<p><strong>ಬೆಂಗಳೂರು</strong>: ಜಿಎಸ್ಟಿ ಪಾವತಿ ಮಾಡದೆ ದೆಹಲಿಯಿಂದ ಬೆಂಗಳೂರಿಗೆ ರೈಲಿನ ಮೂಲಕ ಕಳ್ಳಸಾಗಣೆ ಮಾಡಲಾಗಿದ್ದ ₹1 ಕೋಟಿ ಮೌಲ್ಯದ ಪಾನ್ ಮಸಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.</p>.<p>‘ಖಚಿತ ಮಾಹಿತಿಯ ಆಧಾರದ ಮೇಲೆ ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ಗುರುವಾರ ಕಾರ್ಯಾಚರಣೆ ನಡೆಸಲಾಯಿತು. ದೆಹಲಿಯಿಂದ ಬಂದಿದ್ದ ರೈಲಿನಿಂದ ಇಳಿಸಿದ್ದ ಚೀಲಗಳನ್ನು ಪ್ಲಾಟ್ಫಾರ್ಮ್ನಲ್ಲಿ ಇರಿಸಲಾಗಿತ್ತು ಮತ್ತು ಕೆಲವು ಚೀಲಗಳನ್ನು ಟ್ರಕ್ಗೆ ತುಂಬಿಸಲಾಗಿತ್ತು’ ಎಂದು ವಾಣಿಜ್ಯ ತೆರಿಗೆ ಇಲಾಖೆಯು ತಿಳಿಸಿದೆ.</p>.<p>‘ಆ ಎಲ್ಲ ಚೀಲಗಳ ವಿವರವನ್ನು ಪರಿಶೀಲಿಸಿದಾಗ, ಅವುಗಳಿಗೆ ಜಿಎಸ್ಟಿ ಪಾವತಿ ಮಾಡಿಲ್ಲ ಎಂಬುದು ಪತ್ತೆಯಾಯಿತು. ₹1 ಕೋಟಿ ಮೌಲ್ಯದ 850 ಚೀಲಗಳನ್ನು ಹೀಗೆ ಕಳ್ಳಸಾಗಣೆ ಮಾಡಲಾಗಿತ್ತು. ಅವುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಇಲಾಖೆ ತಿಳಿಸಿದೆ.</p>.<p>‘ಈ ಹಿಂದೆಯೂ ಗುಂಪೊಂದು ದೆಹಲಿಯಿಂದ ಟ್ರಕ್ಗಳ ಮೂಲಕ ಬೆಂಗಳೂರಿಗೆ ಪಾನ್ ಮಸಾಲ ಕಳ್ಳಸಾಗಣೆ ಮಾಡುತ್ತಿತ್ತು. ಕೆಲ ತಿಂಗಳ ಹಿಂದೆ ಹಲವು ಟ್ರಕ್ಗಳನ್ನು ಪತ್ತೆ ಮಾಡಿ, ಸುಮಾರು ₹20 ಕೋಟಿ ಮೌಲ್ಯದಷ್ಟು ಪಾನ್ ಮಸಾಲ ವಶಕ್ಕೆ ಪಡೆಯಲಾಗಿತ್ತು. ಆನಂತರ ರಸ್ತೆ ಮಾರ್ಗದಲ್ಲಿ ತಪಾಸಣೆ ಬಿಗಿಗೊಳಿಸಲಾಯಿತು. ಈಗ ಆ ಗುಂಪು ರೈಲು ಮಾರ್ಗವನ್ನು ಕಳ್ಳಸಾಗಣೆಗೆ ಬಳಸಿಕೊಳ್ಳುತ್ತಿರುವ ಶಂಕೆ ಇದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಜಿಎಸ್ಟಿ ಪಾವತಿ ಮಾಡದೆ ದೆಹಲಿಯಿಂದ ಬೆಂಗಳೂರಿಗೆ ರೈಲಿನ ಮೂಲಕ ಕಳ್ಳಸಾಗಣೆ ಮಾಡಲಾಗಿದ್ದ ₹1 ಕೋಟಿ ಮೌಲ್ಯದ ಪಾನ್ ಮಸಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.</p>.<p>‘ಖಚಿತ ಮಾಹಿತಿಯ ಆಧಾರದ ಮೇಲೆ ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ಗುರುವಾರ ಕಾರ್ಯಾಚರಣೆ ನಡೆಸಲಾಯಿತು. ದೆಹಲಿಯಿಂದ ಬಂದಿದ್ದ ರೈಲಿನಿಂದ ಇಳಿಸಿದ್ದ ಚೀಲಗಳನ್ನು ಪ್ಲಾಟ್ಫಾರ್ಮ್ನಲ್ಲಿ ಇರಿಸಲಾಗಿತ್ತು ಮತ್ತು ಕೆಲವು ಚೀಲಗಳನ್ನು ಟ್ರಕ್ಗೆ ತುಂಬಿಸಲಾಗಿತ್ತು’ ಎಂದು ವಾಣಿಜ್ಯ ತೆರಿಗೆ ಇಲಾಖೆಯು ತಿಳಿಸಿದೆ.</p>.<p>‘ಆ ಎಲ್ಲ ಚೀಲಗಳ ವಿವರವನ್ನು ಪರಿಶೀಲಿಸಿದಾಗ, ಅವುಗಳಿಗೆ ಜಿಎಸ್ಟಿ ಪಾವತಿ ಮಾಡಿಲ್ಲ ಎಂಬುದು ಪತ್ತೆಯಾಯಿತು. ₹1 ಕೋಟಿ ಮೌಲ್ಯದ 850 ಚೀಲಗಳನ್ನು ಹೀಗೆ ಕಳ್ಳಸಾಗಣೆ ಮಾಡಲಾಗಿತ್ತು. ಅವುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಇಲಾಖೆ ತಿಳಿಸಿದೆ.</p>.<p>‘ಈ ಹಿಂದೆಯೂ ಗುಂಪೊಂದು ದೆಹಲಿಯಿಂದ ಟ್ರಕ್ಗಳ ಮೂಲಕ ಬೆಂಗಳೂರಿಗೆ ಪಾನ್ ಮಸಾಲ ಕಳ್ಳಸಾಗಣೆ ಮಾಡುತ್ತಿತ್ತು. ಕೆಲ ತಿಂಗಳ ಹಿಂದೆ ಹಲವು ಟ್ರಕ್ಗಳನ್ನು ಪತ್ತೆ ಮಾಡಿ, ಸುಮಾರು ₹20 ಕೋಟಿ ಮೌಲ್ಯದಷ್ಟು ಪಾನ್ ಮಸಾಲ ವಶಕ್ಕೆ ಪಡೆಯಲಾಗಿತ್ತು. ಆನಂತರ ರಸ್ತೆ ಮಾರ್ಗದಲ್ಲಿ ತಪಾಸಣೆ ಬಿಗಿಗೊಳಿಸಲಾಯಿತು. ಈಗ ಆ ಗುಂಪು ರೈಲು ಮಾರ್ಗವನ್ನು ಕಳ್ಳಸಾಗಣೆಗೆ ಬಳಸಿಕೊಳ್ಳುತ್ತಿರುವ ಶಂಕೆ ಇದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>