<p><strong>ಬೆಂಗಳೂರು</strong>: ರಾಜ್ಯದ ಕಾರ್ಖಾನೆಗಳಲ್ಲಿ ಶ್ರಮಿಕರ ದುಡಿಮೆಯ ಅವಧಿಯನ್ನು ಹೆಚ್ಚಳ ಮಾಡಿ ಕಾರ್ಮಿಕ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.</p>.<p>ರಾಜ್ಯದ ಎಲ್ಲ ಕೈಗಾರಿಕೆಗಳಿಗೆ ಕಾರ್ಮಿಕ ಕಾಯ್ದೆಯ ಸೆಕ್ಷನ್ 51 ಮತ್ತು 54 ರಿಂದ ವಿನಾಯಿತಿ ನೀಡಲಾಗಿದೆ. ಈ ಮೂಲಕ ಒಂದು ದಿನದಲ್ಲಿ ಗರಿಷ್ಠ 9 ಗಂಟೆ ಇದ್ದ ದುಡಿಮೆ ಅವಧಿಯನ್ನು 10 ಗಂಟೆಗೆ ಹಾಗೂ ಒಂದು ವಾರದಲ್ಲಿ 48 ಗಂಟೆಗಳಷ್ಟಿದ್ದ ಗರಿಷ್ಠ ದುಡಿಮೆ ಅವಧಿಯನ್ನು 60 ಗಂಟೆಗೆ ಹೆಚ್ಚಿಸಲಾಗಿದೆ. ಇದಕ್ಕಿಂತ ಹೆಚ್ಚಿನ ದುಡಿಮೆ ಮಾಡಿಸುವಂತಿಲ್ಲ ಎಂದು ಸೂಚಿಸಲಾಗಿದೆ.</p>.<p>ಕಾಯ್ದೆಯ ಸೆಕ್ಷನ್ 51ರ ಅನುಸಾರ ದಿನಕ್ಕೆ ಗರಿಷ್ಠ 9 ಗಂಟೆಗೂ ಹೆಚ್ಚು ಹೊತ್ತು ದುಡಿಮೆ ಮಾಡಿಸುವಂತಿರಲಿಲ್ಲ. ಆದರೆ, ರಾಜ್ಯದಲ್ಲಿ ಕಾರ್ಮಿಕರ ದುಡಿಮೆಯ ಸರಾಸರಿ ಅವಧಿ 8 ಗಂಟೆಯಷ್ಟಿತ್ತು. ಈಗ 10 ಗಂಟೆಗೆ ಹೆಚ್ಚಿಸಿರುವುದರಿಂದಾಗಿ ದಿನದ ಶ್ರಮ 2 ಗಂಟೆ ಹೆಚ್ಚಳವಾಗಲಿದೆ ಎಂದು ಕಾರ್ಮಿಕ ಸಂಘಟನೆ ಪ್ರಮುಖರು ಹೇಳಿದ್ದಾರೆ.</p>.<p>ಸೆಕ್ಷನ್ 59 ರ ಅನ್ವಯ ಒವರ್ ಟೈಮ್(ಒ.ಟಿ) ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದು ಯಥಾ ಪ್ರಕಾರ ಮುಂದುವರಿ<br />ಯುತ್ತದೆ. ಈ ಆದೇಶವು ಮೇ 22ರಿಂದ ಆಗಸ್ಟ್ 21 ರವರೆಗೆಅಂದರೆ, 3 ತಿಂಗಳು ಗಳಿಗೆ ಮಾತ್ರ ಅನ್ವಯವಾಗಲಿದೆ.</p>.<p>‘ಲಾಕ್ಡೌನ್ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಬಂದ್ ಆಗಿದ್ದರಿಂದ ನಷ್ಟಕ್ಕೆ ತುತ್ತಾಗಿದ್ದೇವೆ. ನಷ್ಟ ಭರಿಸಲು ಉತ್ಪಾದನೆ ಹೆಚ್ಚಿಸುವ ಅನಿವಾರ್ಯತೆ ಇದೆ. ಆದ್ದರಿಂದ ಕಾರ್ಮಿಕರ ಕೆಲಸದ ಅವಧಿಯನ್ನು ತಾತ್ಕಾಲಿಕವಾಗಿಯಾದರೂ ಹೆಚ್ಚಿಸಬೇಕು’ ಎಂದು ಉದ್ಯಮಿಗಳು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು.</p>.<p>ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶ ಸರ್ಕಾರವು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದೇ ಮಾದರಿಯನ್ನು ಕರ್ನಾಟಕ<br />ದಲ್ಲಿಯೂ ತರಲು ರಾಜ್ಯ ಸರ್ಕಾರ ಮುಂದಾಗಿತ್ತು.</p>.<p>ಕಾಯ್ದೆಗೆ ತಿದ್ದುಪಡಿ ಮಾಡಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದರು. ರಾಜ್ಯದ ಎಲ್ಲ ಕಾರ್ಮಿಕ ಸಂಘಟನೆಗಳೂ ಸರ್ಕಾರದ ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.</p>.<p>ಶ್ರಮಿಕರ ದುಡಿಮೆಯ ಅವಧಿಯನ್ನು ಹೆಚ್ಚಿಸಿರುವ ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳು, ಉದ್ಯಮಿಗಳಿಗೆ ಮಣೆ ಹಾಕಿ, ಕಾರ್ಮಿಕರನ್ನು ಬಲಿ ಕೊಡಲು ಹೊರಟಿದೆ</p>.<p><strong>-ಕೆ.ಎನ್. ಉಮೇಶ್ ಸಿಪಿಎಂ, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ</strong></p>.<p>ಕೆಲಸದ ಅವಧಿ ಹೆಚ್ಚಿಸಬೇಕೆಂಬ ಮನವಿಗೆ ಸರ್ಕಾರ ಸ್ಪಂದಿಸಿದೆ. ಕಾರ್ಮಿಕರಿಗೆ ಹೆಚ್ಚುವರಿ ಅವಧಿಯ ವೇತನ (ಒ.ಟಿ) ಕೊಡಲು ಸಿದ್ಧವಿದ್ದೇವೆ<br />-<strong>ಸಿ.ಆರ್. ಜನಾರ್ದನ,ಎಫ್ಕೆಸಿಸಿಐ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಾಜ್ಯದ ಕಾರ್ಖಾನೆಗಳಲ್ಲಿ ಶ್ರಮಿಕರ ದುಡಿಮೆಯ ಅವಧಿಯನ್ನು ಹೆಚ್ಚಳ ಮಾಡಿ ಕಾರ್ಮಿಕ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.</p>.<p>ರಾಜ್ಯದ ಎಲ್ಲ ಕೈಗಾರಿಕೆಗಳಿಗೆ ಕಾರ್ಮಿಕ ಕಾಯ್ದೆಯ ಸೆಕ್ಷನ್ 51 ಮತ್ತು 54 ರಿಂದ ವಿನಾಯಿತಿ ನೀಡಲಾಗಿದೆ. ಈ ಮೂಲಕ ಒಂದು ದಿನದಲ್ಲಿ ಗರಿಷ್ಠ 9 ಗಂಟೆ ಇದ್ದ ದುಡಿಮೆ ಅವಧಿಯನ್ನು 10 ಗಂಟೆಗೆ ಹಾಗೂ ಒಂದು ವಾರದಲ್ಲಿ 48 ಗಂಟೆಗಳಷ್ಟಿದ್ದ ಗರಿಷ್ಠ ದುಡಿಮೆ ಅವಧಿಯನ್ನು 60 ಗಂಟೆಗೆ ಹೆಚ್ಚಿಸಲಾಗಿದೆ. ಇದಕ್ಕಿಂತ ಹೆಚ್ಚಿನ ದುಡಿಮೆ ಮಾಡಿಸುವಂತಿಲ್ಲ ಎಂದು ಸೂಚಿಸಲಾಗಿದೆ.</p>.<p>ಕಾಯ್ದೆಯ ಸೆಕ್ಷನ್ 51ರ ಅನುಸಾರ ದಿನಕ್ಕೆ ಗರಿಷ್ಠ 9 ಗಂಟೆಗೂ ಹೆಚ್ಚು ಹೊತ್ತು ದುಡಿಮೆ ಮಾಡಿಸುವಂತಿರಲಿಲ್ಲ. ಆದರೆ, ರಾಜ್ಯದಲ್ಲಿ ಕಾರ್ಮಿಕರ ದುಡಿಮೆಯ ಸರಾಸರಿ ಅವಧಿ 8 ಗಂಟೆಯಷ್ಟಿತ್ತು. ಈಗ 10 ಗಂಟೆಗೆ ಹೆಚ್ಚಿಸಿರುವುದರಿಂದಾಗಿ ದಿನದ ಶ್ರಮ 2 ಗಂಟೆ ಹೆಚ್ಚಳವಾಗಲಿದೆ ಎಂದು ಕಾರ್ಮಿಕ ಸಂಘಟನೆ ಪ್ರಮುಖರು ಹೇಳಿದ್ದಾರೆ.</p>.<p>ಸೆಕ್ಷನ್ 59 ರ ಅನ್ವಯ ಒವರ್ ಟೈಮ್(ಒ.ಟಿ) ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದು ಯಥಾ ಪ್ರಕಾರ ಮುಂದುವರಿ<br />ಯುತ್ತದೆ. ಈ ಆದೇಶವು ಮೇ 22ರಿಂದ ಆಗಸ್ಟ್ 21 ರವರೆಗೆಅಂದರೆ, 3 ತಿಂಗಳು ಗಳಿಗೆ ಮಾತ್ರ ಅನ್ವಯವಾಗಲಿದೆ.</p>.<p>‘ಲಾಕ್ಡೌನ್ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಬಂದ್ ಆಗಿದ್ದರಿಂದ ನಷ್ಟಕ್ಕೆ ತುತ್ತಾಗಿದ್ದೇವೆ. ನಷ್ಟ ಭರಿಸಲು ಉತ್ಪಾದನೆ ಹೆಚ್ಚಿಸುವ ಅನಿವಾರ್ಯತೆ ಇದೆ. ಆದ್ದರಿಂದ ಕಾರ್ಮಿಕರ ಕೆಲಸದ ಅವಧಿಯನ್ನು ತಾತ್ಕಾಲಿಕವಾಗಿಯಾದರೂ ಹೆಚ್ಚಿಸಬೇಕು’ ಎಂದು ಉದ್ಯಮಿಗಳು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು.</p>.<p>ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶ ಸರ್ಕಾರವು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದೇ ಮಾದರಿಯನ್ನು ಕರ್ನಾಟಕ<br />ದಲ್ಲಿಯೂ ತರಲು ರಾಜ್ಯ ಸರ್ಕಾರ ಮುಂದಾಗಿತ್ತು.</p>.<p>ಕಾಯ್ದೆಗೆ ತಿದ್ದುಪಡಿ ಮಾಡಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದರು. ರಾಜ್ಯದ ಎಲ್ಲ ಕಾರ್ಮಿಕ ಸಂಘಟನೆಗಳೂ ಸರ್ಕಾರದ ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.</p>.<p>ಶ್ರಮಿಕರ ದುಡಿಮೆಯ ಅವಧಿಯನ್ನು ಹೆಚ್ಚಿಸಿರುವ ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳು, ಉದ್ಯಮಿಗಳಿಗೆ ಮಣೆ ಹಾಕಿ, ಕಾರ್ಮಿಕರನ್ನು ಬಲಿ ಕೊಡಲು ಹೊರಟಿದೆ</p>.<p><strong>-ಕೆ.ಎನ್. ಉಮೇಶ್ ಸಿಪಿಎಂ, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ</strong></p>.<p>ಕೆಲಸದ ಅವಧಿ ಹೆಚ್ಚಿಸಬೇಕೆಂಬ ಮನವಿಗೆ ಸರ್ಕಾರ ಸ್ಪಂದಿಸಿದೆ. ಕಾರ್ಮಿಕರಿಗೆ ಹೆಚ್ಚುವರಿ ಅವಧಿಯ ವೇತನ (ಒ.ಟಿ) ಕೊಡಲು ಸಿದ್ಧವಿದ್ದೇವೆ<br />-<strong>ಸಿ.ಆರ್. ಜನಾರ್ದನ,ಎಫ್ಕೆಸಿಸಿಐ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>