‘ಹಾಲಿ ಸಂಸದ ನಾರಾಯಣಸ್ವಾಮಿ ಅವರು ರಾಷ್ಟ್ರ ರಾಜಕಾರಣಕ್ಕಿಂತ ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಆದ್ದರಿಂದ, ಅವರು ಸ್ಪರ್ಧೆ ಮಾಡುವುದಿಲ್ಲ. ಚಿತ್ರದುರ್ಗ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಮತ್ತು ಪದಾಧಿಕಾರಿಗಳು ಗೋವಿಂದ ಕಾರಜೋಳ ಅನುಭವಸ್ಥರು, 30 ವರ್ಷಗಳಿಂದ ಅವರನ್ನು ನೋಡಿದ್ದೇವೆ. ಅವರು ಸ್ಪರ್ಧಿಸುವುದು ಒಳಿತು ಎಂದು ನನ್ನ ಹೆಸರು ಶಿಫಾರಸು ಮಾಡಿದರು. ಪಕ್ಷದ ವರಿಷ್ಠರೂ ಅದಕ್ಕೆ ಸಹಮತ ನೀಡಿ ಚಿತ್ರದುರ್ಗದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ’ ಎಂದರು.