ಪರಂಪರೆ ಪುರಾತತ್ವ ಇಲಾಖೆ ಆಯುಕ್ತ ಎ.ದೇವರಾಜು ಮಾತನಾಡಿ ‘ಕೇಂದ್ರ ಸರ್ಕಾರವು ಜ್ಞಾನಭಾರತಂ ಯೋಜನೆಯಡಿ ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಒತ್ತು ನೀಡಿದೆ. ಕೇಂದ್ರ ಸಂಸ್ಕೃತಿ ಇಲಾಖೆ ಆರ್ಥಿಕ ನೆರವು ನೀಡಲಿದೆ. ಹಸ್ತ ಪ್ರತಿ ಇಟ್ಟುಕೊಂಡುವವರು ನಮಗೇ ಇದನ್ನು ನೀಡಬೇಕಿಲ್ಲ. ಮಾಹಿತಿ ಒದಗಿಸಿದರೆ ಒಪ್ಪಂದ ಮಾಡಿಕೊಂಡ ಸಂಸ್ಥೆ ಮೂಲಕವೇ ಡಿಜಿಟಲೀಕರಣ ಪ್ರಕ್ರಿಯೆ ಮುಗಿಸಿ ಸಂಬಂಧಪಟ್ಟವರಿಗೆ ಹಿಂದುರಿಗಿಸಲಾಗುತ್ತದೆ. ಬೌದ್ಧಿಕ ಹಕ್ಕು ಸ್ವಾಮ್ಯದ ಅಡಿ ಹಸ್ತಪ್ರತಿ ಬಳಸಿದವರಿಂದ ಸಂಗ್ರಹಕಾರರಿಗೆ ಆದಾಯವೂ ಬರಬಹುದು’ ಎಂದು ಹೇಳಿದರು.