<p><strong>ಬೆಂಗಳೂರು:</strong> ಬಿಎಂಆರ್ಸಿಎಲ್ ಮೇಲೆ ಒತ್ತಡ ಹಾಕಿ, ಮೆಟ್ರೊ ರೈಲು ಪ್ರಯಾಣದರ ಏರಿಕೆ ಮಾಡಿಸಿದ್ದೇ ರಾಜ್ಯ ಸರ್ಕಾರ. ಆದರೆ ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.</p><p>ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಆರ್ಸಿಎಲ್ಗೆ ₹13,000 ಕೋಟಿಗೆ ಹೆಚ್ಚು ಸಾಲವಿದ್ದು, ಅದರ ಮರುಪಾವತಿ ಮಾಡಬೇಕಿದೆ. ಜತೆಗೆ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚ ಭರಿಸಬೇಕಿದೆ. ಟಿಕೆಟ್ ಮತ್ತು ಟಿಕೆಟ್ಯೇತರ ಮೂಲದಿಂದ ಅಷ್ಟು ಆದಾಯ ಬರುತ್ತಿಲ್ಲ. ಬಿಂಆರ್ಸಿಎಲ್ಗೆ ಸಹಾಯ ಮಾಡಲು ಹಿಂದಿನ ಸರ್ಕಾರಗಳು ಪ್ರತಿ ವರ್ಷ ಸರಾಸರಿ ₹200 ಕೋಟಿಯನ್ನು ನೀಡಿವೆ. ಆದರೆ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಿಎಂಆರ್ಸಿಎಲ್ಗೆ ಹಣ ನೀಡುವುದನ್ನು ನಿಲ್ಲಿಸಿದೆ ಎಂದು ಆರೋಪಿಸಿದರು.</p><p>ಪ್ರತಿ ವರ್ಷ ನೀಡುತ್ತಿದ್ದ ₹200 ಕೋಟಿಯನ್ನು ಹೊಂದಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಗ್ಯಾರಂಟಿಗಳಿಗೆ ಹಣ ನೀಡುತ್ತಿರುವುದರಿಂದ ಬೊಕ್ಕಸ ಖಾಲಿಯಾಗಿದೆ. ಈ ಹಣ ತಾನೇ ಭರಿಸಿಕೊಳ್ಳುವಂತೆ ಬಿಎಂಆರ್ಸಿಎಲ್ ಮೇಲೆ ಒತ್ತಡ ಹೇರಿ, ದರ ಹೆಚ್ಚಳ ಮಾಡಿಸಿದೆ. ಅಲ್ಲದೆ, ಪ್ರತಿ ವರ್ಷವೂ ಸ್ವಯಂಚಾಲಿತವಾಗಿ ದರ ಏರಿಕೆ ಆಗುವಂತೆ ಮಾಡಿಸಿದೆ ಎಂದು ಆರೋಪಿಸಿದರು.</p>.ಮೆಟ್ರೊ ದರ ನಿಗದಿ ಅಧಿಕಾರ ಇವರಿಗಿದೆಯೋ ಅವರಿಗಿದೆಯೋ?: ಕುಮಾರಸ್ವಾಮಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಎಂಆರ್ಸಿಎಲ್ ಮೇಲೆ ಒತ್ತಡ ಹಾಕಿ, ಮೆಟ್ರೊ ರೈಲು ಪ್ರಯಾಣದರ ಏರಿಕೆ ಮಾಡಿಸಿದ್ದೇ ರಾಜ್ಯ ಸರ್ಕಾರ. ಆದರೆ ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.</p><p>ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಆರ್ಸಿಎಲ್ಗೆ ₹13,000 ಕೋಟಿಗೆ ಹೆಚ್ಚು ಸಾಲವಿದ್ದು, ಅದರ ಮರುಪಾವತಿ ಮಾಡಬೇಕಿದೆ. ಜತೆಗೆ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚ ಭರಿಸಬೇಕಿದೆ. ಟಿಕೆಟ್ ಮತ್ತು ಟಿಕೆಟ್ಯೇತರ ಮೂಲದಿಂದ ಅಷ್ಟು ಆದಾಯ ಬರುತ್ತಿಲ್ಲ. ಬಿಂಆರ್ಸಿಎಲ್ಗೆ ಸಹಾಯ ಮಾಡಲು ಹಿಂದಿನ ಸರ್ಕಾರಗಳು ಪ್ರತಿ ವರ್ಷ ಸರಾಸರಿ ₹200 ಕೋಟಿಯನ್ನು ನೀಡಿವೆ. ಆದರೆ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಿಎಂಆರ್ಸಿಎಲ್ಗೆ ಹಣ ನೀಡುವುದನ್ನು ನಿಲ್ಲಿಸಿದೆ ಎಂದು ಆರೋಪಿಸಿದರು.</p><p>ಪ್ರತಿ ವರ್ಷ ನೀಡುತ್ತಿದ್ದ ₹200 ಕೋಟಿಯನ್ನು ಹೊಂದಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಗ್ಯಾರಂಟಿಗಳಿಗೆ ಹಣ ನೀಡುತ್ತಿರುವುದರಿಂದ ಬೊಕ್ಕಸ ಖಾಲಿಯಾಗಿದೆ. ಈ ಹಣ ತಾನೇ ಭರಿಸಿಕೊಳ್ಳುವಂತೆ ಬಿಎಂಆರ್ಸಿಎಲ್ ಮೇಲೆ ಒತ್ತಡ ಹೇರಿ, ದರ ಹೆಚ್ಚಳ ಮಾಡಿಸಿದೆ. ಅಲ್ಲದೆ, ಪ್ರತಿ ವರ್ಷವೂ ಸ್ವಯಂಚಾಲಿತವಾಗಿ ದರ ಏರಿಕೆ ಆಗುವಂತೆ ಮಾಡಿಸಿದೆ ಎಂದು ಆರೋಪಿಸಿದರು.</p>.ಮೆಟ್ರೊ ದರ ನಿಗದಿ ಅಧಿಕಾರ ಇವರಿಗಿದೆಯೋ ಅವರಿಗಿದೆಯೋ?: ಕುಮಾರಸ್ವಾಮಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>