆರವು ನೀಡಿ, ಕಲಿಕೆಗೆ ಉತ್ತೇಜಿಸಿದರು. ಇದರಿಂದ ಕಷ್ಟಪಟ್ಟು ಓದಿದೆವು. ಅವರ ಸಹಾಯ ಎಂದಿಗೂ ಮರೆಯುವುದಿಲ್ಲ‘ ಎಂದು ಶಿವಕುಮಾರ್ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.