ಮಂಡ್ಯ: ಪುಲ್ವಾಮಾ ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧ ಎಚ್.ಗುರು ಹುಟ್ಟೂರು ಗುಡಿಗೆರೆ ಕಾಲೊನಿ ಸಮೀಪದ ಭಾರತೀನಗರದಲ್ಲಿ ಅಸ್ಸಾಂ ಮೂಲದ ಕೂಲಿ ಕಾರ್ಮಿಕನೊಬ್ಬ ಭಾನುವಾರ ಪಾಕಿಸ್ತಾನ ಪರ ಘೋಷಣೆ ಕೂಗಿ ಸ್ಥಳೀಯ ಯುವಕರಿಂದ ಏಟು ತಿಂದಿದ್ದಾನೆ.
ಸಾಮಿಲ್ನಲ್ಲಿ ಕೆಲಸ ಮಾಡುವ ಸಾದಿಕ್ (25) ಹಲ್ಲೆಗೆ ಒಳಗಾದವನು. ಒಂದು ವರ್ಷದಿಂದ ಭಾರತೀನಗರದ ಸಾಮಿಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ಬೆಳಿಗ್ಗೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಥಳಿಸಿದ್ದಾರೆ.
ಸಾರ್ವಜನಿಕರು ಆತನಿಂದ ‘ಭಾರತ್ ಮಾತಾ ಕೀ ಜೈ’ ಎಂದು ಹೇಳಿಸಿದ್ದಾರೆ. ಭಾರತ ಪರ ಘೋಷಣೆ ಕೂಗುವಾಗ ಮತ್ತೊಮ್ಮೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಜನರು ಮತ್ತೆ ಥಳಿಸಿದ್ದಾರೆ. ಭಾರತೀನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ಬಂಧಿಸಿದರು.