‘ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ ಅವರು ರಾತ್ರೋರಾತ್ರಿ ರಾಜೀನಾಮೆ ಕೊಟ್ಟರು. 130ಕ್ಕೂ ಹೆಚ್ಚು ಸ್ಥಾನಗಳು ಗೆದ್ದು ದೇವರಾಜ ಅರಸು ಮುಖ್ಯಮಂತ್ರಿಯಾದರೂ ಕಾಂಗ್ರೆಸ್ ಪಕ್ಷ ವಿಭಜನೆಯಾಯಿತು. ಗುಂಡೂರಾವ್, ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಬಿಟ್ಟು ಬೇರೆ ಯಾರೂ ಇರಲಿಲ್ಲ. ಆದರೂ ರಾತ್ರೋರಾತ್ರಿ ದೊಡ್ಡ ಬದಲಾವಣೆಯಾಗಿ ಸರ್ಕಾರ ಬಿದ್ದು, ಗುಂಡೂರಾವ್ ಮುಖ್ಯಮಂತ್ರಿಯಾದರು. ಮುಂದೆ ಬಂಗಾರಪ್ಪ, ಮೊಯ್ಲಿ ಅವರೂ ಸಿಎಂ ಆದರು’ ಎಂದು ಸ್ಮರಿಸಿದರು.
‘ರಾಜಕೀಯದಲ್ಲಿ ನಂಬರ್ ಮುಖ್ಯವಲ್ಲ, ರಾಜಕೀಯ ಬೆಳವಣಿಗೆ ಮುಖ್ಯವಾಗುತ್ತದೆ. ಭಿನ್ನಾಭಿಪ್ರಾಯಕ್ಕಿಂತ ರಾಜಕೀಯ ಮಹತ್ವಾಕಾಂಕ್ಷೆಯು ದೂರಗಾಮಿ ಪರಿಣಾಮ ಬೀರುತ್ತದೆ. ರಾಜ್ಯದ ಇತಿಹಾಸ ಗಮನಿಸಿದರೆ ಗೊತ್ತಾಗುತ್ತದೆ. ಫಲಿತಾಂಶ ನಂತರದ ರಾಜಕೀಯ ಬೆಳವಣಿಗೆಗಳನ್ನು ಎದುರು ನೋಡುತ್ತಿದ್ದೇವೆ’ ಎಂದರು.
‘ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವವರಿಗೆ ಪೊಲೀಸ್ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಕ್ಕು, ರಾಜಕೀಯದ ಬಲವೂ ಇರುವುದರಿಂದ ಕೊಲೆ, ಸೂಲಿಗೆ ಹೆಚ್ಚುತ್ತಿದೆ. ನಾಯಕತ್ವದ ಮುಸುಕಿನ ಗುದ್ದಾಟ ಸರ್ಕಾರದ ವಿಫಲತೆಗೆ ಸಾಕ್ಷಿ’ ಎಂದು ವಾಗ್ದಾಳಿ ನಡೆಸಿದರು.