‘ಮುಷ್ಕರದ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಆಟೊದಲ್ಲಿ ಪ್ರಚಾರ ಮಾಡಲು ಅನುಮತಿ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದೆವು. ಆದರೆ ಅನುಮತಿ ನಿರಾಕರಿಸಿದ್ದರು. ಹಾಗಾಗಿ ಜನರಿಗೆ ಮಾಹಿತಿ ನೀಡಲು ಸಾಧ್ಯವಾಗಿಲ್ಲ’ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮೀ ತಿಳಿಸಿದರು. ‘ಆಟೊದಲ್ಲಿ ಪ್ರಚಾರಕ್ಕೆ ಅನುಮತಿ ನೀಡದೇ ಇರುವುದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದೆವು. ನ್ಯಾಯಾಲಯವು ನಮ್ಮ ಪರ ತೀರ್ಪು ನೀಡಿದೆ. ಆದರೆ ಬುಧವಾರ ಸಂಜೆ ತೀರ್ಪು ಪ್ರತಿ ಕೈಸೇರಿದ್ದರಿಂದ ಪ್ರಚಾರ ಮಾಡಲು ಸಮಯವಿಲ್ಲದಂತಾಯಿತು’ ಎಂದು ವಿವರಿಸಿದರು.