ಮೈಸೂರು: ‘30 ವರ್ಷಗಳಿಂದ ಇದ್ದ ತಾಯಿ ಮನೆಯಿಂದ ಓಡಿಸಿದ್ದಾರೆ. ಪಕ್ಷದಲ್ಲಿ ಇರುತ್ತೇನೆಯೋ, ಇಲ್ಲವೋ ಎನ್ನುವುದನ್ನು ಮಂಗಳವಾರ ಸಂಜೆ ತಿಳಿಸುತ್ತೇನೆ’ ಎಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತರಾದ, ಶಾಸಕ ಎಸ್.ಎ.ರಾಮದಾಸ್ ಸುದ್ದಿಗಾರರಿಗೆ ತಿಳಿಸಿದರು.
ರಾಮದಾಸ್ ಭೇಟಿಗೆಂದು ಅವರ ಮನೆಗೆ ಪಕ್ಷದ ಟಿಕೆಟ್ ಪಡೆದಿರುವ ಟಿ.ಎಸ್.ಶ್ರೀವತ್ಸ, ಸಂಸದ ಪ್ರತಾಪ ಸಿಂಹ, ಮುಖಂಡ ಮೈ.ವಿ.ರವಿಶಂಕರ್ ಬಂದಿದ್ದರು. ಆದರೆ ರಾಮದಾಸ್ ಅವರು ಭೇಟಿಗೆ ಒಪ್ಪಲಿಲ್ಲ.