<p><strong>ಬೆಂಗಳೂರು:</strong> ‘ಶಿವನು ವೇದ ಮೂಲದವನಲ್ಲ ಎನ್ನುವುದಾದರೂ ನಿಮಗೆ ಗೊತ್ತಿದೆಯೇ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಅವರು ಬಿಜೆಪಿಯ ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದ್ದಾರೆ.</p>.<p>‘ಪ್ರತಾಪ ಅವರೆ, ‘ಕಾವಿಧಾರಿಗಳೆ ನಿಮ್ಮ ದೇವರು ಯಾವುದು’ ಎಂದು ಪ್ರಶ್ನಿಸಿದ್ದೀರಿ. ಲಿಂಗಾಯತರ ‘ಶಿವ’ ಎಂಬ ದೇವರು, ‘ವೈದಿಕ’ರ ಶಿವನಲ್ಲ. ಋಗ್ವೇದದಲ್ಲಿ ಬರುವ ರುದ್ರನನ್ನು ನೀವೇ ಬಹುಕಾಲದ ನಂತರ ಶಿವ ಎಂದು ಹಲುಬಿದಿರಿ. ಆಗಮ ಮೂಲದ ಶಿವನೂ ನಿಮ್ಮ ಅನರ್ಥ ಅರ್ಥೈಸುವಿಕೆಯಿಂದ ಭಗ್ನನಾದನು. ಆ ನಂತರ ಬಂದ ಶ್ವೇತಾಶ್ವರ ಉಪನಿಷತ್ತಿನಲ್ಲಿ ಶಿವನ ಬಗ್ಗೆ ಒಂದಿಷ್ಟು ಮಾಹಿತಿಯಿದೆ. ಆದಾಗ್ಯೂ, ಹರಪ್ಪ, ಮಹೆಂಜದಾರೋಗಳ ಉತ್ಖನನದಲ್ಲಿ ದೊರೆತ ಶಿವಲಿಂಗಗಳು ವೇದಪೂರ್ವ ಕಾಲದವು ಎಂಬುದು ಜಗತ್ತೇ ತಿಳಿದಿದೆ’ ಎಂದಿದ್ದಾರೆ.</p>.<p>‘ಲಿಂಗಾಯತರ ಶಿವ ಬೂದಿಬಡುಕನಲ್ಲ. ಸ್ಮಶಾನದಲ್ಲಿ ಪಿಶಾಚಿಯಂತೆ ತಿರುಗುವವನಲ್ಲ. ಇವೆಲ್ಲ ಒಬ್ಬ ಶಿವನಿಗೆ ಕೊಟ್ಟ ಹೆಸರುಗಳು, ಹೆಸರಿಗೊಂದರಂತೆ ಬರೆದ ಕತೆಗಳು ಮತ್ತು ಶೈವ ಪುರಾಣಗಳ ಸೃಷ್ಟಿಗಳು. ಲಿಂಗಾಯತ ಶರಣರು ಈ ಪುರಾಣಗಳನ್ನು, ‘ಪುಂಡರ ಗೋಷ್ಠಿಗಳು’ ಎಂದು ಅವುಗಳನ್ನು ತಿರಸ್ಕರಿಸಿದ್ದಾರೆ’ ಎಂದಿದ್ದಾರೆ.</p>.<p>‘ನಿಮ್ಮ ಸ್ವರ್ಗ–ನರಕಗಳನ್ನು ಶರಣರು ಅಲ್ಲಗೆಳೆದಿದ್ದಾರೆ. ಅಲ್ಲಮರ ವಚನಗಳಂತೂ ಕರ್ಮ ಮತ್ತು ಪುನರ್ಜನ್ಮ ಸಿದ್ಧಾಂತಗಳನ್ನು ತಿರಸ್ಕರಿಸುತ್ತವೆ. ಆದ್ದರಿಂದಲೇ ಲಿಂಗಾಯತರು ಸತ್ತಾಗ ‘ಲಿಂಗೈಕ್ಯ’ರಾಗುತ್ತಾರೆ. ವೀರಶೈವರು ಸತ್ತರೆ ‘ಸ್ವರ್ಗವಾಸಿ’ ಇಲ್ಲವೆ ‘ಕೈಲಾಸ ವಾಸಿ’ಯಾಗುತ್ತಾರೆ’ ಎಂದು ಜಾಮದಾರ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಶಿವನು ವೇದ ಮೂಲದವನಲ್ಲ ಎನ್ನುವುದಾದರೂ ನಿಮಗೆ ಗೊತ್ತಿದೆಯೇ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಅವರು ಬಿಜೆಪಿಯ ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದ್ದಾರೆ.</p>.<p>‘ಪ್ರತಾಪ ಅವರೆ, ‘ಕಾವಿಧಾರಿಗಳೆ ನಿಮ್ಮ ದೇವರು ಯಾವುದು’ ಎಂದು ಪ್ರಶ್ನಿಸಿದ್ದೀರಿ. ಲಿಂಗಾಯತರ ‘ಶಿವ’ ಎಂಬ ದೇವರು, ‘ವೈದಿಕ’ರ ಶಿವನಲ್ಲ. ಋಗ್ವೇದದಲ್ಲಿ ಬರುವ ರುದ್ರನನ್ನು ನೀವೇ ಬಹುಕಾಲದ ನಂತರ ಶಿವ ಎಂದು ಹಲುಬಿದಿರಿ. ಆಗಮ ಮೂಲದ ಶಿವನೂ ನಿಮ್ಮ ಅನರ್ಥ ಅರ್ಥೈಸುವಿಕೆಯಿಂದ ಭಗ್ನನಾದನು. ಆ ನಂತರ ಬಂದ ಶ್ವೇತಾಶ್ವರ ಉಪನಿಷತ್ತಿನಲ್ಲಿ ಶಿವನ ಬಗ್ಗೆ ಒಂದಿಷ್ಟು ಮಾಹಿತಿಯಿದೆ. ಆದಾಗ್ಯೂ, ಹರಪ್ಪ, ಮಹೆಂಜದಾರೋಗಳ ಉತ್ಖನನದಲ್ಲಿ ದೊರೆತ ಶಿವಲಿಂಗಗಳು ವೇದಪೂರ್ವ ಕಾಲದವು ಎಂಬುದು ಜಗತ್ತೇ ತಿಳಿದಿದೆ’ ಎಂದಿದ್ದಾರೆ.</p>.<p>‘ಲಿಂಗಾಯತರ ಶಿವ ಬೂದಿಬಡುಕನಲ್ಲ. ಸ್ಮಶಾನದಲ್ಲಿ ಪಿಶಾಚಿಯಂತೆ ತಿರುಗುವವನಲ್ಲ. ಇವೆಲ್ಲ ಒಬ್ಬ ಶಿವನಿಗೆ ಕೊಟ್ಟ ಹೆಸರುಗಳು, ಹೆಸರಿಗೊಂದರಂತೆ ಬರೆದ ಕತೆಗಳು ಮತ್ತು ಶೈವ ಪುರಾಣಗಳ ಸೃಷ್ಟಿಗಳು. ಲಿಂಗಾಯತ ಶರಣರು ಈ ಪುರಾಣಗಳನ್ನು, ‘ಪುಂಡರ ಗೋಷ್ಠಿಗಳು’ ಎಂದು ಅವುಗಳನ್ನು ತಿರಸ್ಕರಿಸಿದ್ದಾರೆ’ ಎಂದಿದ್ದಾರೆ.</p>.<p>‘ನಿಮ್ಮ ಸ್ವರ್ಗ–ನರಕಗಳನ್ನು ಶರಣರು ಅಲ್ಲಗೆಳೆದಿದ್ದಾರೆ. ಅಲ್ಲಮರ ವಚನಗಳಂತೂ ಕರ್ಮ ಮತ್ತು ಪುನರ್ಜನ್ಮ ಸಿದ್ಧಾಂತಗಳನ್ನು ತಿರಸ್ಕರಿಸುತ್ತವೆ. ಆದ್ದರಿಂದಲೇ ಲಿಂಗಾಯತರು ಸತ್ತಾಗ ‘ಲಿಂಗೈಕ್ಯ’ರಾಗುತ್ತಾರೆ. ವೀರಶೈವರು ಸತ್ತರೆ ‘ಸ್ವರ್ಗವಾಸಿ’ ಇಲ್ಲವೆ ‘ಕೈಲಾಸ ವಾಸಿ’ಯಾಗುತ್ತಾರೆ’ ಎಂದು ಜಾಮದಾರ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>