‘ನರೇಗ ಅಡಿ ಪರಿಶಿಷ್ಟ ಜಾತಿ, ಪಂಗಡ, ಅಲೆಮಾರಿ, ಬುಡಕಟ್ಟು, ಬಿಪಿಎಲ್ ಕಾರ್ಡುದಾರರಿಗೆ ಸೌಲಭ್ಯ ನೀಡಬಹುದು. ಅವರಿಗೆ ನೀಡಿದ ಬಳಿಕ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸೌಲಭ್ಯ ಕೊಡಬಹುದು ಎಂಬ ನಿಯಮವಿದೆ. ನಿಮ್ಮಷ್ಟಕ್ಕೆ ನೀವೇ ಅದನ್ನು ಮೀರಿದ್ದೀರಿ. ಆ ಮೂಲಕ ಜಿಲ್ಲೆಯ ಸುಮಾರು 5 ಸಾವಿರ ರೈತರಿಗೆ ನಷ್ಟ ಉಂಟು ಮಾಡಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.