<p><strong>ಬೆಂಗಳೂರು</strong>: ಕಳೆದ ಒಂದು ವಾರದಿಂದ ತಾಂತ್ರಿಕ ಸಮಸ್ಯೆಗೆ ತುತ್ತಾಗಿದ್ದ ಕಾವೇರಿ 2.0 ತಂತ್ರಾಂಶವನ್ನು ಸರಿಪಡಿಸಲಾಗಿದ್ದು, ತಂತ್ರಾಂಶವು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.</p>.<p>ತಾಂತ್ರಿಕ ಸಮಸ್ಯೆ ಕಾರಣಕ್ಕೆ ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತು ಇಸಿ/ಸಿಸಿ ಸೇವೆಗಳ ಮೇಲೂ ಪರಿಣಾಮ ಉಂಟಾಗಿತ್ತು. ಇದರಿಂದ ಆದಾಯ ಸಂಗ್ರಹವೂ ಕಡಿಮೆ ಆಗಿತ್ತು. ಮುಂದೆ ಈ ರೀತಿಯ ತಾಂತ್ರಿಕ ಸಮಸ್ಯೆಗಳಿಂದ ಆಗಬಹುದಾದ ಆಪಾಯ ತಪ್ಪಿಸಲು ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಫೆ.1 ರಂದು ತಾಂತ್ರಿಕ ಸಮಸ್ಯೆ ಕಾರಣ ನೋಂದಣಿಗಳ ಪ್ರಮಾಣ 556 ಇಳಿದಿತ್ತು. ಇಸಿ (ಋಣಭಾರ ಪ್ರಮಾಣ ಪತ್ರ)1,649 ಮತ್ತು ಸಿಸಿ (ದೃಢೀಕರಣ ಪತ್ರ) 405 ನೀಡಲಾಗಿದ್ದು, ₹15.19 ಕೋಟಿ ಸಂಗ್ರಹ ಆಗಿತ್ತು. ಫೆ.3 ರಂದು ತುರ್ತುಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಸ್ವಲ್ಪ ಮಟ್ಟಿನ ಸುಧಾರಣೆ ಆದರೂ, ಫೆ.4 ರಂದು ಮತ್ತೊಮ್ಮೆ ಕಡಿಮೆ ಆಗಲಾರಂಭಿಸಿತು. ಫೆ.5 ರಂದು 7,225 ನೋಂದಣಿಗಳಾಗಿದ್ದು ₹62.59 ಕೋಟಿ ಸಂಗ್ರಹ ಆಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕಳೆದ ಒಂದು ವಾರದಿಂದ ತಾಂತ್ರಿಕ ಸಮಸ್ಯೆಗೆ ತುತ್ತಾಗಿದ್ದ ಕಾವೇರಿ 2.0 ತಂತ್ರಾಂಶವನ್ನು ಸರಿಪಡಿಸಲಾಗಿದ್ದು, ತಂತ್ರಾಂಶವು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.</p>.<p>ತಾಂತ್ರಿಕ ಸಮಸ್ಯೆ ಕಾರಣಕ್ಕೆ ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತು ಇಸಿ/ಸಿಸಿ ಸೇವೆಗಳ ಮೇಲೂ ಪರಿಣಾಮ ಉಂಟಾಗಿತ್ತು. ಇದರಿಂದ ಆದಾಯ ಸಂಗ್ರಹವೂ ಕಡಿಮೆ ಆಗಿತ್ತು. ಮುಂದೆ ಈ ರೀತಿಯ ತಾಂತ್ರಿಕ ಸಮಸ್ಯೆಗಳಿಂದ ಆಗಬಹುದಾದ ಆಪಾಯ ತಪ್ಪಿಸಲು ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>ಫೆ.1 ರಂದು ತಾಂತ್ರಿಕ ಸಮಸ್ಯೆ ಕಾರಣ ನೋಂದಣಿಗಳ ಪ್ರಮಾಣ 556 ಇಳಿದಿತ್ತು. ಇಸಿ (ಋಣಭಾರ ಪ್ರಮಾಣ ಪತ್ರ)1,649 ಮತ್ತು ಸಿಸಿ (ದೃಢೀಕರಣ ಪತ್ರ) 405 ನೀಡಲಾಗಿದ್ದು, ₹15.19 ಕೋಟಿ ಸಂಗ್ರಹ ಆಗಿತ್ತು. ಫೆ.3 ರಂದು ತುರ್ತುಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಸ್ವಲ್ಪ ಮಟ್ಟಿನ ಸುಧಾರಣೆ ಆದರೂ, ಫೆ.4 ರಂದು ಮತ್ತೊಮ್ಮೆ ಕಡಿಮೆ ಆಗಲಾರಂಭಿಸಿತು. ಫೆ.5 ರಂದು 7,225 ನೋಂದಣಿಗಳಾಗಿದ್ದು ₹62.59 ಕೋಟಿ ಸಂಗ್ರಹ ಆಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>