<p><strong>ದಾವಣಗೆರೆ:</strong> ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಮಾನಾಂತರದಲ್ಲಿ ರೈಲು ದ್ವಿಪಥ ಹಳಿ ನಿರ್ಮಾಣಗೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ವಿಶೇಷ ಭೂಸ್ವಾಧೀನ ಇಲಾಖೆಯು ಮೊದಲ ಹಂತದಲ್ಲಿ ಗುರುತಿಸಲಾಗಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಹಸ್ತಾಂತರವಷ್ಟೇ ಬಾಕಿ ಇದೆ. ಈ ಹಳಿ ನಿರ್ಮಾಣಗೊಂಡರೆ ದಾವಣಗೆರೆಯಿಂದ ಬೆಂಗಳೂರಿಗೆ ಹೋಗುವವರಿಗೆ 60 ಕಿಲೋಮೀಟರ್ ಪಯಣ ಕಡಿಮೆಯಾಗಲಿದೆ.</p>.<p>ತುಮಕೂರು– ಚಿತ್ರದುರ್ಗ–ದಾವಣಗೆರೆ ಜಿಲ್ಲೆಗಳಲ್ಲಿ ಹಾದು ಹೋಗುವಂತೆ ಈ ಹಳಿ ನಿರ್ಮಾಣ ಮಾಡಲು 2013ರಲ್ಲಿ<br />ನಿರ್ಧಾರವಾಗಿತ್ತು. 2018ರಲ್ಲಿ ಅಧಿಕೃತವಾಗಿ ಚಾಲನೆ ದೊರೆತಿತ್ತು. ದಾವಣಗೆರೆ ಮತ್ತು ತುಮಕೂರಿನಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ ಭೂಸ್ವಾಧೀನ ಮಾಡುವ ಅಧಿಕಾರ ನೀಡಲಾಗಿದ್ದರೆ ಚಿತ್ರದುರ್ಗದಲ್ಲಿ ಉಪ ವಿಭಾಗಾಧಿಕಾರಿಗೆ ಈ ಹೊಣೆ ನೀಡಲಾಗಿತ್ತು. ತುಮಕೂರಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದು ಹಳಿ ಕೆಲಸ ಆರಂಭಗೊಂಡಿದೆ. ದಾವಣಗೆರೆಯಲ್ಲಿ ಸ್ವಾಧಿನ ಪ್ರಕ್ರಿಯೆ ಮುಗಿದಿದ್ದು, ರೈಲ್ವೆಗೆ ಹಸ್ತಾಂತರ ಆಗಬೇಕಿದೆ. ಚಿತ್ರದುರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ<br />ನಡೆಯುತ್ತಿದೆ.</p>.<p>ಜಿಲ್ಲೆಯ ಬುಳ್ಳಾಪುರ, ಆನಗೋಡು, ನೀರ್ಥಡಿ, ಹೆಬ್ಬಾಳು, ಹುಣಸೆಕಟ್ಟೆ, ರಂಗವ್ವನಹಳ್ಳಿ, ಪಂಜೇನಹಳ್ಳಿ, ಚಿಕ್ಕನಹಳ್ಳಿ, ತೋಳಹುಣಸೆ, ಕರೆಲಕ್ಕನಹಳ್ಳಿ, ಚಟ್ಟೋಬನಹಳ್ಳಿ, ಕೊಗ್ಗನೂರು, ಹಾಲವರ್ತಿ, ಪಾಮೇನಹಳ್ಳಿ ಈ 14 ಗ್ರಾಮಗಳಲ್ಲಿ ಹೊಸ ಹಳಿ ಹಾದು ಹೋಗಲಿದೆ.</p>.<p>‘ಮೊದಲ ಹಂತದಲ್ಲಿ 209 ಎಕರೆ 18.5 ಗುಂಟೆ ಸ್ವಾಧೀನ ಮಾಡಿಕೊಳ್ಳಬೇಕಿತ್ತು. ಈ ಭೂಮಿಯ ಸ್ವಾಧೀನ ಆಗಿದೆ. ಈಚೆಗೆ ನಡೆದ ವಿಡಿಯೊ ಕಾನ್ಫರೆನ್ಸ್ನಲ್ಲಿ ಈ ವಿಚಾರವನ್ನು ರೈಲ್ವೆಯವರಿಗೆ ತಿಳಿಸಿದ್ದೇವೆ. ಕೆಲವೇ ದಿನಗಳಲ್ಲಿ ರೈಲ್ವೆಯವರಿಗೆ ಹಸ್ತಾಂತರ ನಡೆಯಲಿದೆ’ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮೊದಲ ಹಂತದ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು ₹ 92 ಕೋಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ₹ 82 ಕೋಟಿ ಪರಿಹಾರವಾಗಿ ಭೂಮಿ ನೀಡಿದವರಿಗೆ ಕೊಡಲಾಗಿದೆ. ಉಳಿದ ₹ 10 ಕೋಟಿ ಇತರ ಭೂಸ್ವಾಧೀನ ಪ್ರಕ್ರಿಯೆಯ ಇತರ ಕಾರ್ಯಗಳಿಗೆ ಬಳಕೆಯಾಗಿದೆ ಎಂದು ಮಾಹಿತಿ ನೀಡಿದರು.</p>.<p class="Briefhead"><strong>ಅಭಿಪ್ರಾಯಗಳು</strong></p>.<p>ಈ ರೈಲು ಮಾರ್ಗವಾದರೆ ಬೆಂಗಳೂರಿಗೆ ಪ್ರಯಾಣದ ಸಮಯ, ವೆಚ್ಚ ಕಡಿಮೆಯಾಗುತ್ತದೆ. ಅದಕ್ಕಾಗಿ ಬೇಗ ಭೂಹಸ್ತಾಂತರ ಮಾಡಲು ಡಿಎಸ್ಎಲ್ಒಗೆ ಸೂಚನೆ ನೀಡಿದ್ದೇನೆ.<br />– ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ</p>.<p>ಮೊದಲ ಹಂತದ 209 ಎಕರೆ ಸ್ವಾಧೀನ ಆಗಿದೆ. ಹಸ್ತಾಂತರ ಮಾತ್ರ ಬಾಕಿ ಇದೆ. ಎರಡನೇ ಹಂತದಲ್ಲಿ 27 ಎಕರೆ ವಶಪಡಿಸಿಕೊಳ್ಳಬೇಕು. ಅದಕ್ಕೆ ಫೈನಾನ್ಶಿಯಲ್ ನೋಟಿಫಿಕೇಶನ್ ಆಗಿದೆ.<br />– ರೇಷ್ಮಾ ಹಾನಗಲ್, ಜಿಲ್ಲಾ ವಿಶೇಷ ಭೂಸ್ವಾಧೀನ ಅಧಿಕಾರಿ</p>.<p>ಶೇ 90ರಷ್ಟು ಭೂಮಿ ಹಸ್ತಾಂತರವಾಗದೇ ಕೆಲಸ ಆರಂಭಿಸಲು ಸಾಧ್ಯವಿಲ್ಲ. ಒಮ್ಮೆ ಭೂಮಿ ಹಸ್ತಾಂತರವಾದರೆ ಕೂಡಲೇ ಟೆಂಡರ್ ಕರೆದು ಹಳಿ ನಿರ್ಮಾಣ ಕೆಲಸ ಆರಂಭಿಸಲಾಗುವುದು.<br />– ಮಂಜುನಾಥ, ರೈಲ್ವೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಮಾನಾಂತರದಲ್ಲಿ ರೈಲು ದ್ವಿಪಥ ಹಳಿ ನಿರ್ಮಾಣಗೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ವಿಶೇಷ ಭೂಸ್ವಾಧೀನ ಇಲಾಖೆಯು ಮೊದಲ ಹಂತದಲ್ಲಿ ಗುರುತಿಸಲಾಗಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಹಸ್ತಾಂತರವಷ್ಟೇ ಬಾಕಿ ಇದೆ. ಈ ಹಳಿ ನಿರ್ಮಾಣಗೊಂಡರೆ ದಾವಣಗೆರೆಯಿಂದ ಬೆಂಗಳೂರಿಗೆ ಹೋಗುವವರಿಗೆ 60 ಕಿಲೋಮೀಟರ್ ಪಯಣ ಕಡಿಮೆಯಾಗಲಿದೆ.</p>.<p>ತುಮಕೂರು– ಚಿತ್ರದುರ್ಗ–ದಾವಣಗೆರೆ ಜಿಲ್ಲೆಗಳಲ್ಲಿ ಹಾದು ಹೋಗುವಂತೆ ಈ ಹಳಿ ನಿರ್ಮಾಣ ಮಾಡಲು 2013ರಲ್ಲಿ<br />ನಿರ್ಧಾರವಾಗಿತ್ತು. 2018ರಲ್ಲಿ ಅಧಿಕೃತವಾಗಿ ಚಾಲನೆ ದೊರೆತಿತ್ತು. ದಾವಣಗೆರೆ ಮತ್ತು ತುಮಕೂರಿನಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ ಭೂಸ್ವಾಧೀನ ಮಾಡುವ ಅಧಿಕಾರ ನೀಡಲಾಗಿದ್ದರೆ ಚಿತ್ರದುರ್ಗದಲ್ಲಿ ಉಪ ವಿಭಾಗಾಧಿಕಾರಿಗೆ ಈ ಹೊಣೆ ನೀಡಲಾಗಿತ್ತು. ತುಮಕೂರಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದು ಹಳಿ ಕೆಲಸ ಆರಂಭಗೊಂಡಿದೆ. ದಾವಣಗೆರೆಯಲ್ಲಿ ಸ್ವಾಧಿನ ಪ್ರಕ್ರಿಯೆ ಮುಗಿದಿದ್ದು, ರೈಲ್ವೆಗೆ ಹಸ್ತಾಂತರ ಆಗಬೇಕಿದೆ. ಚಿತ್ರದುರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ<br />ನಡೆಯುತ್ತಿದೆ.</p>.<p>ಜಿಲ್ಲೆಯ ಬುಳ್ಳಾಪುರ, ಆನಗೋಡು, ನೀರ್ಥಡಿ, ಹೆಬ್ಬಾಳು, ಹುಣಸೆಕಟ್ಟೆ, ರಂಗವ್ವನಹಳ್ಳಿ, ಪಂಜೇನಹಳ್ಳಿ, ಚಿಕ್ಕನಹಳ್ಳಿ, ತೋಳಹುಣಸೆ, ಕರೆಲಕ್ಕನಹಳ್ಳಿ, ಚಟ್ಟೋಬನಹಳ್ಳಿ, ಕೊಗ್ಗನೂರು, ಹಾಲವರ್ತಿ, ಪಾಮೇನಹಳ್ಳಿ ಈ 14 ಗ್ರಾಮಗಳಲ್ಲಿ ಹೊಸ ಹಳಿ ಹಾದು ಹೋಗಲಿದೆ.</p>.<p>‘ಮೊದಲ ಹಂತದಲ್ಲಿ 209 ಎಕರೆ 18.5 ಗುಂಟೆ ಸ್ವಾಧೀನ ಮಾಡಿಕೊಳ್ಳಬೇಕಿತ್ತು. ಈ ಭೂಮಿಯ ಸ್ವಾಧೀನ ಆಗಿದೆ. ಈಚೆಗೆ ನಡೆದ ವಿಡಿಯೊ ಕಾನ್ಫರೆನ್ಸ್ನಲ್ಲಿ ಈ ವಿಚಾರವನ್ನು ರೈಲ್ವೆಯವರಿಗೆ ತಿಳಿಸಿದ್ದೇವೆ. ಕೆಲವೇ ದಿನಗಳಲ್ಲಿ ರೈಲ್ವೆಯವರಿಗೆ ಹಸ್ತಾಂತರ ನಡೆಯಲಿದೆ’ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮೊದಲ ಹಂತದ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು ₹ 92 ಕೋಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ₹ 82 ಕೋಟಿ ಪರಿಹಾರವಾಗಿ ಭೂಮಿ ನೀಡಿದವರಿಗೆ ಕೊಡಲಾಗಿದೆ. ಉಳಿದ ₹ 10 ಕೋಟಿ ಇತರ ಭೂಸ್ವಾಧೀನ ಪ್ರಕ್ರಿಯೆಯ ಇತರ ಕಾರ್ಯಗಳಿಗೆ ಬಳಕೆಯಾಗಿದೆ ಎಂದು ಮಾಹಿತಿ ನೀಡಿದರು.</p>.<p class="Briefhead"><strong>ಅಭಿಪ್ರಾಯಗಳು</strong></p>.<p>ಈ ರೈಲು ಮಾರ್ಗವಾದರೆ ಬೆಂಗಳೂರಿಗೆ ಪ್ರಯಾಣದ ಸಮಯ, ವೆಚ್ಚ ಕಡಿಮೆಯಾಗುತ್ತದೆ. ಅದಕ್ಕಾಗಿ ಬೇಗ ಭೂಹಸ್ತಾಂತರ ಮಾಡಲು ಡಿಎಸ್ಎಲ್ಒಗೆ ಸೂಚನೆ ನೀಡಿದ್ದೇನೆ.<br />– ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ</p>.<p>ಮೊದಲ ಹಂತದ 209 ಎಕರೆ ಸ್ವಾಧೀನ ಆಗಿದೆ. ಹಸ್ತಾಂತರ ಮಾತ್ರ ಬಾಕಿ ಇದೆ. ಎರಡನೇ ಹಂತದಲ್ಲಿ 27 ಎಕರೆ ವಶಪಡಿಸಿಕೊಳ್ಳಬೇಕು. ಅದಕ್ಕೆ ಫೈನಾನ್ಶಿಯಲ್ ನೋಟಿಫಿಕೇಶನ್ ಆಗಿದೆ.<br />– ರೇಷ್ಮಾ ಹಾನಗಲ್, ಜಿಲ್ಲಾ ವಿಶೇಷ ಭೂಸ್ವಾಧೀನ ಅಧಿಕಾರಿ</p>.<p>ಶೇ 90ರಷ್ಟು ಭೂಮಿ ಹಸ್ತಾಂತರವಾಗದೇ ಕೆಲಸ ಆರಂಭಿಸಲು ಸಾಧ್ಯವಿಲ್ಲ. ಒಮ್ಮೆ ಭೂಮಿ ಹಸ್ತಾಂತರವಾದರೆ ಕೂಡಲೇ ಟೆಂಡರ್ ಕರೆದು ಹಳಿ ನಿರ್ಮಾಣ ಕೆಲಸ ಆರಂಭಿಸಲಾಗುವುದು.<br />– ಮಂಜುನಾಥ, ರೈಲ್ವೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>