ಮೈಸೂರು: ದಸರಾ ಮಹೋತ್ಸವ ಅಂಗವಾಗಿ ನಾಡಹಬ್ಬ ಕಣ್ತುಂಬಿಕೊಳ್ಳಲು ಆದಿವಾಸಿಗಳು ಹಾಗೂ ಗ್ರಾಮೀಣ ಪ್ರದೇಶದ ಜನರಿಗೂ ಅವಕಾಶ ಸಿಕ್ಕಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳು 31 ತಾಲ್ಲೂಕುಗಳಿಂದ 11,150 ಮಂದಿಗೆ ದಸರಾ ದರ್ಶನ ಭಾಗ್ಯ ಕಲ್ಪಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಕೋಟೆ ಆಂಜನೇಯ ಸ್ವಾಮಿ ದೇಗುಲದ ಮುಂಭಾಗ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು.
ಮೈಸೂರು ಜಿಲ್ಲೆಯ ಪ್ರತಿ ತಾಲ್ಲೂಕಿಗೆ 9 ಬಸ್ಸು ಹಾಗೂ ಇತರ ಜಿಲ್ಲೆಗಳ ಪ್ರತಿ ತಾಲ್ಲೂಕಿಗೆ 6 ಬಸ್ಸುಗಳನ್ನು ನಿಯೋಜಿಸಲಾಗಿದೆ. ಅರಮನೆ, ಮೃಗಾಲಯ, ರೈತ ದಸರಾ ಹಾಗೂ ಚಾಮುಂಡಿಬೆಟ್ಟ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಬೆಳಿಗ್ಗೆ 6.30ಕ್ಕೆ ಶುರುವಾಗಿ ಸಂಜೆ 7 ಗಂಟೆಗೆ ಕೊನೆಗೊಳ್ಳಲಿದೆ.
ಕಳೆದ ಬಾರಿ ರಿಯಾಯಿತಿ ದರದ ಬಸ್ ಪಾಸ್ ಮೊತ್ತವಾಗಿ ₹ 50 ಪಡೆಯಲಾಗುತಿತ್ತು. ಆದರೆ, ಈ ಬಾರಿ ಸಚಿವರ ಸೂಚನೆಯಂತೆ ಉಚಿತ ವ್ಯವಸ್ಥೆ ಮಾಡಲಾಗಿದೆ.
ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಂ ಡಿ.ಶಂಕರ್, ದಸರಾ ದರ್ಶನ ಉಪಸಮಿತಿ ಕಾರ್ಯಾಧ್ಯಕ್ಷ ಆರ್.ಅಶೋಕ್ ಕುಮಾರ್ ಇದ್ದರು.
ಅಂಕಿ ಅಂಶ * 11,150; ಜನರಿಗೆ ದಸರಾ ದರ್ಶನ * 5; ಜಿಲ್ಲೆಗಳ ಜನರಿಗೆ ಅವಕಾಶ * 70; ಕೆಎಸ್ಆರ್ಟಿಸಿ ಬಸ್ಸುಗಳು * 55; ಜನರು ಪ್ರತಿ ಬಸ್ಸಿನಲ್ಲಿ ಪ್ರಯಾಣ