<p><strong>ಜಯಪುರ (ಮೈಸೂರು): </strong>ಇಲ್ಲಿಗೆ ಸಮೀಪದ ತಳೂರು ಗ್ರಾಮದ ರೈತರೊಬ್ಬರು ಪಾಲಿಹೌಸ್ನಲ್ಲಿ 6 ಬಗೆಯ ಜರ್ಬೇರ ಹೂವುಗಳನ್ನು ಬೆಳೆದಿದ್ದು, ಮಾರುಕಟ್ಟೆ ಸಿಗದೆ ಪರಿತಪಿಸುತ್ತಿದ್ದಾರೆ.</p>.<p>ಶುಭ ಸಮಾರಂಭಗಳು ಸ್ಥಗಿತಗೊಂಡಿವೆ. ಸಾಗಣೆ ಸೌಲಭ್ಯವೂ ಇಲ್ಲದೇ ಈ ಹೂವುಗಳಿಗೆ ಬೇಡಿಕೆಯೇ ಇಲ್ಲವಾಗಿದೆ. ಗಿಡದಲ್ಲಿನ ಹೂವನ್ನು ಕೊಯ್ದು, ಕಸದ ತೊಟ್ಟಿಗೆ ಹಾಕಲಾಗುತ್ತಿದೆ.</p>.<p>‘ಪುಣೆಯ ಕೆ.ಎಫ್.ಬಯೊಟೆಕ್ ಕಂಪನಿಯಿಂದ ಒಂದು ಸಸಿಗೆ ₹ 35ರಂತೆ 13 ಸಾವಿರ ಸಸಿಗಳನ್ನು ತಂದು ನಾಟಿ ಮಾಡಿದ್ದೆ. ₹ 14 ಲಕ್ಷ ಖರ್ಚಾಗಿತ್ತು. ಇದೀಗ ಜರ್ಬೇರ ಹೂವು ಅರಳಿ ನಿಂತಿದೆ. ಆದರೆ, ಒಪ್ಪಂದದ ಪ್ರಕಾರ ಬೆಂಗಳೂರಿನ ಹೂವಿನ ರಫ್ತುದಾರರು ಖರೀದಿಗೆ ಬರಲಿಲ್ಲ. ಹೀಗಾಗಿ, ಗಿಡದಿಂದ ಹೂವು ಕಿತ್ತು ಕಸದ ಗುಂಡಿಗೆ ಹಾಕುತ್ತಿದ್ದೇನೆ’ ಎಂದು ಸೋಮಶೇಖರ್ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.</p>.<p>‘ಎಲ್ಲವೂ ಸರಿಯಿದ್ದರೆ ಪುಷ್ಪ ಕೃಷಿಗೆ ಮಾಡಿದ ಸಾಲ ತೀರಿಸಿ, ₹ 10 ಲಕ್ಷ ಲಾಭ ಸಿಗುತ್ತಿತ್ತು. ಆದರೆ ಕೊರೊನಾ ನಮ್ಮ ಬದುಕನ್ನು ಬೀದಿಪಾಲು ಮಾಡಿತು’ ಎಂದು ಕಣ್ಣೀರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಯಪುರ (ಮೈಸೂರು): </strong>ಇಲ್ಲಿಗೆ ಸಮೀಪದ ತಳೂರು ಗ್ರಾಮದ ರೈತರೊಬ್ಬರು ಪಾಲಿಹೌಸ್ನಲ್ಲಿ 6 ಬಗೆಯ ಜರ್ಬೇರ ಹೂವುಗಳನ್ನು ಬೆಳೆದಿದ್ದು, ಮಾರುಕಟ್ಟೆ ಸಿಗದೆ ಪರಿತಪಿಸುತ್ತಿದ್ದಾರೆ.</p>.<p>ಶುಭ ಸಮಾರಂಭಗಳು ಸ್ಥಗಿತಗೊಂಡಿವೆ. ಸಾಗಣೆ ಸೌಲಭ್ಯವೂ ಇಲ್ಲದೇ ಈ ಹೂವುಗಳಿಗೆ ಬೇಡಿಕೆಯೇ ಇಲ್ಲವಾಗಿದೆ. ಗಿಡದಲ್ಲಿನ ಹೂವನ್ನು ಕೊಯ್ದು, ಕಸದ ತೊಟ್ಟಿಗೆ ಹಾಕಲಾಗುತ್ತಿದೆ.</p>.<p>‘ಪುಣೆಯ ಕೆ.ಎಫ್.ಬಯೊಟೆಕ್ ಕಂಪನಿಯಿಂದ ಒಂದು ಸಸಿಗೆ ₹ 35ರಂತೆ 13 ಸಾವಿರ ಸಸಿಗಳನ್ನು ತಂದು ನಾಟಿ ಮಾಡಿದ್ದೆ. ₹ 14 ಲಕ್ಷ ಖರ್ಚಾಗಿತ್ತು. ಇದೀಗ ಜರ್ಬೇರ ಹೂವು ಅರಳಿ ನಿಂತಿದೆ. ಆದರೆ, ಒಪ್ಪಂದದ ಪ್ರಕಾರ ಬೆಂಗಳೂರಿನ ಹೂವಿನ ರಫ್ತುದಾರರು ಖರೀದಿಗೆ ಬರಲಿಲ್ಲ. ಹೀಗಾಗಿ, ಗಿಡದಿಂದ ಹೂವು ಕಿತ್ತು ಕಸದ ಗುಂಡಿಗೆ ಹಾಕುತ್ತಿದ್ದೇನೆ’ ಎಂದು ಸೋಮಶೇಖರ್ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.</p>.<p>‘ಎಲ್ಲವೂ ಸರಿಯಿದ್ದರೆ ಪುಷ್ಪ ಕೃಷಿಗೆ ಮಾಡಿದ ಸಾಲ ತೀರಿಸಿ, ₹ 10 ಲಕ್ಷ ಲಾಭ ಸಿಗುತ್ತಿತ್ತು. ಆದರೆ ಕೊರೊನಾ ನಮ್ಮ ಬದುಕನ್ನು ಬೀದಿಪಾಲು ಮಾಡಿತು’ ಎಂದು ಕಣ್ಣೀರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>